
ಶಿಡ್ಲಘಟ್ಟ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆಧಾರ ಕಾರ್ಡಿನ ಸಮಸ್ಯೆ ಹೆಚ್ಚಾಗಿದ್ದು, ಶಿಡ್ಲಘಟ್ಟ ನಗರದಲ್ಲಿ ಆಧಾರ್ ಕಾರ್ಡ್ ಕೇಂದ್ರವು ಒಂದೇ ಇರುವ ಕಾರಣದಿಂದ ಸಾರ್ವಜನಿಕರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಹೆಚ್ಚಿನ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಎಚ್ ಶಿವರಾಮೇಗೌಡರ ಬಣ) ಸದಸ್ಯರು ತಹಶೀಲ್ದಾರ್ ರಾಜೀವ್ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಅಧ್ಯಕ್ಷ ಸುನಿಲ್, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ಶ್ರೀಕಾಂತ್, ಅಪ್ಪು, ಶಿವಕುಮಾರ್, ಚೆನ್ನಕೇಶವ, ನಂದ, ಕಾರ್ತಿಕ, ಶ್ರೀನಾಥ್, ಲೋಕಿ, ಮನೋಜ್, ಲಕ್ಷ್ಮಿಪತಿ, ಭುವನ್, ಮಂಜು ಹಾಜರಿದ್ದರು