Home News ಕೃಷಿ ತಂತ್ರಜ್ಞರ ಸಂಸ್ಥೆಗೆ ಭಕ್ತರಹಳ್ಳಿಯ ಡಾ.ಬಿ.ಎನ್.ಅಂಬರೀಷ್ ಆಯ್ಕೆ

ಕೃಷಿ ತಂತ್ರಜ್ಞರ ಸಂಸ್ಥೆಗೆ ಭಕ್ತರಹಳ್ಳಿಯ ಡಾ.ಬಿ.ಎನ್.ಅಂಬರೀಷ್ ಆಯ್ಕೆ

0
B N Ambarish Bhaktarahalli Sidlaghatta Agriculture

ಸುಮಾರು 5000 ಕೃಷಿ ಪದವೀಧರ ಸದಸ್ಯರನ್ನು ಒಳಗೊಂಡ ರಾಜ್ಯದ ಪ್ರತಿಷ್ಠಿತ ಕೃಷಿ ತಂತ್ರಜ್ಞರ ಸಂಸ್ಥೆಯ ವ್ಯವಸ್ಥಾಪನ ಸಮಿತಿಗೆ ನಡೆದ ರಾಜ್ಯಮಟ್ಟದ ಚುನಾವಣೆಯಲ್ಲಿ ಭಕ್ತರಹಳ್ಳಿಯ ಡಾ.ಬಿ.ಎನ್.ಅಂಬರೀಷ್ ಅವರು ಜಯ ಗಳಿಸಿದ್ದಾರೆ.

ಈ ಸದಸ್ಯತ್ವ ಮೂರು ವರ್ಷಗಳ ಅವಧಿಗೆ ಇರುತ್ತದೆ. ಸಮಿತಿಯಲ್ಲಿ ಒಟ್ಟು 15  ಸದಸ್ಯರಿರುತ್ತಾರೆ. ಕೃಷಿ ತಂತ್ರಜ್ಞರ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು ರಾಜ್ಯಾದ್ಯಂತ 20 ಶಾಖೆಗಳನ್ನು ಒಳಗೊಂಡಿದೆ. ರೈತ ಸಮುದಾಯಕ್ಕೆ ಅನುಕೂಲಕರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಸ್ಥೆಯು ಸರ್ಕಾರಕ್ಕೆ ಸಲಹೆ ಮಾರ್ಗಸೂಚಿಗಳನ್ನು ನೀಡುವ ಕಾರ್ಯ ನಿರ್ವಹಿಸುತ್ತಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version