Home News ಲೋಕ ಕಲ್ಯಾಣಾರ್ಥಕ್ಕಾಗಿ ವೇದಪಾರಾಯಣ

ಲೋಕ ಕಲ್ಯಾಣಾರ್ಥಕ್ಕಾಗಿ ವೇದಪಾರಾಯಣ

0
Sidlaghatta Shankara Mutt Veda Parayana

Sidlaghatta : ಶಿಡ್ಲಘಟ್ಟ ನಗರದ ಶಂಕರಮಠದಲ್ಲಿ (Shankara Mutt) ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ವಿಪ್ರ ಪುರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಳಿ ವತಿಯಿಂದ ಆಷಾಢ ಮಾಸದ ಅಂಗವಾಗಿ ಲೋಕಕಲ್ಯಾಣಾರ್ಥಕಾಗಿ ವೇದ ಪಾರಾಯಣ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ವೇದಪಂಡಿತ ಮುತ್ತೂರು ಶಿವಗುರು ಶರ್ಮಾ, “ಆಷಾಢ ಮಾಸದ ಪ್ರಯುಕ್ತ ನಮ್ಮ ಪುರೋಹಿತರ ತಂಡದ ವತಿಯಿಂದ ಲೋಕ ಕಲ್ಯಾಣರ್ಥವಾಗಿ ವೇದ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ವೇದ ಪಾರಾಯಣ ಮಾಡುವ ಮೂಲಕ ಲೋಕದಲ್ಲಿ ಅನಾವೃಷ್ಟಿ ನಾಶವಾಗಿ ಉತ್ತಮ ಮಳೆ ಉಂಟಾಗಿ ನಾಡು ಸಕಲ ಸಮೃದ್ಧಿಯಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ” ಎಂದರು.

ಕಾರ್ಯಕ್ರಮದಲ್ಲಿ ರಾಮ್ ಮೋಹನ್ ಶಾಸ್ತ್ರೀ, ನಾರಾಯಣಮೂರ್ತಿ, ವೈ.ಎನ್. ದಾಶರಥಿ, ಸತ್ಯನಾರಾಯಣ ರಾವ್, ಬಿ.ಕೃಷ್ಣಮೂರ್ತಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version