Home News ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ

ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ

0
Sidlaghatta Basava Jayanti Programme

Sidlaghatta : “ಜಾತಿ-ಧರ್ಮದ ಬೇಧವಿಲ್ಲದೆ ಸಮಾನತೆಯ ಸಮಾಜ ನಿರ್ಮಿಸಲು ಹೋರಾಡಿದ ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತ. ಅವರು ನೀಡಿದ ಸಂದೇಶಗಳು ನಾವು ವಿಶ್ವಭ್ರಾತೃತ್ವದ ದಾರಿಗೆ ನಡೆಯಲು ದಿಕ್ಕು ತೋರಿಸುತ್ತವೆ,” ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿತ್ತು.

ಶಾಸಕರು ಮುಂದುವರೆದು, “12ನೇ ಶತಮಾನದಲ್ಲಿಯೇ ಬಸವಣ್ಣನವರು ಮಾನವ ಸಮಾನತೆಯ ತಾತ್ವಿಕ ನೆಲೆ ನಿರ್ಮಿಸಿದ್ದರು. ಅವರು ಕೊನೆಗಾಲದ ವ್ಯಕ್ತಿಗೂ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಶ್ರಮಿಸಿದರು. ಅವರ ವಚನಗಳು ಕಾಲಾಂತರಕ್ಕೂ ಮಾರ್ಗದೀಪವಾಗಿದೆ,” ಎಂದು ಹೇಳಿದರು.

ಗ್ರೇಡ್–2 ತಹಶೀಲ್ದಾರ್ ಪೂರ್ಣಿಮಾ ಮಾತನಾಡಿ, “ಬಸವಣ್ಣನವರ ವಚನಗಳು ಪಾಠಪುಸ್ತಕಗಳಲ್ಲಿ ಮಾತ್ರವಲ್ಲದೆ ಪ್ರತಿಯೊಬ್ಬನ ದೈನಂದಿನ ಬದುಕಿಗೆ ಅನ್ವಯವಾಗಬೇಕು. ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಈ ತತ್ವಗಳಿಗೆ ಆದ್ಯತೆ ಇದೆ,” ಎಂದು ವಿವರಿಸಿದರು.

ಜಿಲ್ಲಾ ಜಾಗೃತಿ ಸಮಿತಿಯ ಮೇಲೂರು ಮಂಜುನಾಥ್ ಹೇಳಿದರು, “ಬಸವಣ್ಣನವರು ಒಂದು ಸಮಾನತೆಯ ಸಮಾಜದ ಕನಸು ಕಂಡು, ಎಲ್ಲರೂ ನನ್ನವರೇ ಎಂಬ ಭಾವನೆ ಸಾರಿದರು. ಅವರ ಸಂದೇಶ ಇಂದು ಕೂಡ ಸಮಾಜದಲ್ಲಿ ಶಾಂತಿ ಮತ್ತು ಐಕ್ಯತೆಗೆ ಮಾರ್ಗದರ್ಶಿಯಾಗಿದೆ.”

ಬಸವೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಸಿ. ನಂದೀಶ್ ಹೇಳಿದರು, “ಬಸವಣ್ಣನವರು ತಮ್ಮ ವಚನಗಳ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳ ಪಾಠ ನೀಡಿದ್ದಾರೆ. ಜಾತ್ಯತೀತ ಸಮಾಜ, ಸ್ತ್ರೀ-ಪುರುಷ ಸಮಾನತೆ, ಕಾಯಕ-ದಾಸೋಹ, ನಿಸರ್ಗ ಪ್ರೀತಿ, ವಿನಮ್ರತೆ ಮತ್ತು ಭಕ್ತಿಯ ತತ್ತ್ವವನ್ನು ಇಡೀ ವಿಶ್ವಕ್ಕೆ ಬೋಧಿಸಿದರು.”

ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹೇಮಾವತಿ, ಪೌರಾಯುಕ್ತ ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನ, ಸಿಐ ಶ್ರೀನಿವಾಸ್, ಸಮುದಾಯ ಮುಖಂಡರು ಮತ್ತು ಸಾರ್ವಜನಿಕರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version