Home News BJP ಯಲ್ಲಿ ಈಗ ಚೇಲಾಗಳಿಗೆ ಹಾಗೂ ದೊಡ್ಡ ಚೀಲ ಇರುವವರಿಗೆ ಮಾತ್ರ ಸ್ಥಾನಮಾನ

BJP ಯಲ್ಲಿ ಈಗ ಚೇಲಾಗಳಿಗೆ ಹಾಗೂ ದೊಡ್ಡ ಚೀಲ ಇರುವವರಿಗೆ ಮಾತ್ರ ಸ್ಥಾನಮಾನ

0
Sidlaghatta BJP Leader C V Lokesh Party Change

Sidlaghatta : ರಾಜ್ಯ ಮಟ್ಟದ ರೈತ ಸಂಘಟನೆಗಳ ಒಕ್ಕೂಟದ ಮುಖಂಡರುಗಳ ಸಭೆಯಲ್ಲಿ, ರಾಜ್ಯ ರೈತ ಮುಖಂಡರ ಸಮ್ಮುಖದಲ್ಲಿ ಒಕ್ಕೂಟಕ್ಕೆ ಸೇರ್ಪಡೆ ಆಗಿರುತ್ತೇನೆ. ಮುಂದಿನ ನನ್ನ ಜೇವನವನ್ನು ರೈತರ ಅಭಿವೃದ್ಧಿ ಹಾಗೂ ಏಳಿಗೆಗೆ ಮುಡುಪಾಗಿಟ್ಟಿರುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ವಿ.ಲೋಕೇಶ್ ಗೌಡ ತಿಳಿಸಿದರು

ನಗರದಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯ ಮಟ್ಟದ ರೈತ ಸಂಘಟನೆಗಳ ಒಕ್ಕೂಟದ ಮುಖಂಡರುಗಳ ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಹಕಾರ ಸಂಘದ ರಾಜ್ಯ ಅಧ್ಯಕ್ಷ ಹಾಗೂ ಹೋರಾಟಗಾರ ಕುರುಬೂರು ಶಾಂತಕುಮಾರ್ ಹಾಗೂ ಇನ್ನಿತ್ತರ ರಾಜ್ಯ ರೈತ ಮುಖಂಡರ ಸಮ್ಮುಖದಲ್ಲಿ ಒಕ್ಕೂಟಕ್ಕೆ ಸೇರ್ಪಡೆ ಆಗಿರುವೆ.

ದಶಕಗಳ ಕಾಲ ಬಿಜೆಪಿ ಪಕ್ಷದಲ್ಲಿ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೂ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷ ಬೆಳೆಸಲು ನನ್ನ ಕೈಲಾದ ಸೇವೆ ಸಲ್ಲಿಸಿದ್ದೇನೆ. ಈಗ ಮೋದಿಯವರ ಕಾಲಘಟ್ಟದಲ್ಲಿ ಯಾರನ್ನೂ ಬೇಕಾದರೂ ನಿಲ್ಲಿಸಿ ಗೆಲ್ಲಿಸಬಹುದು ಅನ್ನುವ ಸಮಯದಲ್ಲಿಯೂ ಕಾರ್ಯಕರ್ತರಿಗೆ ಮಣೆ ಹಾಕದೆ ಭ್ರಷ್ಟಾಚಾರಿಗಳಿಗೆ ಹಾಗೂ ಹಣವಂತರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಪಕ್ಷದ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತೆ. ಬಿಜೆಪಿಯಲ್ಲಿ ಈಗ ಚೇಲಾಗಳಿಗೆ ಹಾಗೂ ದೊಡ್ಡ ದೊಡ್ಡ ಚೀಲ ಇರುವವರಿಗೆ ಮಾತ್ರ ಸ್ಥಾನಮಾನ ಹಾಗೂ ಟಿಕೆಟ್ ಗಳು. ಈ ಎಲ್ಲಾ ಘಟನೆಗಳಿಂದ ಬೇಸತ್ತು ರಾಜಕೀಯವೇ ಸಾಕು ಈ ದೇಶಕ್ಕೆ ಅನ್ನ ಕೊಡುವ ರೈತನ ಏಳಿಗೆಗೆ ನನ್ನ ಮುಂದಿನ ಜೇವನವನ್ನು ಮುಡುಪಾಗಿಡೋಣ ಎಂದು ನಿರ್ಧರಿಸಿ ರೈತ ಸಂಘಟನೆಗಳ ಒಕ್ಕೂಟಕ್ಕೆ ಸೇರ್ಪಡೆಯಾಗಿರುವೆ ಎಂದು ಹೇಳಿದರು.

ರಾಜ್ಯದ ರೈತರಿಗೇ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಹಾಗೂ ರೈತರನ್ನು ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಆಗಲು ಪ್ರಾಮಾಣಿಕ ಸೇವೆಯನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version