
Muttur, sidlaghatta : ತಾಲ್ಲೂಕಿನ ಮುತ್ತೂರು-ಮೇಲೂರು ಗ್ರಾಮದ ಮಾರ್ಗ ಮಧ್ಯದ ರಸ್ತೆ ಪಕ್ಕದಲ್ಲಿ ಬ್ಯಾಟರಿ ಚಾಲಿತ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಗಳೂರಿನ ಯಶವಂತಪುರದ ಶ್ರೀಹರಿ ಎನ್ನುವವರಿಗೆ ಸೇರಿದ ಬ್ಯಾಟರಿ ಚಾಲಿತ ಕಾರು ಶಾರ್ಟ್ ಸರ್ಕೂಟ್ನಿಂದ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.
ಶ್ರೀಹರಿಯು ಕಂಬದಹಳ್ಳಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಕಾರಿನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ದಾರಿ ಮಧ್ಯೆ ನಿಂತು ಹೋಗಿದೆ. ಕತ್ತಲೆ ಆದ ಕಾರಣ ಬೆಳಗ್ಗೆ ರಿಪೇರಿ ಮಾಡಿಸಿದರೆ ಆಯ್ತು ಎಂದು ತೀರ್ಮಾನಿಸಿ ಕಾರನ್ನು ಅಲ್ಲೇ ಬಿಟ್ಟು ಬೇರೊಂದು ವಾಹನದಲ್ಲಿ ಕಂಬದಹಳ್ಳಿಗೆ ತೆರಳಿದ್ದಾರೆ. ಬೆಳಗ್ಗೆ ಬಂದು ನೋಡಿದಾಗ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.