Home News ಗಾಳಿ ಸಹಿತ ಬಿದ್ದ ಮಳೆಗೆ ಬೆಳೆ ಹಾನಿ

ಗಾಳಿ ಸಹಿತ ಬಿದ್ದ ಮಳೆಗೆ ಬೆಳೆ ಹಾನಿ

0
Sidlaghatta Rain Crop Loss

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಕುತಾಂಡಹಳ್ಳಿ ಗ್ರಾಮದಲ್ಲಿ ರಾತ್ರಿ ಬಿದ್ದ ಮಳೆ ಹಾಗೂ ಬಿರುಗಾಳಿಗೆ ಸಿಲುಕಿ ರೈತರ ಲಕ್ಷಾಂತರ ರೂ ಬೆಳೆ ನಷ್ಟ ಸಂಭವಿಸಿದೆ.

 ಮಂಗಳವಾರ ರಾತ್ರಿ ಕುತಾಂಡಹಳ್ಳಿಯಲ್ಲಿ ಬಿದ್ದ ಭಾರಿ ಮಳೆ, ಬಿರುಗಾಳಿಗೆ ಸಿಲುಕಿ ರೈತ ಮುನೇಗೌಡ ಎಂಬುವರ ತೋಟದಲ್ಲಿ ಸುಮಾರು 3 ಲಕ್ಷ ವೆಚ್ಚದ ಹುರುಳಿಕಾಯಿ ಬೆಳೆ ನಷ್ಟವಾಗಿದೆ. ಹಾಗೆಯೇ ಕುಟುಂಬ ವಾಸವಿದ್ದ ಕೆಲ ಮನೆಗಳ ಮೇಲಿನ ಚಾವಣಿಯು ಸಹ ಹಾರಿಹೋಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾಗ್ಯಮ್ಮ ಅವರ ಕುಟುಂಬ ವಾಸವಿದ್ದ ಮನೆ ಮೇಲಿನ ಚಾವಣಿ ಹಾರಿ ಹೋಗಿದ್ದು ವಾಸಕ್ಕೆ ಮನೆ ಇಲ್ಲದಂತಾಗಿದೆ.

 ಬಿರುಗಾಳಿಗೆ ಸಿಲುಕಿ ರೈತರಾದ ಸೋಣ್ಣಪ್ಪ, ಭಾಗ್ಯಮ್ಮ, ಮಂಜುನಾಥ್  ಅವರಿಗೆ ಸೇರಿದ ಬೆಳೆಗಳು ಹಾಗೂ ತೆಂಗಿನ ಮರಗಳು ಗಾಳಿಗೆ ಸಿಲುಕಿ ಉರುಳಿಬಿದ್ದಿದ್ದು, ರೈತರಿಗೆ ಸಾಕಷ್ಟು ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯವರು ಪರಿಹಾರ ಕಾರ್ಯವನ್ನು ರೂಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version