ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಚನ್ನಪಟ್ಟಣ, ರಾಮನಗರದ ಮಾದರಿಯಲ್ಲಿ ಇ-–ಬೀಡ್ ವ್ಯವಸ್ಥೆಯನ್ನು ಬುಧವಾರದಂದು ಅಧಿಕೃತವಾಗಿ ಚಾಲನೆ ನೀಡಿದ್ದರಾದರೂ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಮತ್ತು ಮಾರುಕಟ್ಟೆಗೆ ಗೂಡು ಹೆಚ್ಚಾಗಿ ಆವಕವಾದ ಕಾರಣ ಗುರುವಾರ ಮಾರುಕಟ್ಟೆಯಲ್ಲಿ ಗೊಂದಲ ಏರ್ಪಟ್ಟಿತ್ತು. ರೇಷ್ಮೆ ಗೂಡನ್ನು ಹಾಕಲು ಜಾಲರಿ ಸಿಗದೇ ಓಡಾಡುವ ದಾರಿಯಲ್ಲೆಲ್ಲಾ ಕೆಲ ರೈತರು ಹಾಕಬೇಕಾದ ಪರಿಸ್ಥಿತಿ ಏರ್ಪಟ್ಟಿದ್ದು, ರೈತರ ಆಕ್ರೋಷಕ್ಕೆ ಕಾರಣವಾಗಿತ್ತು.
ಮಾರುಕಟ್ಟೆಗೆ ಗೂಡು ತರುವಂತಹ ರೈತರು, ಪ್ರತ್ಯೇಕವಾಗಿ ತೆರೆಯಲಾಗಿರುವ ಕೌಂಟರುಗಳಲ್ಲಿ ಅವರು ತಂದಿರುವ ಗೂಡಿನ ಪ್ರಮಾಣ, ಯಾವ ಬಿನ್ನಲ್ಲಿ ರೈತರಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಜಾಲರಿಗಳು ಬೇಕಾಗಿದೆ, ಎಂಬಿತ್ಯಾದಿ ಮಾಹಿತಿಯುಳ್ಳ ರಸೀದಿಯನ್ನು ಪಡೆದುಕೊಂಡ ನಂತರ ರೈತರು ನೇರವಾಗಿ ತಮಗೆ ಕಾಯ್ದಿರಿಸಿರುವ ಜಾಲರಿಗಳಿಗೆ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ.
ಮಾರುಕಟ್ಟೆಯ ಆವರಣದಲ್ಲಿ ವೈಫೈ ತಂತ್ರಜ್ಞಾನವನ್ನು ಅಳವಡಿಸುವುದರಿಂದ ರೀಲರುಗಳೂ ಕೂಡಾ ತಮ್ಮ ಮೊಬೈಲ್ಗಳ ಮುಖಾಂತರವೇ ಗೂಡಿನ ಧರವನ್ನು ನಿಗಧಿ ಮಾಡುತ್ತಾರೆ, ಯಾವ ರೈತನ ಗೂಡು ಎಷ್ಟು ಧರಕ್ಕೆ ಮಾರಾಟವಾಗುತ್ತದೆ ಎಂಬುದರ ಮಾಹಿತಿಯನ್ನು ಟಿ.ವಿ.ಪರದೆಗಳ ಮೇಲಿನ ಸ್ಕ್ರೀನ್ನಲ್ಲಿ ಪ್ರದರ್ಶನ ಮಾಡಲಾಗುತ್ತದೆ, ರೈತರಿಗೆ ಧರದ ಬಗ್ಗೆ ಒಪ್ಪಿಗೆಯಾದರೆ ಮಾತ್ರ, ಧರವನ್ನು ನಿಗದಿಪಡಿಸಲಾಗುತ್ತದೆ.
ಈ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಗುರುವಾರ ನೆರೆಯ ಆಂದ್ರ, ಚನ್ನಪಟ್ಟಣ, ರಾಮನಗರ ಮುಂತಾದ ಕಡೆಗಳಿಂದ ಬರುವಂತಹ ಗೂಡುಗಳಿಗೆ ಮೊದಲೇ ಜಾಲರಿಗಳನ್ನು ನಿಗದಿಪಡಿಸಿರುವುದರಿಂದ ಮಾರುಕಟ್ಟೆಯ ಎಲ್ಲಾ ಜಾಲರಿಗಳಲ್ಲಿ ಅವರೇ ಗೂಡನ್ನು ತುಂಬಿಸಿಕೊಂಡಿದ್ದಾರೆ, ಸ್ಥಳೀಯ ರೈತರು ಬೆಳಗ್ಗೆ ೭ ಗಂಟೆಗೆ ಬಂದರೂ ಕೂಡಾ ಜಾಲರಿಗಳು ಸಿಗದೆ ಗೂಡನ್ನು ಹೊರಗೆ ಹಾಕುವಂತಾಯಿತು.
ನಮಗೆ ಟೋಕನ್ಗಳನ್ನೂ ಕೊಡುತ್ತಿಲ್ಲ, ಜಾಲರಿಗಳೂ ಇಲ್ಲ, ಮಾರುಕಟ್ಟೆಯ ಅಧಿಕಾರಿಗಳು ಮೊದಲೇ ಸ್ಥಳೀಯ ರೈತರುಗಳಿಗೆ ಮಾಹಿತಿಗಳನ್ನು ನೀಡದೆ, ಈ ವ್ಯವಸ್ಥೆಯನ್ನು ಮಾಡಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ, ಕೌಂಟರಿನಲ್ಲಿ ಟೋಕನ್ ತೆಗೆದುಕೊಂಡು ಹೋಗಿ ಜಾಲರಿಗಳಲ್ಲಿ ಹಾಕಿರುವವರ ಗೂಡಿಗೆ ಒಳ್ಳೆಯ ಬೆಲೆ ಬರುತ್ತದೆ, ಹೊರಗೆ ಹಾಕಿರುವ ಗೂಡಿಗೆ ತೀರಾ ಕಡಿಮೆ ಬೆಲೆ ಸಿಗುತ್ತದೆ, ಬಿಸಿಲಿನಲ್ಲಿ ಗೂಡೆಲ್ಲವೂ ಮೆತ್ತಗಾಗುತ್ತಿದೆ ಕಳೆದ ಒಂದು ತಿಂಗಳಿನಿಂದ ಕಷ್ಟಪಟ್ಟು ಬೆಳೆದಿರುವ ಗೂಡು ನಷ್ಟವಾಗಿದ್ದು ನಮಗೆ ನಷ್ಟಪರಿಹಾರವನ್ನು ಕೊಡಬೇಕು ಮುಂದಿನ ಹದಿನೈದು ದಿನಗಳ ಕಾಲ ಯಥಾಸ್ಥಿತಿ ಮುಂದುವರೆಸಿ ರೈತರಿಗೆ ಇ – ಬೀಡ್ನ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರವೇ ಇ – ಬೀಡ್ ಪದ್ಧತಿಯನ್ನು ಅಳವಡಿಸಲಿ ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ, ‘ಕಳೆದ ವಾರದಲ್ಲಿ ಎರಡು ಬಾರಿ ರೈತರು, ರೀಲರುಗಳೊಂದಿಗೆ ಸಭೆಯನ್ನು ನಡೆಸಲಾಗಿದ್ದು, ಆಯುಕ್ತರೂ ಕೂಡಾ ಬಂದು ರೈತರಿಗೆ, ರೀಲರುಗಳಿಗೆ ಇ – ಬೀಡ್ ಪದ್ದತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ, ಬುಧವಾರದಿಂದ ಪದ್ದತಿಯನ್ನು ಜಾರಿಗೆ ತಂದಿದ್ದು, ಕಳೆದ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೫ ಘಂಟೆಯವರೆಗೆ ಕಂಪ್ಯೂಟರ್ಗಳ ಮುಖಾಂತರ ಗೂಡಿನ ಮೂಟೆಗಳಿಗೆ ಟೋಕನ್ ನೀಡಿ, ಬಿನ್ಗಳನ್ನು ನೀಡಲಾಗಿದೆ, ಸ್ಥಳೀಯರು ಇಂದು ಬೆಳಿಗ್ಗೆ ಬಂದಿರುವುದರಿಂದ ಬಿನ್ಗಳು ಸಿಕ್ಕಿಲ್ಲ. ಗೂಡು ಕೂಡಾ ಹೆಚ್ಚಾಗಿ ಬಂದಿದೆ. ಪ್ರಾಯೋಗಿಕವಾಗಿ ಸ್ವಲ್ಪ ಅಡಚಣೆ ಉಂಟಾಗಿದ್ದು ಸಮಸ್ಯೆ ಬಗೆಹರಿಯಲಿದೆ’ ಎಂದರು.
ಪ್ರಾಂತ ರೈತ ಸಂಘದ ತಾಲ್ಲೂಕು ಅದ್ಯಕ್ಷ ಮಳ್ಳೂರು ಶಿವಣ್ಣ, ರೈತ ಸಂಘದ ಉಪಾಧ್ಯಕ್ಷ ಮುನಿನಂಜಪ್ಪ, ಸೇರಿದಂತೆ ವಿವಿಧ ರೈತರು ಮುಖಂಡರು ಹಾಜರಿದ್ದರು.
ಇ-ಬೀಡ್ ವ್ಯವಸ್ಥೆಯಲ್ಲಿನ ಗೊಂದಲ: ರೈತರ ಆಕ್ರೋಷ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು

ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು
ಬಿ.ಜಿ.ಎಸ್ಪದವಿ ಪೂರ್ವ ಕಾಲೇಜು, ಶಿಡ್ಲಘಟ್ಟ
ವಾಣಿಜ್ಯ ವಿಭಾಗ:
ಸಲ್ಮಾ, 552(ಶೇ.92)
ದೀಪಿಕಾ, 552(ಶೇ.92)
ಸುಧಾಶ್ರೀ, 549(ಶೇ.91.5)
ಎ.ಎಂ.ಕವನಾ, 542(ಶೇ.90.33)
ಬಿ.ಕೆ.ನಯನಾ, 541(ಶೇ.90.16)
ಕೆ.ಬಬೀತಾ, 539(ಶೇ.89.83)
ವಿಜ್ಞಾನ ವಿಭಾಗ:
ಜಿ.ಎಂ.ರಾಜೇಶ್, 525(ಶೇ.87.5)
ಎನ್.ಎಲ್.ನಳಿನಿ, 518(ಶೇ.86.33)
ವಿದ್ಯಾದ್ರಿ ಪದವಿ ಪೂರ್ವ ಕಾಲೇಜು, ಅಂಕತಟ್ಟಿ ಗೇಟ್
ವಿಜ್ಞಾನ ವಿಭಾಗ:
ಬಿ.ಕೆ.ವಿವೇಕ್, 582(ಶೇ.97)
ಕೆ.ದಿಲೀಪ್, 580(ಶೇ.96.67)
ಬಿ.ಕೀರ್ತನಾ, 576(ಶೇ.96)
ಎಸ್.ಮನಸ್ವಿನಿ, 573(ಶೇ.95.5)
ಬಿ.ಎನ್.ನಿತಿನ್, 573(ಶೇ.95.5)
ಸಿ.ಆರ್.ರಂಜಿತ್ ಕುಮಾರ್, 570(ಶೇ.95)
ಎಸ್.ಭಾರ್ಗವ್, 568(ಶೇ.94.67)
ಕೆ.ಎಂ.ರಾಕೇಶ್, 566(ಶೇ.94.33)
ಕೆ.ಎನ್.ಜ್ಯೋತಿ, 565(ಶೇ.94.17)
ಪಿ.ಆರ್.ನಿವೇದಿತಾ, 565(ಶೇ.94.17)
ಕೆ.ಅಭಿಷೇಕ್, 564(ಶೇ.94)
ಬಿ.ಎಂ.ನಿತಿನ್ ಕುಮಾರ್, 564(ಶೇ.94)
ಎಸ್.ವಿ.ಬಿಂದುಶ್ರೀ, 559(ಶೇ.93.17)
ವಿ.ಕೆ.ಮನೋಜ್ ಕುಮಾರ್, 559(ಶೇ.93.17)
ಎಸ್.ಆರ್.ಶ್ರಾವಣಿ ರಾಜ್, 559(ಶೇ.93.17)
ಎನ್.ಲಿಖಿತಾ, 558(ಶೇ.93)
ಎಸ್.ಸಹನಾ, 558(ಶೇ.93)
ಎಸ್.ಎಂ.ಆನಂದಕುಮಾರ್, 557(ಶೇ.92.83)
ಎಸ್.ಪಿ.ಸುಚಿತ್ರಾ, 557(ಶೇ.92.83)
ಬಿ.ಆರ್.ಸ್ಪೂರ್ತಿ, 555(ಶೇ.92.5)
ಕೆ.ಆರ್.ವರ್ಷಿಣಿ, 555(ಶೇ.92.5)
ಎಂ.ರಾಕೇಶ್, 552(ಶೇ.92)
ಎಂ.ಎಸ್.ವಿಜಯ್ ಕುಮಾರ್, 552(ಶೇ.92)
ಎಚ್.ಎನ್.ದೀಕ್ಷಿತ್ ಗೌಡ, 550(ಶೇ.91.66)
ಎನ್.ಸಹನಾ, 549(ಶೇ.91.5)
ಸಿ.ಆರ್.ಹರೀಶ್ ಬಾಬು, 548(ಶೇ.91.33)
ಡಿ.ವಿ.ಮದನ್ ಕುಮಾರ್, 548(ಶೇ.91.33)
ಎಂ.ಎನ್.ಬಿಂದು, 547(ಶೇ.91.17)
ಸಿ.ಎನ್.ವಿನುತಾ, 547(ಶೇ.91.17)
ವಿ.ಸೌಮ್ಯ, 546(ಶೇ.91.)
ಜಾವಿದ್ ಹುಸೇನ್, 544(ಶೇ.90.67)
ಜಿ.ಎಂ.ವಾಣಿಶ್ರೀ, 542(ಶೇ.90.33)
ವಿ.ಶೇಷಮನೋಜ್ಞ, 541(ಶೇ.90.17)
ಎಂ.ರಕ್ಷಿತಾ, 540(ಶೇ.90)
ಕೆ.ಎನ್.ಪ್ರಸನ್ನ, 538(ಶೇ.89.67)
ಆರ್.ಸಾಯೀಶ್, 538(ಶೇ.89.67)
ಆರ್.ಸುಶೋಬಿತಾ, 538(ಶೇ.89.67)
ಕೆ.ಎಸ್.ತೇಜಸ್ವಿನಿ, 538(ಶೇ.89.67)
ಡಿ.ಎಂ.ಯಶ್ವಂತ್, 538(ಶೇ.89.67)
ಆರ್.ನಯನಾ, 536(ಶೇ.89.33)
ಎಸ್.ಸುಚಿತ್ರಾ, 535(ಶೇ.89.17)
ಎಸ್.ಹರ್ಷಿತಾ, 534(ಶೇ.89)
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಯು.ಪಿ.ಎ ಸರ್ಕಾರದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯತಿಗೆ ವಾರ್ಷಿಕ ಕನಿಷ್ಠ ೫೦–-೬೦ ಲಕ್ಷ ನೆರವು ನೀಡಲಾಗಿತ್ತು. ಇಂದಿನ ಬಿಜೆಪಿ ಸರ್ಕಾರ ನರೇಗಾ ಅನುದಾನವನ್ನು ಕಡಿತಗೊಳಿಸುವ ಗ್ರಾಮೀಣ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಬುಧವಾರ ಜೆ.ಡಿ.ಎಸ್ ಹಾಗೂ ಇನ್ನಿತರೆ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಅವರು ಮಾತನಾಡಿದರು. ಜನಪರ ಯೋಜನೆಗಳಿಂದ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ಪ್ರತಿಯೊಬ್ಬರೂ ಉಚಿತವಾಗಿ ಆಹಾರಧಾನ್ಯಗಳನ್ನು ಪಡೆಯುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
ಗ್ರಾಮದಲ್ಲಿ ಕಳೆದ ೧೫ ವರ್ಷಗಳ ನಂತರ ತಮ್ಮಿಂದ ದೂರ ಉಳಿದಿದ್ದ ಗ್ರಾಮಸ್ಥರು ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಗ್ರಾಮದಲ್ಲಿ ಏನೇ ಸಮಸ್ಯೆ ಬಂದರೂ ಹಿರಿಯರ ಸಮ್ಮುಖದಲ್ಲಿ ಸಾಮೂಹಿಕವಾಗಿ ಇತ್ಯರ್ಥ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಪಕ್ಷ ತೊರೆದು ರಾಮಣ್ಣ, ನಾಗಣ್ಣ, ವೆಂಕಟಪ್ಪ, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಶ್ರೀನಿವಾಸ್,ರಾಮಾಂಜಿನಪ್ಪ, ಸುಬ್ರರಾಯಪ್ಪ, ಮುನಿಯಪ್ಪ, ರಮೇಶ್, ರವಿಕುಮಾರ್, ವೆಂಕಟೇಶ್, ಶಿವಕುಮಾರ್, ನಂದೀಶ್, ಮೂರ್ತಿ, ಗೋಪಾಲಕೃಷ್ಣ, ಮಂಜುನಾಥ್ ಮತ್ತಿತರರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಎಂ.ಮುನಿಕೃಷ್ಣಪ್ಪ, ಲಕ್ಷ್ಮೀನಾರಾಯಣಪ್ಪ, ಟಿ.ಎಂ.ಜಯಣ್ಣ, ಗಣೇಶ್, ದೇವರಾಜ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕುಮಾರಿ (ಲೋಳೆಸರ)
ಹೆಸರೇ ಸೂಚಿಸುವಂತೆ ಈ ಗಿಡವು ಕುಮಾರಿಯರ (ಹೆಂಗಸರ) ಸಮಸ್ಯೆಗಳನ್ನು ದೂರ ಮಾಡುವುದು ಅಲ್ಲದೆ ಇದರ ಪೌಷ್ಟಿಕಾಂಶ ಗುಣಗಳಿಂದ ಇದನ್ನು ಸೇವಿಸುವವರಿಗೆ ಚಿರ ಯೌವ್ವನವನ್ನು ನೀಡುವುದು ಅಂದರೆ ಕೌಮಾರ್ಯವನ್ನು ಉಂಟುಮಾಡುವುದು.
Aloe Vera ಎಂಬ ಹೆಸರಿನಿಂದ ಪರಿಚಿತವಾಗಿರುವ ಈ ಸಸ್ಯವನ್ನು ಶ್ಯಾಂಪು, ಕ್ರೀಮ್ ಹಾಗೂ ಸಾಬೂನುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಇದರ ಲ್ಯಾಟಿನ್ ಹೆಸರು Aloe barbadensis “ಲಿಲಿಯೇಷಿಯೆ” ಎನ್ನುವ ಸಸ್ಯ ಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿದೆ.
ಸಂಸ್ಕøತದ ಇತರೇ ಹೆಸರುಗಳು
1. ಕುಮಾರಿ: ಈ ಗಿಡವು ಶೀತ ಗುಣವನ್ನು ಹೊಂದಿದ್ದು, ಸ್ವಲ್ಪವೇ ನೀರಿನ ಅಂಶದಲ್ಲೂ ಬೆಳೆಯುತ್ತದೆ. ಅಲ್ಲದೆ ಯಾವಾಗಲೂ ಚಿರ ಯೌವ್ವನೆಯಂತೆ ನಳನಳಿಸುತ್ತಿರುತ್ತದೆ. ಈ ಗಿಡವು ತನ್ನ ರಾಸಾಯನಿಕ ಗುಣಗಳಿಂದ ಶರೀರಕ್ಕೆ ಬಲ ಮತ್ತು ಪುಷ್ಠಿಯನ್ನು ಕೊಡುತ್ತದೆ.
2. ಘೃತ ಕುಮಾರಿ: ಇದರ ಎಲೆಯಿಂದ ತುಪ್ಪದಂತಿರುವ ಸ್ರಾವವು ಸ್ರವಿಸುತ್ತದೆ. ಆದ್ದರಿಂದ ಈ ಹೆಸರು.
3. ಗೃಹಕನ್ಯಾ: ಈ ಸಸ್ಯವು ತನ್ನ ಸಿಹಿ ಇತ್ಯಾದಿ ಗುಣಗಳಿಂದ ಮನೆಯಲ್ಲಿ ಕನ್ಯೆಯ ಸಮಾನವಾಗಿರುತ್ತದೆ ಅಥವಾ ಕನ್ಯೆಯರ ರೀತಿಯಲ್ಲಿ ಮೃದು ಗುಣಗಳನ್ನು ಹೊಂದಿರುವುದರಿಂದ ಈ ಹೆಸರಿನಿಂದ ಕರೆಯುವರು.
4. ಸಹಾ: ಈ ಗಿಡವು ತೀವ್ರವಾದ ಬಿಸಿಲನ್ನು ಸಹಿಸುತ್ತದೆ.
5. ಕನ್ಯಾ: ಈ ಗಿಡವು ರಸಾಯನ ಗುಣಗಳಿಂದ ಪ್ರಕಾಶಮಾನವಾಗಿರುತ್ತದೆ.
ಉಪಯುಕ್ತ ಅಂಗ
1. ಪತ್ರ, ಪುಷ್ಪ.
2. ಸ್ತ್ರೀಯರಲ್ಲಿ ಮುಟ್ಟಿನ ಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲದಿದ್ದಲ್ಲಿ ಇದರ ತಿರುಳನ್ನು ‘ಕಾಸೀಸ’ ಹಾಗೂ ‘ಟಂಕಣದ’ (ಆಯುರ್ವೇದ ಔಷಧಿ) ಜೋತೆಗೆ ಸೇವಿಸಿದರೆ ಸ್ರಾವವು ಸರಿಯಾದ ಪ್ರಮಾಣದಲ್ಲಿ ಆಗುವುದು.
3. ಜಲೋದರ (ascites) ದಲ್ಲಿ ಲೋಳೆಸರದ ತಿರುಳು ಅಥವಾ ರಸವನ್ನು ನಿತ್ಯವೂ ಸೇವಿಸುವುದು ಹಿತಕರ.
4. ದೇಹದ ಯಾವುದೇ ಭಾಗದಲ್ಲಿ ಊತವಿದ್ದರೆ ಲೋಳೆಸರದ ತಿರುಳನ್ನು ಬಿಸಿ ಮಾಡಿ ಆ ಭಾಗಕ್ಕೆ ಲೇಪಿಸುವುದು ಒಳ್ಳೆಯದು.
5. ಕಾಮಾಲೆಯಲ್ಲಿ ಲೋಳೆಸರದ ತಿರುಳನ್ನು ಅರಿಶಿಣದೊಂದಿಗೆ ಸೇರಿಸಿ ಸೇವಿಸುವುದು ಉತ್ತಮ.
6. ಲೋಳೆಸರದ ತಿರಳನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆಯುವುದರಿಂದ ಮುಖವು ಕಾಂತಿಯುಕ್ತವಾಗುವುದು.
7. ಲೋಳೆಸರದ ತಿರುಳನ್ನು ಕೂದಲ ಬುಡಕ್ಕೆ ಹಚ್ಚಿ, ತಿಕ್ಕಿ ಒಂದು ಘಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಹೊಟ್ಟು, ತಲೆ ಕೂದಲು ಉದುರುವಿಕೆಯು ನಿಲ್ಲುವುದು, ಅಲ್ಲದೆ ಕೂದಲು ಕಾಂತಿಯುಕ್ತವಾಗುವುದು. ಕೂದಲಿಗೆ ಕಂಡೀಶನರ್ ರೀತಿಯಲ್ಲಿ ಕೆಲಸ ಮಾಡುವುದು.
8. ಮಲ ವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ ಇತರೇ ವಾತಾನುಲೋಮಕ ಔಷಧಿಗಳ ಜೊತೆಗೆ ಇದನ್ನು ಬಳಸುವುದರಿಂದ ಮಲ ವಿಸರ್ಜನೆ ಆಗುತ್ತದೆ.
ಡಾ. ನಾಗಶ್ರೀ ಕೆ.ಎಸ್.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು
ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು
ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಮಳ್ಳೂರು
ವಿಜ್ಞಾನ ವಿಭಾಗ:
- ಎನ್.ಸಚಿನ್ ಕುಮಾರ್, 574(ಶೇ.95.67)
- ಎಸ್.ಭೂಮಿಕಾ, 559(ಶೇ.93.17)
- ಎಂ.ಡಿ.ಮುಖೇಶ್, 550(ಶೇ.91.67)
ಕಾಮರ್ಸ್(ಇ.ಬಿ.ಎ.ಸಿ) ವಿಭಾಗ:
- ಎ.ಮೇಘನಾ, 565(ಶೇ.94.17)
- ಆರ್.ಸಿಂಧು, 563(ಶೇ.93.83)
- ಎಚ್.ವಿ.ಬಾಲಾಜಿ, 533(ಶೇ.88.83)
ಕಾಮರ್ಸ್(ಎಚ್.ಇ.ಬಿ.ಎ) ವಿಭಾಗ:
- ಎಂ.ಗೀತಾ, 574(ಶೇ.95.67)
- ಕೆ.ಎಂ.ಪ್ರಜ್ವಲ್, 560(ಶೇ.93.33)
- ಆರ್.ನಾಗೇಂದ್ರ, 551(ಶೇ.91.83)
ಕಲಾ ವಿಭಾಗ:
- ಪಿ.ಸಂಧ್ಯಾ, 554(ಶೇ.92.33)
- ಕೆ.ರಾಘವೇಂದ್ರ ಗೌಡ, 525(ಶೇ.87.5)
- ಎನ್.ಲಕ್ಷ್ಮೀ, 519(ಶೇ.86.05)
ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
ವಿಜ್ಞಾನ ವಿಭಾಗ:
- ಎನ್.ಡಿ.ಕಾವ್ಯ, ೫೬೩ (ಶೇ.೯೩.೮೩)
- ರಹೀಂ ಬೇಗ್, ೫೫೧ (ಶೇ.೯೧.೮೩)
- ಎನ್.ಕಾರ್ತಿಕ್, ೫೪೩ (ಶೇ.೯೦.೫೦)
- ಆರ್.ನಟರಾಜ್, ೫೪೨ (ಶೇ.90.೩೩)
ವಾಣಿಜ್ಯ ವಿಭಾಗ:
- ವೈ.ಎನ್.ಅರುಣ, ೫೨೩ (ಶೇ.೮೭.೧೬)
ಕಲಾ ವಿಭಾಗ:
- ಐ.ಎಂ. ಸೌಜನ್ಯ, ೫೦೪ (ಶೇ.೮೪)
- ಬಿ.ಕೆ.ವಿವೇಕ್, 582(ಶೇ.97)
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವೆ
ತಾಲ್ಲೂಕಿನ ಅಂಕತಟ್ಟಿ ಗೇಟ್ ಬಳಿ ಇರುವ ವಿದ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಿ.ಕೆ.ವಿವೇಕ್ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 582(ಶೇ.97) ಅಂಕಗಳನ್ನು ಪಡೆದು ತಾಲ್ಲೂಕಿಗೇ ಮೊದಲಿಗನಾಗಿದ್ದಾನೆ.
ನಗರದ ಶಾರದಾ ಪ್ರೌಢಶಾಲೆಯ ಶಿಕ್ಷಕ ಕೆಂಪಣ್ಣ ಮತ್ತು ಪ್ರಭಾವತಿ ಅವರ ಪುತ್ರ ಬಿ.ಕೆ.ವಿವೇಕ್ ಐಐಟಿ ಜೆಇಇ ಪರೀಕ್ಷೆಯಲ್ಲೂ ಉತ್ತೀರ್ಣನಾಗಿದ್ದಾನೆ. ಗಣಿತದಲ್ಲಿ 100 ಅಂಕ, ಜೀವಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 99 ಪಡೆದಿದ್ದು, ಭೌತಶಾಸ್ತ್ರದಲ್ಲಿ 97 ಹಾಗೂ ಆಂಗ್ಲಭಾಷೆಯಲ್ಲಿ 89 ಅಂಕಗಳನ್ನು ಗಳಿಸಿದ್ದಾರೆ.
ತಾಲ್ಲೂಕಿಗೆ ಮೊದಲಿಗನಾಗಿದ್ದು, ಜಿಲ್ಲೆಗೆ ಮೂರನೆಯವನಾಗಿರುವ ಬಿ.ಕೆ.ವಿವೇಕ್, ಆಂಗ್ಲಭಾಷೆಯಲ್ಲಿ ಮತ್ತು ಭೌತಶಾಸ್ತ್ರದಲ್ಲಿ ಕಡಿಮೆ ಅಂಕಗಳು ಬಂದಿವೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವೆ ಎನ್ನುತ್ತಿದ್ದಾರೆ. ಹೆಚ್ಚಿನ ಅಂಕಗಳ ಬಂದಲ್ಲಿ ಜಿಲ್ಲೆಗೇ ಮೊದಲಿಗನಾಗಿ ರಾಜ್ಯಕ್ಕೆ ಮೂರನೆಯವನಾಗುವ ಸಾಧ್ಯತೆಯಿದೆ.
‘ಬೆಳಿಗ್ಗೆ ಮೂರು ಗಂಟೆಗೇ ಎದ್ದು ಓದುತ್ತಿದ್ದೆ. ರಾತ್ರಿ ಹೆಚ್ಚು ನಿದ್ರೆ ಕೆಡುತ್ತಿರಲಿಲ್ಲ. ಸತತವಾಗಿ ಅಭ್ಯಾಸ ಮಾಡಿದ್ದು, ಕಾಲೇಜಿನಲ್ಲಿ ಉಪನ್ಯಾಸಕರ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದಿಂದ ಹೆಚ್ಚಿನ ಅಂಕ ಗಳಿಸುವಂತಾಯಿತು. ಆಂಗ್ಲಭಾಷೆಯಲ್ಲಿ ಮತ್ತು ಭೌತಶಾಸ್ತ್ರದಲ್ಲಿ ಕಡಿಮೆ ಅಂಕಗಳು ಬಂದಿವೆ. ಮರುಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬರುವ ವಿಶ್ವಾಸವಿದೆ’ ಎಂದು ಬಿ.ಕೆ.ವಿವೇಕ್ ತಿಳಿಸಿದ್ದಾರೆ.
ಶನೈಶ್ಚರಸ್ವಾಮಿಯ ಬ್ರಹ್ಮರಥೋತ್ಸವ
ನಗರದ ಕೆ.ಎಚ್.ಬಿ ಕಾಲೋನಿಯ ಗಾಯತ್ರಿನಗರದಲ್ಲಿನ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಸೋಮವಾರ ಮಹಾಲಕ್ಷ್ಮಿಯಾಗ ಹಾಗೂ 17ನೇ ವರ್ಷದ ಶನೈಶ್ಚರ ಜಯಂತಿ, 108 ಲೀಟರ್ ಕ್ಷೀರಾಭಿಷೇಕ ಹಾಗೂ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿತ್ತು.
ಶನೈಶ್ಚರ ಜಯಂತಿ ಪ್ರಯುಕ್ತ ಸಾಮೂಹಿಕ ಎಳ್ಳು ದೀಪೋತ್ಸವ, ಶನೈಶ್ಚರಸ್ವಾಮಿಯ ಹೋಮ, ತೈಲಾಭಿಷೇಕ, 108 ಲೀಟರ್ ಹಾಲು ಮತ್ತು 108 ಲೀಟರ್ ಮೊಸರು ಅಭಿಷೇಕ, ಪಂಚಾಮೃತಾಭಿಷೇಕ, ಶಾಲ್ಯಾನ್ನ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.
ಆರು ದಿನಗಳ ಕಾಲ ನಡೆಯುವ ವಿವಿಧ ಪೂಜಾ ಕಾರ್ಯಕ್ರಮಗಳು ಶನಿವಾರ ಪ್ರಾರಂಭಗೊಂಡಿದ್ದು, ಗುರುವಾರದ ತನಕ ಸಾಗಲಿದೆ. ಈ ಪೂಜಾ ಕಾರ್ಯಗಳ ನಡುವೆ ಸೋಮವಾರ ಕೆ.ಎಚ್.ಬಿ. ಕಾಲೋನಿಯ ಮುಖ್ಯರಸ್ತೆಗಳಲ್ಲಿ ಬ್ರಹ್ಮರಥೋತ್ಸವದ ಮೆರವಣಿಗೆಯನ್ನು ಮಾಡಲಾಯಿತು. ನೂರಾರು ಭಕ್ತರು ನೆರೆದಿದ್ದರು. ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ, ನಗರ್ತಮಂಡಳಿಯ ಶಿವಶಂಕರ್, ವಸಂತಕುಮಾರ್, ವಿ.ಎನ್.ರಾಮಮೋಹನ್ ಶಾಸ್ತ್ರಿ, ದಾಶರಥಿ, ತೀರ್ಥಂಕರ ಮತ್ತಿತರರು ಹಾಜರಿದ್ದರು.
“ಸ್ಕೋಪ್”ನ ಬೆನ್ನು ಹತ್ತಿ
“ಈಗೆಲ್ಲಾ ಕಂಪ್ಯೂಟರ್ ಸೈನ್ಸ್ಗೆ ಸ್ಕೋಪಿಲ್ಲ, ಎಲೆಕ್ಟ್ರಾನಿಕ್ಸ್ಗೇ ಸೇರಿಕೊಬೇಕು;
ಬೇಸಿಕ್ ಸೈನ್ಸ್ಗೆ ಇನ್ನು ಮುಂದೆ ಬಾಳಾ ಸ್ಕೊಪಿರುತ್ತೆ. ಅದಕ್ಕೆ ಹೋಗಿ;
ಸಿಎ ಮಾಡಿದರೆ ನೋಡು ಯಾವಾಗಲೂ ಸ್ಕೋಪಿರತ್ತೆ:
ಬಿಎ, ಎಂಬಿಎ ಗೆಲ್ಲಾ ಏನೇನೂ ಸ್ಕೋಪಿಲ್ಲ, ಬರೀ ದುಡ್ಡು ದಂಡಕ್ಕೆ ಅದನ್ನು ಯಾಕೆ ಓದ್ತೀರಾ”
ಪಿ ಯು ಮುಗಿಯುತ್ತಿದ್ದಂತೆ ಪೋಷಕರು, ಸ್ನೇಹಿತರು, ಉಪಾಧ್ಯಯರು, ಕೌನ್ಸೆಲರ್ಗಳು-ಹೀಗೆ ಕಂಡಕಂಡವರೆಲ್ಲಾ ಅವರವರಿಗೆ ತಿಳಿದಂತೆ ಸಲಹೆಗಳನ್ನು ಕೊಡತೊಡಗುತ್ತಾರೆ. ಇವುಗಳ ಭಾರಕ್ಕೆ ನಲುಗಿ ಹೋದ ವಿದ್ಯಾರ್ಥಿಗಳು ಕೊನೆಗೆ ಏನೂ ನಿರ್ಧರಿಸಲಾರದೆ ತಮ್ಮ ಭವಿಷ್ಯದಲ್ಲಿ ಏನು ಕಾದಿದೆಯೋ ಎಂಬ ಆತಂಕದಲ್ಲಿ ಯಾವುದಾದರೂ ಕೋರ್ಸ್ಗೆ ಸೇರುತ್ತಾರೆ.
ಈ “ಸ್ಕೋಪ್”ನ ಚಕ್ರವ್ಯೂಹವೇ ಅಂತಾದ್ದು. ಇನ್ನು ನಾಲ್ಕೈದು ವರ್ಷಗಳ ನಂತರ ಏನಾಗಬಹುದು ಎಂದು ಯಾರಿಗೂ ಖಚಿತವಾಗಿ ಹೇಳಲಾಗದಿರುವುದರಿಂದ ಎಲ್ಲರೂ ಅವರವರ ಲೆಕ್ಕಾಚಾರಗಳನ್ನು ಮುಂದಿಡುತ್ತಾ ಹೋಗುತ್ತಾರೆ. ತಮ್ಮ ಆಸಕ್ತಿಗಳೇನು ಎಂದು ನಿರ್ದಿಷ್ಟವಾಗಿ ಗುರುತಿಸಿಕೊಳ್ಳಲಾಗದ ವಿದ್ಯಾರ್ಥಿಗಳು ಯಾವ್ಯಾವುದೋ ಒತ್ತಡಕ್ಕೆ ಮಣಿದು ಓದನ್ನು ಮುಗಿಸುತ್ತಾರೆ. ಇದರಿಂದಾಗಿ ಅವರು ವೃತ್ತಿಜೀವನದಲ್ಲಿ ಅತೃಪ್ತರಾಗಿಯೇ ಕಳೆಯವ ಸಾಧ್ಯತೆಗಳಿರುತ್ತವೆ.
ನನ್ನ ಬಂಧುಗಳ ಮಗನೊಬ್ಬ ಗಣಿತದಲ್ಲಿ ಅದ್ಭುತ ಪ್ರತಿಭಾವಂತನಾಗಿದ್ದ. ಪ್ರೌಢಶಾಲೆಯಲ್ಲಿರುವಾಗಲೇ ಕಾಲೇಜಿನವರಿಗೆ ಗಣಿತದ ಲೆಕ್ಕ ಬಿಡಿಸುವುದಕ್ಕೆ ಸಹಾಯ ಮಾಡುತ್ತಿದ್ದ. ಹೈಸ್ಕೂಲ್ನ ನಂತರ ಅವರ ತಂದೆ ಅವನನ್ನು ಒತ್ತಾಯದಿಂದ ಕಲಾವಿಭಾಗಕ್ಕೆ ಸೇರಿಸಿದರು. ಪರಿಣಾಮ ಅಂದರೆ ಆತ ಪಿ ಯು ಪರೀಕ್ಷೆಯಲ್ಲಿ ಮೂರನೇ ದರ್ಜೆಗೆ ಇಳಿದ. ನಂತರ ಜೀವನೋಪಾಯಕ್ಕಾಗಿ ಏನೋ ದಾರಿ ಹುಡುಕಿಕೊಂಡರೂ ಆತನ ಗಣಿತದ ಪ್ರತಿಭೆ ಮುಕ್ಕಾಗಿಹೋಯಿತು.
ಇತ್ತೀಚಿನ ಇನ್ನೊಂದು ಘಟನೆ ನೋಡಿ. ನನ್ನ ಪರಿಚಿತರೊಬ್ಬರು ಮಗನನ್ನು ಒತ್ತಾಯದಿಂದ ಎಂಬಿಬಿಎಸ್ಗೆ ಕಳಿಸಿದರು. ಎರಡೇ ತಿಂಗಳಲ್ಲಿ ಆ ವಿದ್ಯಾರ್ಥಿ ಮನೆಗೆ ಹಿಂತಿರುಗಿದ. ಮುಂದಿನ ವರ್ಷ ಮತ್ತೆ ಅಖಿಲ ಭಾರತ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿ ಈಗ ತನ್ನಿಷ್ಟದಂತೆ ಎಲೆಕ್ಟ್ರಾನಿಕ್ಸ್ ಅಭ್ಯಾಸ ಮಾಡುತ್ತಿದ್ದಾನೆ.
ದುರಾದೃಷ್ಟವೆಂದರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಹೀಗೆ ಪೋಷಕರ ವಿರುದ್ಧ ನಿಂತು ತಮ್ಮದೇ ದಾರಿಯನ್ನು ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಇನ್ನೂ ಹೆಚ್ಚಿನ ತೊಂದರೆ ಇರುವುದು ಹೆಚ್ಚಿನ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗಳ ಬಗೆಗೆ ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ. ಹಾಗಾಗಿ ಅವರೆಲ್ಲಾ “ಸ್ಕೋಪ್” ನ ಬೆನ್ನು ಹತ್ತುತ್ತಾರೆ.
ಇವತ್ತಿನ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳಿಗೂ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ತಾವು ಆರಿಸಿಕೊಂಡ ವಿಷಯದಲ್ಲಿ ಬರೀ ಮೇಲ್ಮೈ ಜ್ಞಾನಕ್ಕೆ ತೃಪ್ತರಾಗದೇ ಆಳವಾಗಿ ಅಧ್ಯಯನ ಮಾಡಬೇಕು. ಇದಕ್ಕೆ ಸಾಕಷ್ಟು ಶ್ರಮ, ಸಮಯ, ಮತ್ತು ತಾಳ್ಮೆಯ ಅಗತ್ಯವಿರುತ್ತದೆ. ಉನ್ನತ ಶಿಕ್ಷಣಕ್ಕೆ ಸ್ವಲ್ಪ ಮಟ್ಟಿನ ಹಣದ ಅಗತ್ಯವಿದ್ದರೂ ಅದಕ್ಕಿಂತ ಮುಖ್ಯವಾದದ್ದು ವಿದ್ಯಾರ್ಥಿಗಳಲ್ಲಿರಬೇಕಾದ ಗುರಿಯ ಬಗೆಗಿನ ಸ್ಪಷ್ಟ ಚಿತ್ರಣ.
ನಮ್ಮ ಅಭಿರುಚಿಗಳನ್ನು ಸರಿಯಾಗಿ ಗುರುತಿಸುವುದು ಅಂತಹ ಸರಳವಾದುದ್ದಲ್ಲ. ಹದಿವಯಸ್ಸಿನವರೆಗೆ ವೈದ್ಯರನ್ನು ನೋಡಿದರೆ ವೈದ್ಯ, ಹಾಡನ್ನು ಕೇಳಿದೊಡನೆ ಹಾಡುಗಾರ, ಕಾರ್ಖಾನೆಗಳನ್ನು ನೋಡಿದರೆ ಉದ್ಯಮಿ-ಹೀಗೆ ಕಂಡಿದ್ದೆಲ್ಲಾ ಆಗಬೇಕೆನ್ನುವ ಹಗಲು ಕನಸು ಕಾಣುತ್ತೇವೆ. ಸುಮಾರು ಹದಿನೆಂಟನೇ ವಯಸ್ಸಿಗೆ ಕವಲು ದಾರಿಯಲ್ಲಿ ನಿಂತಾಗ ಏನೆಲ್ಲಾ ಲೆಕ್ಕಾಚಾರಗಳನ್ನು ಹಾಕಿ ಯಾವುದೋ ಒಂದು ದಾರಿಯಲ್ಲಿ ನುಗ್ಗುತ್ತೇವೆ. ಅದು ನಮ್ಮಿಷ್ಟದ ದಾರಿಯಲ್ಲ ಎಂದು ತಿಳಿಯುವಷ್ಟರಲ್ಲಿ ಹಿಂತಿರುಗಿ ಬರಲಾರದಷ್ಟು ದೂರ ಹೋಗಿರುವುದರಿಂದ ಅಲ್ಲಿಯೇ ಮುಂದುವರೆಯುವ ಅನಿವಾರ್ಯತೆ ಉಂಟಾಗಿರುತ್ತದೆ.
ಈ ದೃಷ್ಟಿಯಿಂದ ನೋಡಿದರೆ ವಿದ್ಯಾರ್ಥಿಗಳ ಅಭಿರುಚಿಗಳನ್ನು ಗುರುತಿಸುವುದರಲ್ಲಿ ಶಾಲಾ ಕಾಲೇಜುಗಳಿಗಿಂತ ಹೆಚ್ಚಿನ ಹೊಣೆಗಾರಿಕೆ ಪೋಷಕರ ಮೇಲಿರುತ್ತದೆ. ಹದಿನೆಂಟನೆ ವರ್ಷಕ್ಕೆ ಒಮ್ಮೆಲೆ ಮಕ್ಕಳಿಗೆ ನಿಮ್ಮ ಅಭಿರುಚಿಗಳನ್ನು ತಿಳಿಸಿ ಎಂದರೆ ಅವರಿಗೂ ತೊಳಲಾಟವುಂಟಾಗುತ್ತದೆ. ಮನಃಶಾಸ್ತ್ರಜ್ಞರು ನಡೆಸುವ “ಆಪ್ಟಿಟ್ಯೂಡ್ ಟೆಸ್ಟ್” ಗಳೂ ಕೂಡ ಸ್ಪಷ್ಟ ದಿಕ್ಸೂಚಿಯೇನೂ ಆಗಿರುವುದಿಲ್ಲ. ಹಾಗಾಗಿ ಬಾಲ್ಯದಿಂದಲೇ ಪೋಷಕರು ಮಕ್ಕಳ ಅಭಿರುಚಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾಗುತ್ತದೆ. ನಮ್ಮ ಮಕ್ಕಳಲ್ಲಿ ಹೇಳಿಕೊಳ್ಳುವಂತಹ ಏನೂ ವಿಶೇಷವಿಲ್ಲ ಎಂದು ಯಾವ ಪೋಷಕರೂ ಅಂದುಕೊಳ್ಳಲೇಬಾರದು. ಐ್ರನ್ಸಾಕ್ಷನಲ್ ಅನಾಲಿಸಿಸ್ ಎನ್ನುವ ಮನೋಚಿಕಿತ್ಸಾ ವಿಧಾನವನ್ನು ರೂಪಿಸಿದ ಎರಿಕ್ ಬರ್ನ್ ಹೇಳುತ್ತಾನೆ, “ನಮ್ಮ ಮಕ್ಕಳು ರಾಜಕುಮಾರ/ರಿಯರಾಗಿ ಹುಟ್ಟುರುತ್ತಾರೆ, ನಾವು ಅವರನ್ನು ಕಪ್ಪೆಗಳನ್ನಾಗಿ ಮಾಡುತ್ತೇವೆ”.
ಆದ್ದರಿಂದ ಮಕ್ಕಳ ಅಭಿರುಚಿಗಳನ್ನು ಗೌರವಿಸಿ, ಅವರಿಗೆ ಅದನ್ನು ಬೆಳೆಸಲು ಸಹಾಯ ಮಾಡಬೇಕಾತ್ತದೆ. ಇದಕ್ಕೆ ಪೋಷಕರಿಗೆ ಬೇಕಾಗಿರುವುದು ವಿಶೇಷ ಪರಿಣಿತಿಯಲ್ಲ, ಕಾಳಜಿ ಮತ್ತು ತಾಳ್ಮೆ ಮಾತ್ರ. ಮಕ್ಕಳನ್ನು ಟೀವಿ, ಕಂಪ್ಯೂಟರ್, ಮೊಬೈಲ್ಗಳಿಂದ ವಿಮುಖರನ್ನಾಗಿಸಿ ಸುಮ್ಮನೆ ಸಮಯ ಕಳೆಯಲು ಹೇಳಿ. ನಾವಂದುಕೊಳ್ಳುವಂತೆ ಅವರು ಸೋಮಾರಿಗಳಾಗಿ ಕೂರುವುದಿಲ್ಲ. ತಮ್ಮ ಕ್ರಿಯಾಶೀಲತೆಯನ್ನು ಯಾವುದಾದರೂ ದಿಕ್ಕಿನಲ್ಲಿ ಹರಿಸಿಯೇ ಹರಿಸುತ್ತಾರೆ. ಅದು ಅವರ ನಿಜವಾದ ಆಸಕ್ತಿಯ ಕ್ಷೇತ್ರವಾಗಿರುತ್ತದೆ.
ಹಾಗೊಮ್ಮೆ ಮಕ್ಕಳು ಎರಡು ಮೂರು ಕ್ಷೇತ್ರಗಳಲ್ಲಿ ಅಭಿರುಚಿಯನ್ನು ತೋರಿಸಿದರೆ ಎಲ್ಲಾ ಕ್ಷೇತ್ರಗಳ ಬಗೆಗೆ ಹೆಚ್ಚಿನ ಮಾಹಿತಿ ಒದಗಿಸುತ್ತಾ ಬಂದರೆ ನಿಧಾನವಾಗಿ ಅವರ ಯೋಚನೆಗಳು ಹರಳುಗಟ್ಟುತ್ತವೆ. ಯಾವುದೇ ಹಂತದಲ್ಲಿಯೂ ಮಕ್ಕಳ ಅಭಿರುಚಿಗಳನ್ನು ಕೀಳುಗೈದು, “ಇದರಲ್ಲಿ ಸಂಬಳ ಕಡಿಮೆ; ಅದಕ್ಕೆ ಸ್ಕೋಪ್ ಜಾಸ್ತಿ” ಎಂದು ತಮ್ಮ ಯೋಚನೆಗಳನ್ನು ಹೇರಲು ಯತ್ನಿಸಿದರೆ ಅವರಿಗೆ ಗೊಂದಲಗಳಾಗುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು. ಆರಿಸಿಕೊಂಡ ಕ್ಷೇತ್ರದಲ್ಲಿ ಒಂದು ದೀರ್ಘಕಾಲೀನ ಯೋಜನೆ ಇಟ್ಟುಕೊಂಡು ಪರಿಶ್ರಮಪಡುವುದರ ಅಭ್ಯಾಸ ಮಾಡಿಸಿದರೆ, ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಮ್ಮ ಸುತ್ತಲೂ ಸಾಕಷ್ಟು ಉದಾಹರಣೆಗಳಿರುತ್ತವೆ.
ವಸಂತ್ ನಡಹಳ್ಳಿ
ನಷ್ಟಕ್ಕೆ ಒಳಗಾಗಿರುವ ರೈತರು ಹಾಗೂ ರೀಲರುಗಳಿಗೆ ನೆರವಾಗಲು ಸರ್ಕಾರ ಚಿಂತನೆ
ರೇಷ್ಮೆ ಆಮದು ಸುಂಕದ ಇಳಿಕೆಯಿಂದಾಗಿ ನಷ್ಟಕ್ಕೆ ಒಳಗಾಗಿರುವ ರೈತರು ಹಾಗೂ ರೀಲರುಗಳಿಗೆ ನೆರವಾಗಲು ಸರ್ಕಾರ ಈಗಾಗಲೇ ಚಿಂತನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಹಣಕಾಸು ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ರೇಷ್ಮೆ ಕೃಷಿ ಆಯುಕ್ತ ಜಿ.ಸತೀಶ್ ತಿಳಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಭಾನುವಾರ ಸಂಜೆ ಭೇಟಿ ನೀಡಿ, ರೈತರು ಹಾಗೂ ರೀಲರುಗಳೊಂದಿಗೆ ಸಭೆಯನ್ನು ನಡೆಸಿದ ನಂತರ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಪ್ರತಿ ಬಜೆಟ್ ಸಮಯದಲ್ಲೂ ರಾಜ್ಯ ಸರ್ಕಾರದಿಂದ ರೇಷ್ಮೆ ಬೆಳೆಗಾರರು ಮತ್ತು ರೀಲರುಗಳ ಸಮಸ್ಯೆಗಳ ಬಗ್ಗೆ ಹಾಗೂ ಅವರ ಅಗತ್ಯತೆಗಳ ಬಗ್ಗೆ ಪತ್ರವನ್ನು ಬರೆಯಲಾಗುತ್ತಿದೆ. ಈ ಮುಂಚೆಯೂ ಕೂಡಾ ರೇಷ್ಮೆ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡದಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು, ಕೇಂದ್ರ ಸರ್ಕಾರದಿಂದಲೂ ಕೂಡಾ ರಾಜ್ಯಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ದುರಾದೃಷ್ಟವಶಾತ್ ಶೇ. ೧೦ ಕ್ಕೆ ಇಳಿಕೆಯಾಗಿದ್ದ ಪರಿಣಾಮ ಒಂದೇ ಬಾರಿಗೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಗೂಡಿನ ಧರ ಹಾಗೂ ರೇಷ್ಮೆ ನೂಲಿನ ಧರದಲ್ಲಿ ಇಳಿಮುಖವಾಯಿತು. ರಾಜ್ಯದ ಇಂಧನ ಸಚಿವರು ಸೇರಿದಂತೆ ಎಲ್ಲಾ ಸಂಸದರ ನಿಯೋಗ ಕೇಂದ್ರದ ವಿತ್ತಸಚಿವರನ್ನು ಸಂಪರ್ಕ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳನ್ನು ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.
ಪ್ರತಿನಿತ್ಯ ಸುಮಾರು ೭೦ ಟನ್ಗಿಂತಲೂ ಹೆಚ್ಚು ಗೂಡು ಬರುತ್ತಿರುವ ಶಿಡ್ಲಘಟ್ಟದ ಮಾರುಕಟ್ಟೆಯಲ್ಲಿ ರೈತರು ಹಾಗೂ ರೀಲರುಗಳಿಗೆ ಉಪಯೋಗವಾಗುವ ರೀತಿಯಲ್ಲಿ ಇ–-ಬೀಡ್ ಪದ್ಧತಿಯನ್ನು ಜಾರಿಗೆ ತರುತ್ತಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ. ಈ ಪದ್ದತಿಯಲ್ಲಿ ಮಾರುಕಟ್ಟೆಗೆ ಗೂಡು ತರುವಂತಹ ರೈತರು, ಪ್ರತ್ಯೇಕವಾಗಿ ತೆರೆಯಲಾಗಿರುವ ಕೌಂಟರುಗಳಲ್ಲಿ ಅವರು ತಂದಿರುವ ಗೂಡಿನ ಪ್ರಮಾಣ, ಯಾವ ಬಿನ್ನಲ್ಲಿ ರೈತರಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಜಾಲರಿಗಳು ಬೇಕಾಗಿದೆ, ಎಂಬಿತ್ಯಾದಿ ಮಾಹಿತಿಯುಳ್ಳ ರಸೀದಿಯನ್ನು ಪಡೆದುಕೊಂಡ ನಂತರ ರೈತರು ನೇರವಾಗಿ ತಮಗೆ ಕಾಯ್ದಿರಿಸಿರುವ ಜಾಲರಿಗಳಿಗೆ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಾರುಕಟ್ಟೆಯ ಆವರಣದಲ್ಲಿ ವೈಫೈ ತಂತ್ರಜ್ಞಾನವನ್ನು ಅಳವಡಿಸುವುದರಿಂದ ರೀಲರುಗಳೂ ಕೂಡಾ ತಮ್ಮ ಮೊಬೈಲ್ಗಳ ಮುಖಾಂತರವೇ ಗೂಡಿನ ಧರವನ್ನು ನಿಗಧಿ ಮಾಡುತ್ತಾರೆ, ಯಾವ ರೈತನ ಗೂಡು ಎಷ್ಟು ಧರಕ್ಕೆ ಮಾರಾಟವಾಗುತ್ತದೆ ಎಂಬುದರ ಮಾಹಿತಿಯನ್ನು ಟಿ.ವಿ.ಪರದೆಗಳ ಮೇಲಿನ ಸ್ಕ್ರೀನ್ನಲ್ಲಿ ಪ್ರದರ್ಶನ ಮಾಡಲಾಗುತ್ತದೆ, ರೈತರಿಗೆ ಒಪ್ಪಿಗೆಯಾದರೆ ಮಾತ್ರ, ಧರವನ್ನು ನಿಗದಿಪಡಿಸಲಾಗುತ್ತದೆ, ರೈತರಿಂದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ್ದು, ರೈತರು ಗೂಡು ತಂದು ಕೌಂಟರ್ನಲ್ಲಿ ನೀಡುತ್ತಿದ್ದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.
ಮಾರುಕಟ್ಟೆಯಲ್ಲಿ ಸಿಬ್ಬಂದಿಯ ಕೊರತೆಯು ಹೆಚ್ಚಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಮಾರುಕಟ್ಟೆಯಾಗಿದ್ದರೂ ಕೂಡಾ ಇಲ್ಲಿನ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯಿಲ್ಲದೆ, ಹೊಸ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಕಷ್ಟಕರವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಗೂಡು ತರುವಂತಹ ರೈತರಿಗೂ ಸಮಸ್ಯೆಯುಂಟಾಗಲಿದೆ, ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನೇಮಕ ಮಾಡಬೇಕು, ರೈತರೊಂದಿಗೆ ಸಿಬ್ಬಂದಿ ಉತ್ತಮ ವರ್ತನೆಯನ್ನು ಹೊಂದಿರಬೇಕು, ಬಹಳಷ್ಟು ಮಂದಿ ರೈತರು ಅವಿದ್ಯಾವಂತರು ಬರುತ್ತಾರೆ ಅವರಿಗೆ ಸಿಬ್ಬಂದಿ ನೆರವಾಗಬೇಕು. ಗೂಡುತರುವಂತಹ ವಾಹನಗಳು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ಮಹಿಳಾ ರೈತರಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಮಾರುಕಟ್ಟೆಯ ಆವರಣದಲ್ಲೆ ಬ್ಯಾಂಕಿನ ವ್ಯವಸ್ಥೆಯನ್ನು ಮಾಡಿಕೊಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಗೂಡು ತರುವಂತಹ ರೈತರಿಗೆ ಒಂದೇ ಕಡೆಯಲ್ಲೆ ಜಾಲರಿಗಳನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ರಾಮನಗರ, ಚನ್ನಪಟ್ಟಣದ ರೀಲರುಗಳಿಗೆ ನೀಡುವಂತೆ ಸಾಲದ ಸೌಲಭ್ಯವನ್ನು ಕಲ್ಪಿಸಿಕೊಟ್ಟು, ನಮಗೆ ಬಡ್ಡಿಯಲ್ಲಿ ಶೇ. ೫ ರಷ್ಟಿ ರಿಯಾಯಿತಿ ನೀಡಬೇಕು, ಪ್ರತಿವರ್ಷದಲ್ಲಿ ರೇಷ್ಮೆ ಆಮದು ಸುಂಕದ ಬೆಲೆ ಕಡಿಮೆಯಾದಾಗಲೆಲ್ಲಾ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದ್ದೇವೆ, ಆದರೆ ನಮಗೆ ಮಾರುಕಟ್ಟೆಯ ಸೌಲಭ್ಯವೂ ಇಲ್ಲದೆ, ಗೂಡಿನಿಂದ ಬಿಚ್ಚಾಣಿಕೆ ಮಾಡಿದ ರೇಷ್ಮೆಯನ್ನು ಮನೆಯಲ್ಲಿಟ್ಟುಕೊಂಡು ನಷ್ಟವನ್ನು ಅನುಭವಿಸುತ್ತಿದ್ದೇವೆ, ರೇಷ್ಮೆ ನೂಲನ್ನು ಕೆ.ಎಸ್.ಎಂ.ಬಿ ಯಿಂದ ಖರೀದಿ ಮಾಡುವಂತಹ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ರೀಲರುಗಳು ಒತ್ತಾಯಿಸಿದರು.
ರೇಷ್ಮೆ ಇಲಾಖೆಯ ಅಪರ ನಿರ್ದೇಶಕ ಅರಹುಣಸೆ, ಜಂಟಿ ನಿರ್ದೇಶಕ ಪ್ರಭಾಕರ್, ಚಿಕ್ಕಬಳ್ಳಾಪುರ ಉಪನಿರ್ದೇಶಕ ನಾಗಭೂಷಣ್, ಕೇಂದ್ರ ಕಚೇರಿಯ ಉಪನಿರ್ದೇಶಕ ಸುಭ್ರಮಣ್ಯಂ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಉಪನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ರೈತ ಮುಖಂಡ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಎಚ್.ಕೆ.ಸುರೇಶ್, ರೀಲರುಗಳಾದ ಅನ್ವರ್, ನಾಗನರಸಿಂಹ, ನರಸಿಂಹಮೂರ್ತಿ, ಎಸ್.ಎಂ.ರಮೇಶ್, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಾಡು ಕರಾಟೆ ಡೊ ಫೆಡರೇಷನ್ ಇಂಡಿಯಾ ಶೈಲಿಯಲ್ಲಿ ಬ್ಲಾಕ್ ಬೆಲ್ಟ್ವಿ ಪಡೆದ ಜಂಗಮಕೋಟೆಯ ವಿದ್ಯಾರ್ಥಿಗಳು
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ವಿದ್ಯಾರ್ಥಿಗಳು ವಾಡು ಕರಾಟೆ ಡೊ ಫೆಡರೇಷನ್ ಇಂಡಿಯಾ ಶೈಲಿಯಲ್ಲಿ ಕರಾಟೆ ಶಿಕ್ಷಕರಾದ ಮಹಮ್ಮದ್ ಇನಾಯತ್ತುಲ್ಲ ಮತ್ತು ನೂರುಲ್ಲ ನೇತೃತ್ವದಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು:
ಸರ್ಕಾರಿ ಪ್ರೌಢಶಾಲೆ, ಕುಂದಲಗುರ್ಕಿ
ವಿ.ಕಲ್ಪನಾ, 570(ಶೇ.91.2)
ಎಸ್.ಎನ್.ನವಿತ, 550(ಶೇ.88)
ಬಿ.ಎಂ.ವಿ.ಪ್ರೌಢಶಾಲೆ, ಭಕ್ತರಹಳ್ಳಿ
ಎಸ್.ಮೋನಿಕಾ, 598(ಶೇ.96)
ನಾಗರಿಕರಿಗೆ ನ್ಯಾಯಾಂಗದಲ್ಲಿ ವಿಶ್ವಾಸ ಮೂಡಬೇಕು
ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಬರುವಂತಹ ನಾಗರಿಕರಿಗೆ ನ್ಯಾಯಾಂಗದಲ್ಲಿ ವಿಶ್ವಾಸ ಮೂಡುವಂತೆ ವಕೀಲರು ಕಾರ್ಯನಿರ್ವಹಿಸಬೇಕು ಎಂದು ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ಹೇಳಿದರು.
ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶನಿವಾರ, ನ್ಯಾಯಾಧೀಶರು ವರ್ಗಾವಣೆಯಾಗಿರುವ ಅಂಗವಾಗಿ ತಾಲ್ಲೂಕು ವಕೀಲರ ಸಂಘ, ಹಾಗೂ ನ್ಯಾಯಾಲಯದ ಸಿಬ್ಬಂದಿಯಿಂದ ಆಯೋಜನೆ ಮಾಡಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲವೊಮ್ಮೆ ನ್ಯಾಯಪೀಠದಲ್ಲಿ ಕೊಡುವಂತಹ ಸಲಹೆಗಳನ್ನು ಸ್ವೀಕಾರ ಮಾಡಿಕೊಂಡು ಅಧ್ಯಯನ ಮಾಡಿ, ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸಿಕೊಡಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಏನಾದರೂ ಸಾಧಿಸಬಹುದಾಗಿದೆ, ಕೇವಲ ನ್ಯಾಯಾಲಯದ ಕಲಾಪಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿ ಪರಿವರ್ತನೆಯನ್ನು ತರುವಂತಹ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವಂತೆ ವಕೀಲರಿಗೆ ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಎಂಬುದು ಸಹಜ, ಆದರೂ ಕಾರ್ಯನಿರ್ವಹಿಸಿದ ಸ್ಥಳದ ಬಾಂಧವ್ಯ ಸದಾ ಹೃದಯದಲ್ಲಿ ಉಳಿದಿರುತ್ತದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರಾದ ಎಂ.ಬಿ.ಲೊಕೇಶ್, ಮಂಜುನಾಥ್, ಚಂದ್ರಶೇಖರ್ಗೌಡ, ಶ್ರೀನಿವಾಸ್, ವೇಣುಗೋಪಾಲ್, ಇ,ನಾರಾಯಣಪ್ಪ, ರವೀಂದ್ರನಾಥ್, ರಘು, ಸುಬ್ರಮಣಿ, ಚಂದ್ರಶೇಖರ್, ವೆಂಕಟೇಶ್ಬಾಬು ಮತ್ತಿತರರುಈ ಸಂದರ್ಭದಲ್ಲಿ ಹಾಜರಿದ್ದರು.
ಹಾರಿದೆ ನೌಕೆ ದೂರ ದೂರಕೆ
ಒಂದಲ್ಲ, ಎರಡಲ್ಲ, ಕಳೆದ ಮೂವತ್ತೈದು ವರ್ಷಗಳಿಂದ ಒಂದೇ ಓಟ ಕಿತ್ತು ಓಡುತ್ತಿದೆ ವಾಯೇಜರ್.
ಏನಿದು ವಾಯೇಜರ್?
ಇದೊಂದು ಮಾನವನಿರ್ಮಿತ ಅಂತರಿಕ್ಷನೌಕೆ. 1977ರಲ್ಲಿ ಉಡ್ಡಯನಗೊಂಡು ಅಂದಿನಿಂದ ಇಂದಿನವರೆಗೂ ಹಾರುತ್ತಲೇ ಇದೆ. ಸೂರ್ಯನ ಪ್ರಭಾವವಲಯದ ಆಚಿನ ಲೋಕಕ್ಕೆ ಹೊರಟಿರುವ ಪ್ರಪ್ರಥಮ ನೌಕೆ ಇದು.
ಮಾನವ ಆಗಸಕ್ಕೆ ಹಾರಿಬಿಟ್ಟ ಉಪಗ್ರಹಗಳು, ಗಗನನೌಕೆಗಳು ಇಂದಿನ ದಿನಗಳಲ್ಲಿ ವಿಶೇಷವೇನಲ್ಲ ನಿಜ. ಒಂದು ಕಾಲದಲ್ಲಿ ಮುಂದುವರಿದ ದೇಶಗಳಿಗಷ್ಟೇ ಸೀಮಿತವಾಗಿದ್ದ ಆ ಕೈಚಳಕವನ್ನು, ತಂತ್ರಜ್ಞಾನವನ್ನು ಇಂದು ಹಲವಾರು ದೇಶಗಳು ತಮ್ಮದಾಗಿಸಿಕೊಂಡಿವೆ. ಭೂಉಪಗ್ರಹಗಳನ್ನು ಬಿಟ್ಟರೆ, ಚಂದ್ರ, ಮಂಗಳರ ಅಧ್ಯಯನಕ್ಕೆ ತೊಡಗಿದ ನೌಕೆಗಳು ಹತ್ತಾರಿವೆ. ಇನ್ನೂ ದೂರಕ್ಕೆ ಹೊರಟರೆ, ಪಯೋನೀರ್ ಹೆಸರಿನ ನೌಕಾಜೋಡಿಗಳು, ಪ್ಲೂಟೋನತ್ತ ಓಟ ಕಿತ್ತಿರುವ ನ್ಯೂಹಾರಿಝಾನ್ಸ್ ಹಾಗೂ ವಾಯೇಜರ್ ಜೋಡಿಗಳು ಹಾರುತ್ತಿವೆ. ಇವುಗಳಲ್ಲಿ ವಾಯೇಜರ್ 1 ಇತ್ತೀಚೆಗೆ ತಾನೇ 35 ವರ್ಷಗಳ ಓಟಗಳನ್ನು ಪೂರೈಸಿ, ದಣಿವಿಲ್ಲದೆ ಮತ್ತೂ ಮುಂದಕ್ಕೆ ಸಾಗುತ್ತಿದೆ. ಸೌರಮಂಡಲದ ಅಂಚಿನಲ್ಲಿರುವ ಸೂರ್ಯಗೋಲದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳುಹಿ ಆನಂತರ ಶಕ್ತಿ ಇರುವವರೆಗೂ ಓಡುತ್ತಿರಲು ಅದನ್ನು ಸಜ್ಜುಗೊಳಿಸಲಾಗಿದೆ. ವಾಯೇಜರ್ನಲ್ಲಿರುವ ಅಣುವಿಕಿರಣ ಮೂಲದ ವಿದ್ಯುತ್ 2025 ವರೆಗೆ ನೌಕೆಯನ್ನು ಹೊತ್ತೊಯ್ಯಲಿದೆ. ಅಲ್ಲಿಯವರೆಗೂ ಮಾಹಿತಿಗಳ ಅಲೆ ಸೌರವ್ಯೂಹದ ಅಂಚಿನಿಂದ ಈ ಭೂಗ್ರಹದವರೆಗೆ ಹರಿದು ಬರಲಿದೆ.
ಹಿನ್ನೆಲೆ:
ನಿಸರ್ಗದ ದಿನನಿತ್ಯದ ವಹಿವಾಟುಗಳನ್ನು ಮಾನವ ಅಚ್ಚರಿಯಿಂದ ಕಾಣುತ್ತಿದ್ದ ದಿನಗಳಿದ್ದವು, ಸೂರ್ಯಕೇಂದ್ರಿತ ವ್ಯವಸ್ಥೆಯಲ್ಲಿ ನಾವಿದ್ದೇವೆ, ನಮ್ಮೆಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ ಎಂದು ಕೊಪರ್ನಿಕಸ್ ಸಾರಿದಾಗ ಇಡೀ ಜಗತ್ತೇ ದಿಗ್ಭ್ರಮೆಗೊಂಡಿತ್ತು. ಅಲ್ಲಿಂದ ನಾವೀಗ ಬಹು ದೂರ ಸಾಗಿ ಬಂದಿದ್ದೇವೆ. ನಮ್ಮ ಸುತ್ತಲ ಬ್ರಹ್ಮಾಂಡದ ಬಗ್ಗೆ ಅರಿವು ಅನೇಕ ಪಟ್ಟು ಹೆಚ್ಚಿದೆ. ಕಣ್ಣಿಗೆ ಕಂಡದ್ದನ್ನು ಪ್ರಯೋಗಗಳ ಮೂಲಕ ಒರೆಹಚ್ಚಿ, ಕಾಣದ್ದನ್ನು ಮೊದಲು ಕಲ್ಪಿಸಿ, ಆನಂತರ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳುವಂಥಹ ಬುದ್ಧಿಮಟ್ಟ ಮಾನವನದ್ದಾಗಿದೆ.
1977 ಬಾನಾಸಕ್ತಿ ಉಳ್ಳವರಿಗೆ ವಿಶೇಷ ವರ್ಷ. ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಗಳು ಒಂದರ ಪಕ್ಕ ಒಂದು ಹಾದುಹೋಗುತ್ತ ಒಂದೇ ಗೆರೆಯಲ್ಲಿ ಕೆಲಕಾಲ ಸಾಗುವ, 170 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಅಪರೂಪದ ವಿದ್ಯಮಾನ, ಖಗೋಳಶಾಸ್ತ್ರಜ್ಞರಿಗೆ ಈ ಅವಕಾಶವನ್ನು ಬಳಸಿಕೊಂಡು ಆಚೆ ಹಾರಹೊರಟಿರುವ ಬಾನನೌಕೆಗಳಿಗೆ ಈ ಗ್ರಹಗಳ ಗುರುತ್ವದ ನೂಕುಬಲ ದೊರೆಯುವಂತೆ ಮಾಡುವ ಹಂಬಲ ಹೊಂದಿದ್ದರು.*
ಇದಕ್ಕೆಂದು ಅಮೆರಿಕದಲ್ಲೊಂದೇ ಹತ್ತಾರು ಯೋಜನೆಗಳು ಸಿದ್ಧಗೊಂಡವು. ಕೊನೆಯಲ್ಲಿ ಹಣಕಾಸಿನ ಅನುಮತಿ ದೊರೆತಿದ್ದು ವಾಯೇಜರ್ ಯೋಜನೆಗೆ ಮಾತ್ರ. ವಾಯೇಜರ್ ಹೆಸರಿನ ಎರಡು ನೌಕೆಗಳು ನಿರ್ಮಾಣಗೊಂಡು 1977ರ ಅಗಸ್ಟ್ ನಲ್ಲಿ ವಾಯೇಜರ್ 2 ಹಾಗೂ ಸೆಪ್ಟೆಂಬರಿನಲ್ಲಿ ವಾಯೇಜರ್ 1 ಮ್ಯಾರಥಾನ್ ಓಟಕ್ಕೆ ತೊಡಗಿದವು. ಎರಡೂ ಹಾರಿದ್ದು ಅಮೆರಿಕದ ಕೇಪ್ ಕಾರ್ನಿವಲ್ನಿಂದಲೇ ದರೂ ಅವುಗಳ ಹಾರುಮಾರ್ಗಗಳು ಬೇರೆಬೇರೆ. ವಾಯೇಜರ್ 1 ಕೊನೆಗೆ ಹೊರಟರೂ ವೇಗದ ಓಟ ಹಾಗೂ ಸಮೀಪದ ಮಾರ್ಗದಿಂದಾಗಿ ಮುಂದೆಮುಂದಕ್ಕೆ ಹಾರುತ್ತಾ ಹೊರಟಿತು. ಗುರು ಮತ್ತು ಶನಿ ಗ್ರಹಗಳ ಮಾರ್ಗವಾಗಿ ಹಾರಿದ ವಾಯೇಜರ್ 1 90ರ ದಶಕದಲ್ಲಿ ಇನ್ನೆರಡು ಬಾಹ್ಯಾಕಾಶ ನೌಕೆಗಳಾದ ಪಯೊನಿರ್ 10 ಮತ್ತು ಪಯೊನಿರ್ 11 ರನ್ನು ಹಿಂದಿಕ್ಕಿ ಭೂಮಿಯಿಂದ ಮತ್ತೂ ದೂರಕ್ಕೆ ಹಾರಿತು. ಮಾನವನಿರ್ಮಿತ ಹಾಗೂ ಮಾನವನಿಂದ ಅತಿ ದೂರಕ್ಕೆ ಹಾರುತ್ತಿರುವ ಬಾನ ನೌಕೆ ಎಂಬ ಹೆಗ್ಗಳಿಕೆಯನ್ನು ವಾಯೇಜರ್ 1990ರಲ್ಲಿಯೇ ಪಡೆಯಿತು.
ಪುಟ್ಟ 64 ಕಿಲೋಬೈಟ್ ಸಾಮಥ್ರ್ಯದ ಕಂಪ್ಯೂಟರ್ ಪೆಟ್ಟಿಗೆ, ದೊಡ್ಡದಾದ ಅಂಟೆನಾ, ಕ್ಯಾಮೆರಾಗಳು, ವಿಕಿರಣ ಮೂಲದ ಶಕ್ತಿ ಆಕರ, ಸೂರ್ಯನ ಕಾಂತವನ್ನು ಅಳೆಯುವ ಸಾಧನ ಇಷ್ಟೇ ಅಲ್ಲ, ಅಮೂಲ್ಯವಾದ ಮಾನವಮಾಹಿತಿಯನ್ನು ಹೊಂದಿದ ಗೋಲ್ಡನ್ ರೆಕಾರ್ಡನ್ನೂ ಕೂಡ ವಾಯೇಜರ್ ತನ್ನೊಡನೆ ಒಯ್ದಿದೆ. ದೂರದ ಅಂತರಿಕ್ಷದಲ್ಲಿ ಅನ್ಯಜೀವಿಗಳೇನಾದರೂ ಎದುರಾಗಿ ವಾಯೇಜರನ್ನು ಜಪ್ತಿ ಮಾಡಿದರೆ? (ಅಂಥ ಅವಕಾಶಗಳು ಅತೀ ಕಡಿಮೆ, ಏಕೆಂದರೆ ಬೃಹತ್ ವಿಶ್ವದಲ್ಲಿ ಸೂಜಿಮೊನೆಗಿಂತ ಚಿಕ್ಕದಾಗಿರುವ ವಾಯೇಜರ್ ಇನ್ನೊಂದು ನಕ್ಷತ್ರದ ಪಕ್ಕ ಹಾದುಹೋಗುವುದಾದರೂ ಅದಿನ್ನೂ ನಲವತ್ತು ಸಾವಿರ ವರ್ಷಗಳ ನಂತರ!)
ಗೋಲ್ಡನ್ ರೆಕಾರ್ಡ್ ಸಿಡಿಯಲ್ಲಿ 55 ಭಾಷೆಗಳಲ್ಲಿ ಶುಭಾಶಯ ನುಡಿಗಳು, ಸಂಗೀತ, ಪ್ರಾಣಿಗಳ ಕೂಗುಗಳು, ಸೌರಮಂಡಲದ, ಭೂಮಿ, ಮನುಷ್ಯ, ಪ್ರಾಣಿ ಪಕ್ಷಿಗಳ ರೇಖಾಚಿತ್ರಗಳು ಇತ್ಯಾದಿ ಭೂಮಿಯ ಜೀವಜಗತ್ತಿನ ಪ್ರಮುಖ ಲಕ್ಷಣಗಳೆಲ್ಲವೂ ಇವೆ.
ಸೂರ್ಯನ ಸುತ್ತ ಮೂರನೇ ಗ್ರಹವಾಗಿ ನಾವು ಹಾರುತ್ತಿದ್ದೇವೆವಷ್ಟೆ? ಬುಧ, ಶುಕ್ರ, ಭೂಮಿ, ಮಂಗಳ ಗ್ರಹಗಳು ಗಟ್ಟಿಗ್ರಹಗಳು, ಅವುಗಳ ನಂತರ ಕ್ಷುದ್ರಗ್ರಹಗಳ ಪಟ್ಟಿ, ಆ ಬಳಿಕ ಗುರು,ಶನಿ, ಯುರೇನಸ್ ಮತ್ತು ನೆಪ್ಚೂನ್ ಅನಿಲಗ್ರಹಗಳು ಈ ನಡುವೆ ನೂರಾರು ಉಪಗ್ರಹಗಳು, ಕಿರುಗ್ರಹಗಳು ಕೊನೆಯಲ್ಲಿ ಸೂರ್ಯಗೋಲ ಮತ್ತು ಅದರಾಚೆ ದೀರ್ಘಕಕ್ಷೆಯ ಧೂಮಕೇತುಗಳ ಮೂಲನೆಲೆಯಾಗಿರುವ ವೈಪರ್ ಪಟ್ಟಿ ಹಾಗೂ ಕಟ್ಟಕಡೆಗಿನ ಊರ್ತ್ ಮೋಡದ ಕಡಗದೊಂದಿಗೆ ಸೂರ್ಯನ ಶೃಂಗಾರ ಮುಗಿಯುತ್ತದೆ. ಊರ್ತ್ ಕಡಗದ ಆಚೆ ಅಂತರತಾರಾ ವಲಯ. ಅಲ್ಲಿ ಸೂರ್ಯನದ್ದೇನೂ ಪ್ರಭಾವವಿಲ್ಲ. ಅಲ್ಲಿ ವಿಕಿರಣಭರಿತ ಕಾಸ್ಮಿಕ್ ಕಿರಣಗಳ ಹೊಯ್ದಾಟ ನಡೆಯುತ್ತಿದೆ.
2009ರ ಅಗಸ್ಟ್ ತಿಂಗಳಲ್ಲಿ ಸೂರ್ಯನಿಂದ 1600 ಕೋಟಿ ದೂರದಲ್ಲಿ ತಾಸಿಗೆ ಅರವತ್ತು ಸಾವಿರ ಕಿಮೀ ವೇಗದಲ್ಲಿ ಹಾರುತ್ತಿದ್ದ ವಾಯೇಜರ್ ಸೆಕೆಂಡಿಗೆ ಲಕ್ಷಗಟ್ಟಲೆ ಕಿಮೀ ವೇಗದಲ್ಲಿ ಬೀಸುತ್ರಿದ್ದ ಸೂರ್ಯಗಾಳಿ ಒಮ್ಮೆಗೇ ಕಡಿಮೆಯಾಗಿದೆಯೆಂದು ವರದಿ ಮಾಡಿದೆ.
ಸೂರ್ಯ ಬಿಸಿಲು ಬೆಳಕನ್ನಷ್ಟೇ ಅಲ್ಲ, ವಿದ್ಯುತ್ ಕಣಗಳನ್ನೂ ಸದಾಕಾಲ ಫೂತ್ಕರಿಸುತ್ತಿದ್ದಾನೆ. ಭೂಮಿಯ ಕಾಂತಗುಣ ಹಾಗೂ ವಾಯುಮಂಡಲದಿಂದಾಗಿ ಆ ಸೌರಗಾಳಿಯಿಂದ ನಮಗೆ ರಕ್ಷಣೆ ದೊರೆಯುತ್ತಿದೆ. ಆ ವಿದ್ಯುತ್ ಕಣಗಳು ಸೌರಮಂಡಲದ ಅಂಚಿನವರೆಗೂ ಸಾಗಿ ಅಲ್ಲಿ ಶಕ್ತಿಕಳೆದುಕೊಂಡು ಗುಡ್ಡೆಯಾಗಿ ಬೀಳುತ್ತವೆ. ಅದೇ ಸೂರ್ಯಗೋಲ. ಈ ಗೋಲದ ಒಳಗಡೆ ಇರುವ ಪ್ರತಿಯೊಂದು ವಸ್ತುವೂ ಸೌರವ್ಯೂಹಕ್ಕೆ ಸೇರಿದ್ದು. ಬಾಹ್ಯಆಕಾಶದ ಕಾಸ್ಮಿಕ್ ಕಿರಣಗಳು ಸೌರವ್ಯೂಹವನ್ನು ಪ್ರವೇಶಿಸದಂತೆ ಈ ಗೋಲ ತಡೆಯುತ್ತದೆ. ಸೂರ್ಯಗೋಲದ ಅಂಚೆಂದರೆ ಸದಾ ತುಮುಲದ ಪ್ರದೇಶ, ಅಲ್ಲಿ ಆಚಿನ ಬ್ರಹ್ಮಾಂಡದಿಂದ ಜಿಗಿದು ಬರುತ್ತಿರುವ ವಿಕಿರಣದ ಬಾಣಗಳಿವೆ, ಇಲ್ಲಿಂದ ಆಚೆ ಜಿಗಿಯಲೆತ್ನಿಸುವ ಸೂರ್ಯಕಣಗಳಿವೆ, ಕಾಂತಕಿರಣಗಳಿಲ್ಲಿ ಗುಡ್ಡೆಯಾಗಿ ಬಿದ್ದಿವೆ, ಆಗೀಗೊಂದಿಷ್ಟು ಚಿಮ್ಮಿ ಹೊರಕ್ಕೆ ಜಿಗಿಯುತ್ತಿವೆ. ಅದೊಂದು ಕದನ ಸ್ಥಳ ಅಲ್ಲಿ ಸದಾಕಾಲ ಸೂರ್ಯನಿಂದ ಚಿಮ್ಮುವ ಕಿರಣಗಳಿಗೂ ಬಾಹ್ಯ ಕಾಸ್ಮಿಕ್ ಕಿರಣಗಳಿಗೂ ಜಟಾಪಟಿ. ಸೋತು ಬಿದ್ದ ಸೂರ್ಯಕಣಗಳು ಗುಳ್ಳೆಯಾಗಿ ಹರಡಿವೆ. ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತ ಬಂದಿದೆಯೆಂದು ವಾಯೇಜರ್ ತಿಳಿಸಿದೆ.
ಸೌರಮಂಡಲದ ಹೊರಗಣ ನಾಲ್ಕೂ ಅನಿಲದೈತ್ಯಗಳ ಬಗ್ಗೆ ಬಹಳಷ್ಟು ವಿವರಗಳನ್ನು ವಾಯೇಜರ್ ನೌಕೆಗಳು ಕಳುಹಿಸಿವೆ. ಗುರುಗ್ರಹವನ್ನು ಹಾದು ಹೋಗುವಾಗ ಅದಕ್ಕಿರುವ ಅಸ್ಪಷ್ಟ ಬಳೆಗಳು, ಎರಡು ಪುಟ್ಟದಾದ ಉಪಗ್ರಹಗಳು, ಅದರ ವಾತಾವರಣದ ಸಮೀಪದ ದೃಶ್ಯಗಳು, ಯುರೋಪಾ ಹೆಸರಿನ ಉಪಗ್ರಹದ ಹಿಮಗಡ್ಡೆಯ ಬಿರುಕಿನಲ್ಲಿ ಸಮುದ್ರವಿರುವ ಲಕ್ಷಣ, ಶನಿಯ ಉಂಗುರದೊಳಗಡೆಯಿಂದ ಇಣುಕಿದ ಉಪಗ್ರಹಗಳು, ಟೈಟಾನ್ ಉಪಗ್ರಹದ ವಾತಾವರಣದಲ್ಲಿ ಸಾರಜನಕ ಮತ್ತು ಮಿಥೇನ್ ಅನಿಲಗಳ ಇರುವಿಕೆ, ನೆಪ್ಚೂನಿನ ಆಗಸದಲ್ಲಿ ವೇಗವಾಗಿ ಬೀಸುತ್ತಿದ್ದ ಬಿರುಗಾಳಿ ಇವೆಲ್ಲವೂ ವಾಯೇಜರ್ ಜೋಡಿನೌಕೆಗಳ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ನೋಟಗಳು.
ಲೋ, ಗುರುಗ್ರಹವನ್ನು ಸುತ್ತುತ್ತಿರುವ ಉಪಗ್ರಹ. ಲೋ ದಿಂದ ಬರೀ 20 ಸಾವಿರ ಕಿಮೀ ದೂರದಿಂದ 1979 ರಲ್ಲಿ ಹಾದುಹೋದ ವಾಯೇಜರ್ ಮೇಲ್ಮೈನಲ್ಲಿ ಜ್ವಾಲಾಮುಖಿಯ ಕುರುಹನ್ನು ಪತ್ತೆ ಮಾಡಿತ್ತು. ಸೌರಮಂಡಲದಲ್ಲಿ ಭೂಮಿಯನ್ನು ಬಿಟ್ಟರೆ ಜ್ವಾಲಾಮುಖಿ ಬೇರೆಡೆ ಇರಬಹುದೆಂಬ ಊಹೆಯೇ ವಿಜ್ಞಾನಿಗಳಲ್ಲಿ ಉದ್ವೇಗ ಮೂಡಿಸಿತ್ತು. ಗುರುವಿನ ಯುರೋಪಾ, ಶನಿಯ ಟೈಟಾನ್ ಹಾಗೂ ನೆಪ್ಚೂನಿನ ಟ್ರೈಟಾನ್ ಉಪಗ್ರಹಗಳಲ್ಲಿ ನೀರಿನ ಮೂಲ ಇರÀಬಹುದೆಂದು ವಾಯೇಜರಿನ ಮಾಹಿತಿಗಳು ತಿಳಿಸಿದವು.
ದೂರ ಹೋದಂತೆ ವಾಯೇಜರ್ನಿಂದ ಬರುತ್ತಿದ್ದ ಮಾಹಿತಿಯ ವೇಗವೂ ತಗ್ಗಿದೆ. ಆದರೆ ವಿಜ್ಞಾನಿಗಳ ಉತ್ಸಾಹ ಕುಂದಿಲ್ಲ. ಭೌತ, ಗಣಿತಶಾಸ್ತ್ರಗಳ ಲೆಕ್ಕಾಚಾರ ಹಾಕಿ ಭೂಮಿಯ ಮೇಲೆ ರೇಡಿಯೋ ಅಲೆಗಳನ್ನು ಸಂಗ್ರಹಿಸುವ ಅಂಟೆನಾಗಳ ಸಾಮಥ್ರ್ಯವನ್ನು ಹೆಚ್ಚಿಸಿ ವಾಯೇಜರ್ ಬಾನಾಡಿಯ ನಾಡಿಮಿಡಿತವನ್ನು ಇನ್ನೂ ದಶಕಗಳ ಕಾಲ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.
ಸೂರ್ಯನಿಂದ ದೂರ ಹೋಗುವುದೆಂದರೆ, ಬಿಸಿಲ ತಾಪದಿಂದ, ಬೆಳಕಿನಿಂದ ವಿಮುಖರಾಗುತ್ತ ಹಾರುವುದು, ಜೊತೆಜೊತೆಗೇ ಅಂತರಿಕ್ಷದ ಕೊರೆಯುವ ಚಳಿಯ ವಾತಾವರಣದಲ್ಲಿ ಉಪಕರಣಗಳು ಕೆಲಸ ಮಾಡಬೇಕು. ವಾಯೇಜರ್ ಗೆ ಶಕ್ತಿಯ ಮೂಲ ವಿಕಿರಣವಸ್ತು ಪ್ಲುಟೋನಿಯಂ. ಪ್ರತಿ 87 ವರ್ಷಕ್ಕೆ ಅರ್ಧದಷ್ಟಾಗುವ ಪ್ಲುಟೋನಿಯಂ-238. ಅದು ಕರಗುತ್ತಾ ಬಂದಂತೆ ನೌಕೆಗೆ ದೊರೆಯುವ ವಿದ್ಯುತ್ ಕೂಡಾ ಕಡಿಮೆಯಾಗುತ್ತ ಬರುತ್ತದೆ. ಹೀಗಾಗಿ ಆಗಾಗ ನೌಕೆಯ ಕೆಲವು ಉಪಕರಣಗಳಿಗೆ ವಿಶ್ರಾಮ ನೀಡಲೇಬೇಕಾಗುತ್ತದೆ. 17 ವರ್ಷಗಳ ಹಿಂದೆಯೇ ಬಣ್ಣದ ಚಿತ್ರಗಳನ್ನು ದಾಖಲಿಸುವ ಸ್ಪೆಕ್ಟ್ರೋಮೀಟರಿನ ಸುತ್ತಲ ಬಿಸಿಮಾಡುವ ಉಪಕರಣಗಳನ್ನು ಸಂದೇಶ ನೀಡಿ ಆರಿಸಲಾಗಿತ್ತು. -35 ಡಿಗ್ರಿ ಸೆಲ್ಶಿಯಸ್ ತಡೆದುಕೊಳ್ಳಬಹುದೆಂದುಕೊಂಡ ವಿಜ್ಞಾನಿಗಳ ಅಂದಾಜನ್ನು ಮೀರಿ ವಾಯೇಜರ್ -56 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲೂ ಕೆಲಸ ಮಾಡುತ್ತಲೇ ಇದೆ.
ವಾಯೇಜರ್ ಹಾರಾಟಕ್ಕೆ ಕಳೆದ ಕೆಲವು ವರ್ಷಗಳಿಂದ ಎಲ್ಲಿಲ್ಲದ ಪ್ರಾಮುಖ್ಯತೆ ದೊರೆಯುತ್ತಿದೆ. ಈ ಜೋಡಿ ನೌಕೆಗಳಿಂದ ಬರುವ ಸಂದೇಶಗಳು ಮಾನವನಿಗೆ ಅತ್ಯಮೂಲ್ಯವೆಂದು ಭಾವಿಸಲಾಗುತ್ತಿದೆ. ಬಾನವಿಸ್ತಾರದಲ್ಲಿ ಹಾರುತ್ತಲೇ ಮನುಜನ ಜ್ಞಾನದ ಕ್ಷಿತಿಜವನ್ನೂ ವಾಯೇಜರ್ ಜೋಡಿ ವಿಸ್ತರಿಸುತ್ತಿವೆ.
* ಗುರುತ್ವವೇ ಕವಣೆಗೋಲು
ನಾವು ಭೂಮಿಗೆ, ಭೂಮಿ ಸೂರ್ಯನಿಗೆ, ಸೂರ್ಯ ಕ್ಷೀರಪಥ ಎಂಬ ಗೆಲಾಕ್ಸಿಗೆ ಗುರುತ್ವಾಕರ್ಷಣೆಯ ಮೂಲಕ ಬಂಧಿತರಾಗಿದ್ದೇವಷ್ಟೆ? ಇದೇ ಗುರುತ್ವವನ್ನು ಚಿಮ್ಮುಕವಣೆಯಂತೆ ಬಳಸಿಕೊಂಡು ಬಾನನೌಕೆಗಳ ಹಾರಾಟದ ಸಮಯ ಹಾಗೂ ಇಂಧನದ ಉಳಿತಾಯ ಮಾಡುವ ತಂತ್ರವೊಂದನ್ನು ಖಗೋಳಶಾಸ್ತ್ರಜ್ಞರು ರೂಢಿಸಿಕೊಂಡಿದ್ದಾರೆ.
ಸೂರ್ಯನ ಸಮೀಪವಿರುವ ಅಥವಾ ಭೂಮಿಯಿಂದ ಸೂರ್ಯನ ಕಡೆ ಇರುವ ಗ್ರಹಗಳತ್ತ ನೌಕೆಯೊಂದು ಹಾರುವುದಾದರೆ, ಅದರ ವೇಗ ಹೆಚ್ಚುತ್ತದೆ, ಸೂರ್ಯನ ಗುರುತ್ವವನ್ನು ಮೀರಿ ದೂರ ಹಾರುವುದಾದಲ್ಲಿ ಅದರ ವೇಗಕ್ಕೆ ಬಲ ಹೆಚ್ಚು ಬೇಕಾಗುತ್ತದೆ. ಹೊರಗ್ರಹಗಳಿಗೆ ಹಾರುವ ನೌಕೆ ಉದಾಹರಣೆಗೆ ಗುರುಗ್ರಹದ ಸಮೀಪ ಸಾಗಿತು ಎಂದಿಟ್ಟುಕೊಳ್ಳಿ, ಆಗ ಗುರುವಿನ ಗುರುತ್ವದ ಎಳೆತ ನೌಕೆಯ ವೇಗವನ್ನು ಅಧಿಕಗೊಳಿಸುತ್ತದೆ. ಅಂತೆಯೇ ವೇಗವಾಗಿ ಸೂರ್ಯನನ್ನು ಸುತ್ತುತ್ತಿರುವ ಗುರುವಿನ ಆವೇಗ ತನ್ನೊಂದಿಗೆ ನೌಕೆಯನ್ನೂ ಎಳೆದು ಬಿಸಾಕುತ್ತದೆ. ಅಲ್ಲಿಂದ ಚಿಮ್ಮಿದ ನೌಕೆ ಮುಂದೆ ಯುರೇನಸ್, ಆನಂತರ ನೆಪ್ಚೂನಿನ ಕಕ್ಷೆಗಳಲ್ಲೂ ಈ ರೀತಿಯಾಗಿ ಹಾರಿ ತನ್ನ ವೇಗವರ್ಧನೆ ಮಾಡಿಕೊಳ್ಳಬಹುದು. ಆದರೆ ನೌಕೆಯ ಉಡ್ಡಯನದ ಸಮಯ, ಅದರ ವೇಗ, ಗ್ರಹಗಳು ಹಾರುವ ದಿಕ್ಕು ಮತ್ತವುಗಳ ವೇಗ ಇವೆಲ್ಲವೂ ಪರಿಗಣಿತವಾಗುತ್ತವೆ. ಸ್ವಲ್ಪ ಅಜಾಗರೂಕತೆಯಾದರೂ ನೌಕೆ ಉಪಗ್ರಹದ ಮೇಲ್ಮೈಯನ್ನು ಅಪ್ಪಳಿಸಬಹುದು.
ವಾಯೇಜರ್ ಮತ್ತು ನಾವು
ವಾಯೇಜರುಗಳು ತಮ್ಮ ಪಯಣವನ್ನು ಆರಂಭಿಸಿದಾಗ ಈಗಿನ ತರುಣರಲ್ಲಿ ಬಹಳಷ್ಟು ಜನರು ಹುಟ್ಟಿಯೇ ಇರಲಿಲ್ಲ, ಕೆಲವರು ಇನ್ನೂ ಚಿಕ್ಕವರಾಗಿದ್ದರು. ಆದರೆ ಎಡ್ವರ್ಡ್ ಸ್ಟೋನ್ ಎಂಬ ತಂತ್ರಜ್ಞ ವಾಯೇಜರ್ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವನು ಇಂದು ಎಪ್ಪತ್ತಾರು ವರ್ಷದ (ಆದರೆ ಇನ್ನೂ ವಿದ್ಯಾಸಂಸ್ಥೆಯೊಂದರಲ್ಲಿ ಅಧ್ಯಾಪಕರಾಗಿ ದುಡಿಯುವ) ಮುದುಕ. ಆತ ‘ವಾಯೇಜರ್ ಗಳಿಂದಾಗಿಯೇ ಸೌರಮಂಡಲದ ನಮ್ಮ ಜ್ಞಾನ ಇನ್ನೂ ಹೆಚ್ಚಾಗಿದೆ’ ಎಂದು ಹೆಮ್ಮೆ ಪಡುತ್ತ ಸೂರ್ಯಗೋಲವನ್ನು ದಾಟಿ ಆಚಿನ ಲೋಕದ ಬಗ್ಗೆ ವಾಯೇಜರ್ ಕಣ್ಣು ದಾಖಲಿಸುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಶನಿಗ್ರಹದ ಸಮೀಪದಿಂದ ಶನಿಯ ಉಂಗುರದಲ್ಲಿರುವ ತಿರುವನ್ನು ವಾಯೇಜರ್ ಬಹಿರಂಗಗೊಳಿಸಿದಾಗ ಉಂಟಾದ ಸಂತೋಷವನ್ನು ಎಡ್ ಇಂದಿಗೂ ನೆನೆಯುತ್ತಾರೆ.
ನೂರಾರು ಚಿಗುರು ಮೀಸೆಯ ಯುವಕರೂ ವಾಯೇಜರಿನ ಅನ್ವೇಷಣೆಗಳ ಬಗ್ಗೆ ಬೆರಗು ಪಟ್ಟಿದ್ದಾರೆ. ಹೀಗೆ ವಯಸ್ಸಿನ ಬೇಧವಿಲ್ಲದೆ ವಾಯೇಜರ್ ಎಲ್ಲರಿಗೂ ಅರಿವಿನ ಫಲ ಹಂಚುತ್ತಿದೆ.
ವಾಯೇಜರ್ ಭೂಮಿಯಲ್ಲಿ
ಅದೊಂದು ಅತಿ ಸಾಮಾನ್ಯದ ಕೊಠಡಿ, ಅಲ್ಲಿಮೂಲೆಯಲ್ಲಿ ಓಬೀರಾಯನ ಕಾಲದ ಕಂಪ್ಯೂಟರ್. ಅಲ್ಲೆರಡು ಫಲಕಗಳು, ’ಮಿಶನ್ ಕಂಟ್ರೋಲರ್À’ ಹಾಗೂ ‘ವಾಯೇಜರಿನ ಪ್ರಮುಖ ಯಂತ್ರಾಂಶಗಳು, ದಯವಿಟ್ಟು ಮುಟ್ಟಬೇಡಿ’
ವಾಯೇಜರ್ ಯೋಜನೆಗೆಂದು ಬಳಸಲಾಗುತ್ತಿರುವ ಹೆಚ್ಚಿನ ತಂತ್ರಾಂಶಗಳನ್ನು ಬದಲಿಸಲಾಗಿದೆ, ಆದರೆ ಕೆಲವು ಯಂತ್ರಭಾಗಗಳು ಇನ್ನೂ ಹಾಗೇ ಇವೆ. ಹಾರ್ಡ್ವೇರ್ ಭಾಗಗಳು ಶಿಥಿಲಗೊಳ್ಳುತ್ತಿವೆ. ಇಂದಿನ ಬಳಸಿಬಿಸಾಕುವ ತಂತ್ರಜ್ಞಾನ ಪೃವೃತ್ತಿಯ ನಡುವೆಯೂ ಕಳೆದ 35 ವರ್ಷಗಳಿಂದ ಒಂದೆಡೆ ಕೂತು ಕಾರ್ಯನಿರ್ವಹಿಸುತ್ತಿರುವ ಈ ಯಂತ್ರೋಪಕರಣಗಳು…ಕಾಲಯಂತ್ರಗಳೂ ಆಗಿವೆ.
20 ಅರೆಕಾಲಿಕ ವಿಜ್ಞಾನಿಗಳು ಪಾಳಿಯ ಮೇಲೆ ಕೆಲಸ ಮಾಡುತ್ತ ಬಂದ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಣೆ ನಡೆಸುತ್ತಾರೆ. ವಾಯೇಜರ್1 ಕಳಿಸಿದ ಸಂದೇಶ ಇಲ್ಲಿಗೆ ತಲುಪಲು 17 ಗಂಟೆಗಳು ಬೇಕು. ಅಂಕಿಅಂಶಗಳನ್ನು ಸಂಸ್ಕರಿಸಿ ಅರ್ಥಪೂರ್ಣ ಮಾಹಿತಿಗಳನ್ನಾಗಿಸಲು ತಿಂಗಳುಗಟ್ಟಲೆ ಕಾಲ ಹಿಡಿಯುತ್ತದೆ.
ಮಂದನೀಲಿ ಬಣ್ಣದ ಭೂಮಿ
1990ರಲ್ಲಿ ವಾಯೇಜರ್ 1 ಅರವತ್ತು ದಶಕೋಟಿ ಕಿಮೀ ದೂರದಿಂದ ಮಂದನೀಲಿ ಬಣ್ಣದ ಭೂಮಿಯ ಚಿತ್ರವನ್ನು ತೆಗೆದು ಭೂಮಿಗೆ ರವಾನಿಸಿತು. ಅದು ಪ್ರಸಿದ್ಧ ವೈಜ್ಞಾನಿಕ ಬರಹಗಾರ ಕಾರ್ಲ್ ಸಾಗನ್ ಅವರ ವಿನಂತಿಯ ಮೇರೆಗೆ ತೆಗೆದ ಚಿತ್ರ. ಅಂದು ಮುಂದೆ ನೆಟ್ಟಿದ್ದ ವಾಯೇಜರಿನ ಕ್ಯಾಮೆರಾ ಕಣ್ಣನ್ನು ತಿರುಗಿಸಿ ಅನಂತ ವಿಸ್ತಾರದ ಹಿನ್ನೆಲೆಯಲ್ಲಿ ಭೂಗ್ರಹದ ಚಿತ್ರವನ್ನು ತೆಗೆಯುವಂತೆ ನಾಸಾ ಆದೇಶಿಸಿತು. ಸಾಗನ್ನರ ಮುಂದಿನ ಪುಸ್ತಕಕ್ಕೆ ನೀಲಿ ಚುಕ್ಕೆಯ ಆ ಚಿತ್ರ ಮುಖಪುಟ ಚಿತ್ರವಾಗಿ ರಾರಾಜಿಸಿದೆ. ಸಾಗನ್ ಅವರಿಂದ ಬಂದ ಮನವಿಯನ್ನು ವಿಜ್ಞಾನಿಗಳು ಅಂಜುತ್ತಲೇ ಸ್ವೀಕರಿಸಿದರು, ಏಕೆಂದರೆ, ಕ್ಯಾಮೆರಾವನ್ನು ಸೂರ್ಯನತ್ತ ತಿರುಗಿಸುವುದೆಂದರೆ ಸೌರತಾಪದ ಅಪಾಯವನ್ನು ಎದುರಿಸಿದಂತೆಯೇ. ಮೊದಲು ಭೂಹೊರಗ್ರಹಗಳ ನೋಟವನ್ನು ದಾಖಲಿಸಿ, ಆನಂತರ ಭೂಮಿಯ ಚಿತ್ರ ತೆಗೆಯಲಾಯಿತು.
ಸರೋಜಾ ಪ್ರಕಾಶ
ಚುನಾವಣೆ ಬಹಿಷ್ಕಾರ ಮಾಡುವಂತೆ ಬೈಕ್ ರ್ಯಾಲಿ
ಜೂನ್ ೨ ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾಮಪತ್ರಗಳನ್ನು ಸಲ್ಲಿಸದೆ, ಮತದಾನ ಮಾಡದೆ ಎಲ್ಲಾ ಜನರು ಒಗ್ಗಟ್ಟಿನಿಂದ ಚುನಾವಣೆ ಬಹಿಷ್ಕಾರ ಮಾಡುವಂತೆ ಮನವೊಲಿಸುವಂತಹ ಕೆಲಸಗಳು ಆರಂಭವಾಗಿದೆ.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಬೈಕ್ ರ್ಯಾಲಿಯ ಮುಖಾಂತರ ಶುಕ್ರವಾರ ತೆರಳಿದ ಅಬ್ಲೂಡು ಪಂಚಾಯತಿಯ ಗ್ರಾಮಸ್ಥರು ಹಾಗೂ ಮುಖಂಡರು, ಬಯಲು ಸೀಮೆ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವ ತನಕ ಚುನಾವಣೆಗಳನ್ನು ಬಹಿಷ್ಕರಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಪ್ರತಿಯೊಂದು ಚುನಾವಣೆಗಳಲ್ಲಿ ನೀರಾವರಿ ಯೋಜನೆಯನ್ನೆ ಅಜೆಂಡವನ್ನಾಗಿ ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರುಗಳು ಬಯಲು ಸೀಮೆ ಭಾಗದ ಜನತೆಯನ್ನು ದಿಕ್ಕುತಪ್ಪಿಸಿ, ನಮಗೆ ಮಂಕು ಬೂದಿಯನ್ನು ಎರಚುವಂತಹ ಕೆಲಸವನ್ನು ಮಾಡುತ್ತಿದ್ದಾರೆ, ನಾವು ಬದುಕಲು ನೀರು ಕೊಡಲು ಸಾಧ್ಯವಾಗದಿರುವ ಸರ್ಕಾರಗಳ ಮೇಲೆ ಯಾವ ರೀತಿಯಾದ ನಂಬಿಕೆಯನ್ನು ಇಡಬೇಕು, ಚುನಾವಣೆಗಳಲ್ಲಿ ಮತದಾನ ಮಾಡಿ ನಮಗೇನು ಬರಬೇಕು, ಮೊದಲು ನಾವು ಉಳಿಯಬೇಕು, ನಮ್ಮ ಜಾನುವಾರುಗಳು ಉಳಿಯಬೇಕು, ನಮ್ಮ ಭಾಗದ ಭೂಮಿಗಳಲ್ಲಿ ಹಸಿರು ಕಾಣಿಸಬೇಕು ಆಗಲೇ ಚುನಾವಣೆಗಳಿಗೆ ಅರ್ಥವಿದೆ, ಎಷ್ಟು ಚುನಾವಣೆಗಳು ನಡೆದರೂ ಕೂಡಾ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದ ಮೇಲೆ ಸ್ಥಳೀಯ ಆಡಳಿತ ಸಂಸ್ಥೆಗಳ ಅಗತ್ಯತೆಯೂ ನಮಗಿಲ್ಲ, ಈ ಚುನಾವಣೆ ಮಾತ್ರವಲ್ಲ, ಮುಂಬರುವ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗಳನ್ನೂ ಬಹಿಷ್ಕಾರ ಮಾಡುವಂತೆ ಮನವೊಲಿಸುತ್ತಿರುವ ನಾಗರೀಕರು, ಕ್ಷೇತ್ರದ ಎಲ್ಲಾ ಜನತೆಯು ಕೂಡಾ ಈ ಭಾಗದ ಉಳಿವಿಗಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು:
ದಿ ಕ್ರೆಸೆಂಟ್ ಶಾಲೆ, ಶಿಡ್ಲಘಟ್ಟ
- ಸಿ.ಆರ್.ಶುಭಾ, 593(ಶೇ.94.88)
- ಎಂ.ಗಾನವಿ, 592(ಶೇ.94.72)
- ಎಸ್.ಕೆ.ಶಾಲಿನಿ, 588(ಶೇ.94.08)
- ಜಿ.ಎಂ.ಅಸಿತ್ ದೇವ್, 586(ಶೇ.93.76)
- ಜಾನ್ಸನ್ ಸ್ಯಾಮ್ಯುಯಲ್, 586(ಶೇ.93.76)
- ಜಿ.ಎನ್.ಸುಪ್ರಿಯಾ, 586(ಶೇ.93.76)
- ಎಸ್.ಮೊಯುದ್ದೀನ್, 582(ಶೇ.93.12)
- ಹಿಮಬಿಂದು, 581(ಶೇ.92.96)
- ಮೊಹಮ್ಮದ್ ಜಾಯಿದ್ ಪಾಷ, 577(ಶೇ.92.32)
- ಕೀರ್ತಿ ಸಾಗರ್, 576(ಶೇ.92.16)
- ಸಿ.ತರುಣ್ ಕುಮಾರ್, 573(ಶೇ.91.68)
- ನೂರ್ ಅಂಜುಮ್, 570(ಶೇ.91.20)
- ಕೆ.ಪಿ.ಚಂದನಾ, 569(ಶೇ.91.04)
- ಜಿ.ಎಂ.ನಿಸರ್ಗ, 567(ಶೇ.90.72)
- ಜಿ.ಆರ್.ಚಂದನಾ, 567(ಶೇ.90.72)
- ಎನ್.ಮೇಘಾ, 566(ಶೇ.90.56)
ಬಿ.ಜಿ.ಎಸ್ ಪ್ರೌಢಶಾಲೆ, ಶಿಡ್ಲಘಟ್ಟ
- ಎನ್.ಪವನ್ ಕುಮಾರ್, 591(ಶೇ.94.56)
- ಪಿ.ಪವನ್ ಕಲ್ಯಾಣ್, 585(ಶೇ.93.6)
- ಎ.ಎಂ.ನಿಖಿಲ್ ಗೌಡ, 568(ಶೇ.90.88)
- ಎಂ.ಲಿಖಿತಾ, 566(ಶೇ.90.56)
- ಪಿ.ಎನ್.ಮನೋಜ್, 566(ಶೇ.90.56)
- ಬಿ.ನೇಹಾ ಕೌಸರ್, 566(ಶೇ.90.56)
- ಚಿ.ಹೀನಾ ತಾಜ್, 565(ಶೇ.90.4)
ವಾಸವಿ ವಿದ್ಯಾಸಂಸ್ಥೆ, ಶಿಡ್ಲಘಟ್ಟ
- ಎಂ.ದಿವ್ಯಾ, 585(ಶೇ.93.6)
- ಸಹನಾಶ್ರೀ, 571(ಶೇ.91.36)
ಡಾಲ್ಫಿನ್ ಪಬ್ಲಿಕ್ ಶಾಲೆ, ಶಿಡ್ಲಘಟ್ಟ
- ಜಿ.ಕೈಲಾಶ್, 588 (ಶೇ.94)
- ಎಂ.ನಿತಿನ್ ಕುಮಾರ್, 588 (ಶೇ.94)
- ಕೆ.ಶ್ರಾವಂತಿ, 582 (ಶೇ.93.12)
- ಎಂ.ಭಾಸ್ಕರ್, 572 (ಶೇ.91.52)
- ಪ್ರವಲ್ಲಿಕಾ, 572 (ಶೇ.91.52)
- ಎಂ.ಅಮೃತಾ, 565 (ಶೇ.90.40)
- ಎಸ್.ಬಿ.ಪ್ರಿಯಾಂಕಾ, 564 (ಶೇ.90.24)
- ಟಿ.ವಿ.ಮುರಳಿ, 563 (ಶೇ.90.08)
ಶ್ರೀ ಶಾರದಾ ಆಂಗ್ಲ ಪ್ರೌಢಶಾಲೆ
- ವಿ.ಜಿ.ಭಾವನಾ, 594(ಶೇ.95)
- ಪುರುಷೋತ್ತಮ್, 573(ಶೇ.91)
- ವಿ.ಎಸ್.ಮಿಥುನ್ ಕುಮಾರ್, 564(ಶೇ.90)
- ಎಂ.ಅರುಣ್, 564(ಶೇ.90)
ಉಲ್ಲೂರು ಪೇಟೆ ಸರ್ಕಾರಿ ಶಾಲೆ ಆವರಣದಲ್ಲಿ ಬೇಸಿಗೆ ಶಿಬಿರ ಪ್ರಾರಂಭ
ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ತುಂಬಾ ಸಹಕಾರಿಯಾಗುತ್ತವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಧಾರವಾಡದ ಬಾಲವಿಕಾಸ ಅಕಾಡೆಮಿಯಿಂದ ನಗರದ ಹೊರವಲಯದ ಚಿಂತಾಮಣಿ ಮಾರ್ಗದ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಶಿಬಿರಗಳಲ್ಲಿ ನಡೆಯುವ ಕ್ರಿಯಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಒಳ್ಳೆಯ ನಾಯಕತ್ವ ಗುಣಗಳ ಬೆಳೆವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ ಎಂದರು.
ಗ್ರಾಮೀಣ ಭಾಗದಲ್ಲಿ ಶಾಲೆಗೆ ಬೇಸಿಗೆ ರಜೆ ಬಂದರೆ ಮಕ್ಕಳು ಮನೆ, ಕೃಷಿ, ಹೈನುಗಾರಿಕೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಯಾವುದೆ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಗ್ರಾಮೀಣ ಭಾಗದ ಪರಿಸ್ಥಿತಿ ಹಾಗೂ ಪೋಷಕರ ಆರ್ಥಿಕ, ಸಾಮಾಜಿಕ ಇನ್ನಿತರೆ ಕಾರಣಗಳೂ ಸಹ ಅದಕ್ಕೆ ಕಾರಣವಾಗಿರಬಹುದು.
೧೦ ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಚಿತ್ರಕಲೆ, ಕ್ರಾಫ್ಟ್, ಪೇಪರ್ಕಟಿಂಗ್ ಮಾಡುವುದು. ಹಾಡು ಹಾಡುವುದು, ಕೊಲಾಜ್. ಕ್ಲೇ ಮಾಡಲಿಂಗ್ ರಚನೆ. ಹಾಗೆಯೆ ಕಥೆ, ಕವನ, ಲೇಖನಗಳ ಬರವಣಿಗೆ ಇತ್ಯಾದಿ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಸಂಬಂಧಿಸಿದ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಿಕೊಡಲಾಗುವುದು ಎಂದು ವಿವರಿಸಿದರು.
ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಮೇಲ್ವಿಚಾರಕಿ ಗಿರಿಜಾಂಬಿಕೆ, ರಾಧಮ್ಮ, ಸಂಪನ್ಮೂಲ ವ್ಯಕ್ತಿಗಳಾದ ಕರಾಟೆ ಶಿಕ್ಷಕ ಅರುಣ್ಕುಮಾರ್, ಸಂಗೀತ ಶಿಕ್ಷಕಿ ಮಮತ, ಚಿತ್ರಕಲೆಯ ಕೃಷ್ಣಮೂರ್ತಿ, ಅಂಗನವಾಡಿ ಶಿಕ್ಷಕಿ ನಾಗಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪೌರನೌಕರನಿಗೆ ಆರ್ಥಿಕ ಸಹಾಯ
ನಗರಸಭೆಯ ನೌಕರ ವೆಂಕಟೇಶಪ್ಪ ಎಂಬುವವರಿಗೆ ಟಿ.ಬಿ ಕಾಯಿಲೆ ಬಂದಿದ್ದು, ಆರ್ಥಿಕವಾಗಿ ತೊಂದರೆಯಲ್ಲಿರುವುದರಿಂದ ನಗರಸಭೆಯ ನೌಕರರು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ 12,500 ರೂ ಹಣ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ವೆಂಕಟೇಶಪ್ಪ ಅವರ ಪತ್ನಿಯು ಎರಡು ಬಾರಿ ಕಾಲು ಮುರಿದುಕೊಂಡಿದ್ದು, ಅವರ ಚಿಕಿತ್ಸೆಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಕಳೆದ ತಿಂಗಳಿನಿಂದ ಕಾಯಿಲೆಯಿಂದ ನರಳುತ್ತಿದ್ದ ವೆಂಕಟೇಶಪ್ಪ ಅವರಿಗೆ ಟಿ.ಬಿ ಕಾಯಿಲೆ ಇದೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತೊಂದರೆಯಲ್ಲಿದ್ದ ಅವರಿಗೆ ನಗರಸಭೆಯ ನೌಕರರು ತಮ್ಮತಮ್ಮಲ್ಲೇ ಹಣ ಸಂಗ್ರಹಿಸಿ ನೀಡಿದ್ದಾರೆ. ಪೌರಾಯುಕ್ತರು ಹಾಗೂ ಜಿಲ್ಲಾ ಪೌರನೌಕರರ ಸಂಘದವರಿಗೂ ವಿಷಯ ತಿಳಿಸಿ ಹಣ ಒದಗಿಸಲು ಪ್ರಯತ್ನಿಸುವುದಾಗಿ ತಾಲ್ಲೂಕು ಪೌರನೌಕರರ ಸಂಘದ ಸದಸ್ಯರು ತಿಳಿಸಿದ್ದಾರೆ.
ಚೇತನ್, ಶಂಕರಪ್ಪ, ಸುಧಾಕರ್, ಮುನಿನಾರಾಯಣಪ್ಪ, ಮುನಿಕೃಷ್ಣಪ್ಪ, ಸುರೇಶ, ಲೋಕೇಶ, ಮುರಳಿ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕುಡಿಯುವ ನೀರಿಗಾಗಿ ಪ್ರತಿಭಟನೆ
ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ವಿಫಲರಾಗಿದ್ದಾರೆ ಎಂದು ೧೫ ನೇ ವಾರ್ಡಿನ ನಾಗರಿಕರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದ ಇದ್ಲೂಡು ರಸ್ತೆಯಲ್ಲಿರುವ ಮಾರುತಿನಗರದ ನಿವಾಸಿಗಳು ಖಾಲಿಬಿಂದಿಗೆಗಳನ್ನು ಹಿಡಿದುಕೊಂಡು ಬೀದಿಗಿಳಿದು ನಗರಸಭೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ನೀಡುತ್ತಿಲ್ಲ, ಕುಡಿಯುವ ನೀರಿಲ್ಲದೆ ನಾವೆಲ್ಲಾ ಪರದಾಡುವಂತಾಗಿದೆ, ನಗರಸಭಾ ಸದಸ್ಯರ ಮನೆಯ ಬಳಿಯಲ್ಲಿ ಹೋಗಿ ಕೇಳಿದರೆ, ಮನೆಗಳ ಬಳಿಗೆ ಬರಬೇಡಿ ಎನ್ನುತ್ತಾರೆ, ಹೋಗಿ ನಗರಸಭೆಯ ಮುಂದೆ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ, ನಗರಸಭೆಯ ಬಳಿಗೆ ಹೋದರೆ, ಮಹಿಳೆಯರು ಬರಬೇಡಿ ಎನ್ನುತ್ತಾರೆ ಈ ರೀತಿ ನಗರಸಭಾ ಸದಸ್ಯರು, ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾವು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಶಿಡ್ಲಘಟ್ಟದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಆಯ್ಕೆ
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಶಿಡ್ಲಘಟ್ಟದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ (ನಂದಾ ಮುನಿಕೃಷ್ಣಪ್ಪ) ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆಂಜಿನಪ್ಪನವರ ರಾಜೀನಾಮೆಯಿಂದ ಬಹಳಷ್ಟು ದಿನಗಳಿಂದಲೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಾಲಿಯಾಗಿಯೆ ಉಳಿದಿತ್ತು.
ಕಳೆದ ಜನವರಿ ೧೩ ರಂದು ಹಂಗಾಮಿ ಅಧ್ಯಕ್ಷರಾಗಿ ಮಾಜಿ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಸುಭ್ರಮಣಿ ಅವರನ್ನು ಕೆ.ಪಿ.ಸಿ.ಸಿ.ಅಧ್ಯಕ್ಷ ಜಿ.ಪರಮೇಶ್ವರ್ ಅವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದರಾದರೂ ಕಾರಣಾಂತರಗಳಿಂದ ಅವರ ಆಯ್ಕೆಯನ್ನು ರದ್ದುಗೊಳಿಸಲಾಗಿತ್ತು.
ಇದೀಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಮುನಿಕೃಷ್ಣಪ್ಪ ೧೯೫೭ ರಲ್ಲಿ ಅಂದಿನ ಸಂಯುಕ್ತರಂಗ (ಸೈಕಲ್ ಗುರುತು) ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ ಮಾಡಿದರಾದರೂ ೧೯೭೨ ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಈವರೆಗೂ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ.
೧೯೭೯ ರಲ್ಲಿ ಮೊದಲ ಭಾರಿಗೆ ಶಿಡ್ಲಘಟ್ಟ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುವುದರೊಂದಿಗೆ ೧೯೮೩ ರಲ್ಲಿ ಟೌನ್ ಎಸ್.ಎಫ್.ಸಿ.ಎಸ್ನ ಅಧ್ಯಕ್ಷರಾಗಿ, ೧೯೮೯ ಮತ್ತು ೧೯೯೨ ರಲ್ಲಿ ಪುನಃ ಪುರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ನಗರದ ಪಿಎಲ್ಡಿ ಬ್ಯಾಂಕಿನ ನಿರ್ದೇಶಕರಾಗಿ ಮೂರು ಭಾರಿ ಆಯ್ಕೆಯಾಗಿದ್ದ ಇವರು ಒಂದು ಭಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಸತತವಾಗಿ ೨೦ ವರ್ಷಗಳ ಕಾಲ ಶಿಡ್ಲಘಟ್ಟ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವ
ನಗರದ ಮಯೂರ ವೃತ್ತದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವವನ್ನು ಮೂರು ದಿನಗಳ ಕಾಲ ನಡೆಸಿದ್ದು, ಬುಧವಾರ ದಿ.ಎಂ.ಆರ್.ರಂಗಪ್ಪನವರ ಕುಟುಂಬದ ಸದಸ್ಯರು ಪುರಜನರ ನೇತೃತ್ವದಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.
ದಶಮಿ ಪೂರ್ವಬಾದ್ರ ನಕ್ಷತ್ರಾದಿ ಸ್ವಾಮಿಯ ಅಲಂಕಾರದೊಂದಿಗೆ ಮಹಾಮುಖ್ಯ ಪ್ರಾಣ ಏಕಾದಶ ರುದ್ರ ಹನುಮ ಬ್ರಹ್ಮಪುರ ದರ್ಶನ ಹಾಗೂ ನಾಗದೇವತೆಗಳ ದಿವ್ಯ ಪ್ರತಿಷ್ಠಾಪನ ದರ್ಶನ ಆಯೋಜಿಸಲಾಗಿತ್ತು. ಹನುಮಕೃತಾಶ್ವ ಯಾಗ, ಪವಮಾನ ಯಾಗ ನಡೆಸಿ ನಾದಸ್ವರ ಪೂಜಾ ವಿಧಿವಿಧಾನದೊಂದಿಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ವಿ.ನಾಗೇಂದ್ರಪ್ರಸಾದ್ ಅವರ ರಚನೆಯ ‘ಹನುಮ ಸಂಕೀರ್ತನೆ’ ಆಡಿಯೋ ಸಿಡಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
‘ಶಿಡ್ಲಘಟ್ಟದಲ್ಲಿ ನಮ್ಮ ಕುಟುಂಬದ ಹಲವಾರು ಮಂದಿ ಇದ್ದು, ದೇವಸ್ಥಾನ ಪುನರ್ ಪ್ರತಿಷ್ಠಾಪನ ಮಹೋತ್ಸವದ ಸಂದರ್ಭದಲ್ಲಿ ದೇವರ ಹಾಡುಗಳನ್ನು ಬರೆಯಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯನಾಗಿದ್ದು, ಇದು ತಾನು ಊರಿಗೆ ಹಾಗೂ ದೇವರಿಗೆ ಮಾಡುವ ಸೇವೆ’ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ವಿ.ನಾಗೇಂದ್ರಪ್ರಸಾದ್ ತಿಳಿಸಿದರು. ಮಾರುತಿ ಗುರೂಜಿ, ನಾರಾಯಣಾಚಾರಿ ಮತ್ತಿತರರು ಹಾಜರಿದ್ದರು.
ಅಂಧ ಮಕ್ಕಳ ಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ
ನಗರದ ಆಶಾಕಿರಣ ಅಂಧ ಮಕ್ಕಳ ಉಚಿತ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಅಂಧ ಮಕ್ಕಳ ಶಾಲೆಯು ಆರನೇ ವರ್ಷ ಸತತವಾಗಿ ಶೇ.100 ರಷ್ಟು ಫಲಿತಾಂಶವನ್ನು ದಾಖಲಿಸಿದೆ.
ಈ ಬಾರಿ ಎಂಟು ಮಂದಿ ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಮರಜ್ಯೋತಿ 455(72.8%), ಎನ್.ಸೋಮಶೇಖರ 433(69.28%), ಶಿವಪ್ಪ 430(68.8%), ಕೆ.ಎಸ್.ಪ್ರದೀಪ್ 427(68.32%), ಗಂಗಾದೇವಿ 415(66.40%), ನೇತ್ರಾವತಿ 405(64.8%), ಬಿ.ಆರ್.ಸುನೀತಾ 389(62.24%), ಸರಸ್ವತಿ 385(61.60%) ಅಂಕಗಳನ್ನು ಪಡೆದಿದ್ದಾರೆ.

