ಪ್ರಕೃತಿಯಲ್ಲಿ ಹವಾಮಾನ ವೈಪರೀತ್ಯ ಹಾಗೂ ಆಹಾರದ ವ್ಯತ್ಯಾಸದ ಕಾರಣ ಮಕ್ಕಳು ಕಿವಿ, ಗಂಟಲು, ಮೂಗು ಸಂಬಂಧಿಸಿದಂತೆ ಅನಾರೋಗ್ಯಕ್ಕೆ ಒಳಗಾಗುವರು. ಉಚಿತವಾಗಿ ನಡೆಯುವ ಆರೋಗ್ಯ ಶಿಬಿರದಲ್ಲಿ ತಜ್ಞರಿಂದ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಿ ಎಂದು ಮಕ್ಕಳ ತಜ್ಞ ಡಾ. ನಿರ್ಮಲರಾಜ್ ತಿಳಿಸಿದರು.
ನಗರದ ಮಾನಸ ಆಸ್ಪತ್ರೆಯಲ್ಲಿ ಭಾನುವಾರ ಉಚಿತ ಮಕ್ಕಳ ಆರೋಗ್ಯ ಮತ್ತು ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಪದೇ ಪದೇ ಜ್ವರ, ಶೀತ, ಕೆಮ್ಮ ಬರುವುದು, ಬೆಳವಣಿಗೆಯ ಸಮಸ್ಯೆ, ರಕ್ತ ಹೀನತೆ, ಚರ್ಮದ ಸಮಸ್ಯೆಗಳು, ಕಿವಿ ನೋವು, ಕಿವಿ ಸೋರುವುದು, ಗಂಟಲಲ್ಲಿ ನೋವು, ಗೆಡ್ಡೆ, ಉಸಿರಾಟದ ತೊಂದರೆ ಮುಂತಾದ್ವುಗಳನ್ನು ಪರೀಕ್ಷಿಸಿಕೊಳ್ಳಿ ಎಂದರು.
ಸುಮಾರು ೧೨೦ ಕ್ಕೂ ಹೆಚ್ಚು ಮಕ್ಕಳು ಹಾಗೂ ಹಿರಿಯರು ಶಿಬಿರದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಉಚಿತ ಔಷಧಿಗಳನ್ನು ಸಹ ನೀಡಲಾಯಿತು.
ವೈದ್ಯರಾದ ಡಾ.ಜಗದೀಶ್, ಡಾ.ಅಕ್ಷಯ್, ಡಾ.ನರಸಿಂಹಮೂರ್ತಿ, ಮಾನಸ ಆಸ್ಪತ್ರೆಯ ವ್ಯವಸ್ಥಾಪಕ ಸುರೇಶ್, ಶಿವಕುಮಾರ್, ಮಂಜುಳಮ್ಮ ಹಾಜರಿದ್ದರು.
- Advertisement -
- Advertisement -
- Advertisement -







