ಸ್ವಚ್ಛತೆ ಕೆಲಸ
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಗ್ರಾಮೀಣ ಜಾಗೃತಿ ಕಾರ್ಯಾನುಭವದಲ್ಲಿ ತೊಡಗಿಸಿಕೊಂಡಿರುವ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳು ಬಿ.ಎಂ.ವಿ ಶಾಲೆಯ ಸಹಯೋಗದಲ್ಲಿ ಗ್ರಾಮದಲ್ಲಿ ಸ್ವಚ್ಛತೆ ಕೆಲಸವನ್ನು ಮಾಡಿದರು. ಕೃಷಿ ಪ್ರಾಧ್ಯಾಪಕ ಡಾ.ವೈ.ಎನ್.ಶಿವಲಿಂಗಯ್ಯ, ಪಿಡಿಒ ಯಮುನಾ, ಡಾ.ಸುನೀತಾ, ಶಿಕ್ಷಣ ಸಂಸ್ಥೆಯ ಟ್ರಸ್ಟಿ ವೆಂಕಟಮೂರ್ತಿ, ಶಿಕ್ಷಕರಾದ ಪಂಚಮೂರ್ತಿ, ವೆಂಕಟಮೂರ್ತಿ ಹಾಜರಿದ್ದರು
ಜೈವಿಕ ಇಂಧನದ ಮಹತ್ವ
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಹಳ್ಳಿಯಲ್ಲಿ ಗ್ರಾಮೀಣ ಜಾಗೃತಿ ಕಾರ್ಯಾನುಭವದಲ್ಲಿ ತೊಡಗಿಸಿಕೊಂಡಿರುವ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳು ಜೈವಿಕ ಇಂಧನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜೈವಿಕ ಇಂಧನ ಸಂಶೋಧನಾ ಕೇಂದ್ರದ ಡಾ.ನಿಂಗರಾಜು, ಡಾ.ವೆಂಕಟೇಶ್, ಡಾ.ಹರೀಶ್ ಮತ್ತು ಕೃಷಿ ಪ್ರಾಧ್ಯಾಪಕ ವೈ.ಎನ್.ಶಿವಲಿಂಗಯ್ಯ ಗ್ರಾಮಸ್ಥರಿಗೆ ಜೈವಿಕ ಇಂಧನದ ಬಗ್ಗೆ ವಿವರಿಸಿದರು.
- Advertisement -
- Advertisement -
- Advertisement -