21.2 C
Sidlaghatta
Friday, July 18, 2025

ನಂದಿನಿ ಹಾಲು ಉತ್ಪಾದಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಚಂದ್ರೇಗೌಡ ಆಯ್ಕೆ

- Advertisement -
- Advertisement -

ನಂದಿನಿ ಹಾಲು ಉತ್ಪಾದಕರ ವಿವಿದೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರ ಆಯ್ಕೆಗಾಗಿ ಸಂಘದ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ಹಾಜರಿದ್ದ ಏಳು ಮಂದಿ ಸದಸ್ಯರ ಒಪ್ಪಿಗೆಯ ಮೇರೆಗೆ ಚುನಾವಣಾಧಿಕಾರಿ ವೆಂಕಟೇಶಮೂರ್ತಿ ಮೇಲೂರಿನ ಸಿ.ಚಂದ್ರೇಗೌಡ ಅವರನ್ನು ನೂತನ ಅಧ್ಯಕ್ಷರಾಗಿ ಘೋಷಿಸಿದರು.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗೈರು
ಕಳೆದ ಸೆಪ್ಟೆಂಬರ್‌ ೧೬ ರಂದು ನಡೆದ ಚುನಾವನೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ೧೩ ಜನ ನಿರ್ದೇಶಕರ ಪೈಕಿ ಇಂದು ನಡೆದ ಸಭೆಗೆ ಕಾಂಗ್ರೆಸ್ ಬೆಂಬಲಿತ ಆರು ಜನ ನಿರ್ದೇಶಕರು ಗೈರು ಹಾಜರಾಗಿದ್ದರು.
ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಸೇರಿದಂತೆ ನಿರ್ದೇಶಕರಾದ ಟಿ.ಎಸ್.ಗೋಪಾಲರೆಡ್ಡಿ, ಬಿ.ವಿ.ಮುನೇಗೌಡ, ಮಂಜುನಾಥ್. ನಾಗರತ್ನಮ್ಮ, ಎಸ್.ವಿ.ಮೂರ್ತಿ ಗೈರು ಹಾಜರಾಗಿದ್ದರು.
ಅಧ್ಯಕ್ಷರ ಅವಿರೋಧ ಆಯ್ಕೆ
ಸಂಘದ ಒಟ್ಟು ೧೩ ಜನ ನಿರ್ದೇಶಕರ ಪೈಕಿ ಹಾಜರಿದ್ದ ೭ ಜನ ನಿರ್ದೇಶಕರು ೧೨.೩೦ ಕ್ಕೆ ನಡೆಯಬೇಕಿದ್ದ ಸಭೆಯನ್ನು ಸುಮಾರು ೧ ಗಂಟೆ ಕಾಲ ಮುಂದೂಡಿ ನಡೆಸಿದರು. ಮುಂದೂಡಿದ ಸಭೆಗೂ ಸಹ ಆರು ಜನ ನಿರ್ದೇಶಕರು ಬಾರದೇ ಇದ್ದುದರಿಂದ ಹಾಜರಿದ್ದ ೭ ಜನ ಸದಸ್ಯರಲ್ಲಿ ಒಂದೇ ಒಂದು ನಾಮಪತ್ರ ಸಲ್ಲಿಸಿದ್ದ ಸಿ.ಚಂದ್ರೇಗೌಡರ ನಾಮಪತ್ರವನ್ನು ಪುರಸ್ಕರಿಸಿ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿರ್ದೇಶಕರಾದ ಆರ್.ಎ.ಉಮೇಶ್, ಬಿ.ಎಂ.ಗೋಪಾಲಗೌಡ, ಎನ್.ಗೋವಿಂದರಾಜು, ಡಿ.ಬಿ.ವೆಂಕಟೇಶ್, ರತ್ನಮ್ಮ, ಎಂ.ಆಂಜಿನಪ್ಪ, ಚುನಾವಣಾಧಿಕಾರಿ ಎಂ.ವಿ.ವೆಂಕಟೇಶಮೂರ್ತಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!