32.7 C
Sidlaghatta
Friday, April 19, 2024

ಶ್ರಮ ಜೀವಿಗಳ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಬೇಕಿದೆ

- Advertisement -
- Advertisement -

ಆಧುನಿಕತೆಯ ಧಾಪುಗಾಲಿನಲ್ಲಿ ಗ್ರಾಮೀಣ ಭಾಗದ ಜನಪದ ಕಲೆ ಮತ್ತು ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಗ್ರಾಮೀಣ ಭಾಗದ ಶ್ರಮ ಜೀವಿಗಳ ಧಾರ್ಮಿಕ ಪರಂಪರೆಯಾದ ಭಜನೆ, ಸಂಗೀತ, ಹಾಡುಗಾರಿಕೆ, ವಾದ್ಯ ಮುಂತಾದವುಗಳನ್ನು ಪ್ರೋತ್ಸಾಹಿಸುವ ಮೂಲಕ ಈ ಜಾನಪದ ಕೊಂಡಿಯನ್ನು ಕಳಚದಂತೆ ಕಾಪಾಡಿಕೊಳ್ಳಬೇಕಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ತೊಟ್ಲಗಾನಹಳ್ಳಿ ಗೇಟ್‌ ಬಳಿ ಮಂಗಳವಾರ ಸಂಜೆ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಕೈವಾರ ತಾತಯ್ಯನವರ ದೇವಾಲಯದ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಘಟಕದಿಂದ ಕಲಾವಿದರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ನಮ್ಮ ಕನ್ನಡದ ಮೌಖಿಕ ಪರಂಪರೆ ಬಲು ದೊಡ್ಡದು. ಗ್ರಾಮದಲ್ಲಿ ಹಿರಿಯರು ಅನೇಕ ದೇವರ ಪದಗಳನ್ನು ತಮ್ಮ ನೆನಪಿನಿಂದಲೇ ಹಾಡುವಷ್ಟು ಶಕ್ತರು. ಅವರಿಗೇ ಈ ಪರಂಪರೆ ಕೊನೆಯಾಗಬಾರದು. ತಾಲ್ಲೂಕಿನ ಕಲಾವಿದರನ್ನು ಗುರುತಿಸಿ ಗೌರವಿಸುವುದು ಕೂಡ ಒಂದು ಕನ್ನಡದ ಮುಖ್ಯ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಕಸಾಪ ಗ್ರಾಮೀಣ ಭಾಗದಲ್ಲಿರುವ ಕಲಾವಿದರನ್ನು ಗೌರವಿಸುವ ಮೂಲಕ ಕನ್ನಡದ ಜಾನಪದ ಸಂಸ್ಕೃತಿಯನ್ನು ಗೌರವಿಸುವಂತಾಗಿದೆ ಎಂದು ಹೇಳಿದರು.
ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಮಾತನಾಡಿ, ನಮ್ಮಲ್ಲಿ ಹಿಂದೆ ಒಂದೊಂದು ಗ್ರಾಮದಲ್ಲೂ ಹಲವಾರ ಕಲಾವಿದರು ಇರುತ್ತಿದ್ದರು. ಅವರು ಕೇವಲ ಭಕ್ತಿ, ಶ್ರದ್ಧೆ ಮತ್ತು ಆಸಕ್ತಿಯಿಂದ ಕಲೆಯನ್ನು ಕಲಿಯುತ್ತಿದ್ದರು. ಹಣವಾಗಲಿ, ಹೆಸರಾಗಲಿ ಅವರು ಬಯಸುವವರಲ್ಲ. ಈ ರೀತಿಯ ಕಲಾವಿದರನ್ನು ಕಸಾಪ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಕಲೆಯ ಬಗ್ಗೆ ಆಸಕ್ತಿ ಹುಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ನುಡಿದರು.
ತೊಟ್ಲಗಾನಹಳ್ಳಿ ಎಂ.ದ್ಯಾವಪ್ಪ(ಹಾರ್ಮೋನಿಯಂ), ಭಕ್ತರಹಳ್ಳಿ ಬಿ.ಎಂ.ಮುನಿವೆಂಕಟಶಾಮಿ(ತಬಲ), ಮಳಮಾಚನಹಳ್ಳಿ ಪಾರ್ವತಮ್ಮ(ಹಾಡುಗಾರಿಕೆ), ದೇವರಮಳ್ಳೂರು ಆಂಜಿನಪ್ಪ(ಹಾಡುಗಾರಿಕೆ), ಮೇಲೂರು ಎಂ.ಎಂ.ಸ್ವಾಮಿ(ಹಾಡುಗಾರಿಕೆ), ಸುಗಟೂರು ದೇವರಾಜು(ಹಾಡುಗಾರಿಕೆ), ನಾಗಮಂಗಲ ಮುನಿರಾಜಪ್ಪ(ಹಾಡುಗಾರಿಕೆ), ಭಕ್ತರಹಳ್ಳಿ ಎಂ.ಆಂಜಿನಪ್ಪ(ಹಾಡುಗಾರಿಕೆ), ನಾಗಮಂಗಲ ಭಾರತಮ್ಮ(ಹಾಡುಗಾರಿಕೆ), ತೊಟ್ಲಗಾನಹಳ್ಳಿ ಬೈಯಮ್ಮ(ಹಾಡುಗಾರಿಕೆ), ಮೇಲೂರು ಆಂಜಿನಪ್ಪ(ತಬಲ), ದೇವರಮಳ್ಳೂರು ನಾರಾಯಣಸ್ವಾಮಿ(ತಬಲ), ದೇವರಮಳ್ಳೂರು ನಾಗರಾಜ್‌(ಹಾರ್ಮೋನಿಯಂ), ಮಂಡಿಬೆಲೆ ಕೇಶವಪ್ಪ(ಹಾರ್ಮೋನಿಯಂ), ಬೆಟ್ಟಹಳ್ಳಿ ಶಿವಾನಂದ್‌(ಸೋಲೆಕ್ಸ್‌), ಮೇಲೂರು ರಾಮಾಂಜಿನಪ್ಪ(ಸೋಲೆಕ್ಸ್‌), ಚೌಡಸಂದ್ರ ಸಿ.ಇ.ಹನುಮಂತಪ್ಪ(ತಬಲ), ಬೆಳ್ಳೂಟಿ ಮುನಿಯಪ್ಪ(ಹಾರ್ಮೋನಿಯಂ), ಮೇಲೂರು ಗೋಪಾಲ್‌(ಹಾಡುಗಾರಿಕೆ), ಮಳ್ಳೂರು ಸದಾನಂದ(ತಬಲಾ), ಮಳ್ಳೂರು ಸೀನಪ್ಪ(ಆರ್ಗನ್‌), ಚೌಡಸಂದ್ರ ರಾಮಕೃಷ್ಣಪ್ಪ(ಹಾಡುಗಾರಿಕೆ) ಕಲಾವಿದರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.
ತಾಲ್ಲೂಕು ಕಸಾಪ ಉಪಾಧ್ಯಕ್ಷ ಸಿ.ಪಿ.ಇ.ಕರಗಪ್ಪ, ಹೋಬಳಿ ಪ್ರತಿನಿಧಿ ಜಗದೀಶ್‌ಬಾಬು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!