Home News ದ್ರಾಕ್ಷಿ, ಮಾವು, ದಾಳಿಂಬೆ ಬೆಳೆ ವಿಮೆಗೆ ಜುಲೈ 31ರೊಳಗೆ ನೋಂದಣಿ

ದ್ರಾಕ್ಷಿ, ಮಾವು, ದಾಳಿಂಬೆ ಬೆಳೆ ವಿಮೆಗೆ ಜುಲೈ 31ರೊಳಗೆ ನೋಂದಣಿ

0
0
Sidlaghatta Horticulture Officer Grape Crop Insurance

Sidlaghatta : 2026-27ನೇ ಸಾಲಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದ್ರಾಕ್ಷಿ, ಮಾವು ಹಾಗೂ ದಾಳಿಂಬೆ ಬೆಳೆಗಳನ್ನು ಒಳಪಡಿಸಲಾಗಿದ್ದು, ಶಿಡ್ಲಘಟ್ಟ ತಾಲ್ಲೂಕಿನ ರೈತರು ಜುಲೈ 31ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್. ಮಂಜುನಾಥ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ರೈತರು ಸಂಭವನೀಯ ಅನಾವೃಷ್ಟಿ, ಅತಿವೃಷ್ಟಿ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟದಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಎಷ್ಟು ಪ್ರೀಮಿಯಂ ಪಾವತಿಸಬೇಕು?

  • ದ್ರಾಕ್ಷಿ: ಪ್ರತಿ ಎಕರೆಗೆ ₹1.12 ಲಕ್ಷ ವಿಮೆ ಮೊತ್ತ — ₹5,600 ಪ್ರೀಮಿಯಂ
  • ಮಾವು: ₹32,000 ವಿಮೆ ಮೊತ್ತ — ₹1,600 ಪ್ರೀಮಿಯಂ
  • ದಾಳಿಂಬೆ: ₹50,800 ವಿಮೆ ಮೊತ್ತ — ₹2,540 ಪ್ರೀಮಿಯಂ

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿ, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳು ಅಥವಾ ಯೋಜನೆ ಅನುಷ್ಠಾನಗೊಳಿಸುತ್ತಿರುವ ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿಯ ಟೋಲ್‌ ಫ್ರೀ ಸಂಖ್ಯೆ 1800 209 3536 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಹಿಂದೆ ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿತ್ತು.

In English: Karnataka’s redesigned weather-based crop insurance scheme for 2026-27 now covers grapes, mango, and pomegranate. Sidlaghatta taluk farmers must register by July 31 — premiums range from ₹1,600 (mango) to ₹5,600 per acre (grapes) against insured amounts up to ₹1.12 lakh for grapes. Contact: Tata AIG toll-free 1800 209 3536.

FAQ

ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕ ಯಾವುದು?
ಜುಲೈ 31, 2026 ಕೊನೆಯ ದಿನಾಂಕ.

ಯಾವ ಬೆಳೆಗಳಿಗೆ ವಿಮೆ ಸೌಲಭ್ಯ ಲಭ್ಯ?
ದ್ರಾಕ್ಷಿ, ಮಾವು ಮತ್ತು ದಾಳಿಂಬೆ ಬೆಳೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

ಹೆಚ್ಚಿನ ಮಾಹಿತಿಗೆ ಎಲ್ಲಿ ಸಂಪರ್ಕಿಸಬೇಕು?
ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಟಾಟಾ ಎಐಜಿ ಟೋಲ್ ಫ್ರೀ 1800 209 3536.

Sidlaghatta WhatsApp Channel Group

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!