15.1 C
Sidlaghatta
Wednesday, February 4, 2026

PLD ಬ್ಯಾಂಕ್‌ನಿಂದ ರೈತರಿಗೆ ಕೃಷಿ ಸಾಲ ವಿತರಣೆ

- Advertisement -
- Advertisement -

Sidlaghatta : ರೈತರು ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳಿಂದ ಪಡೆಯುವ 15 ಲಕ್ಷ ರೂಪಾಯಿವರೆಗಿನ ಕೃಷಿ ಸಂಬಂಧ ಸಾಲಕ್ಕೆ ಕೇವಲ 3 ರೂ ಬಡ್ಡಿಯನ್ನು ನಿಗಪಡಿಸಿ ರಾಜ್ಯ ಸರ್ಕಾರವು ಆದೇಶಿಸಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದಲ್ಲಿನ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಪಿಎಲ್‌ಡಿ ಬ್ಯಾಂಕ್‌ನಿಂದ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬರಗಾಲ ಬೀಡು ಬಿಟ್ಟಿದೆ. ಈ ಬರಗಾಲದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ರೈತರ ಪರ ನಿಂತಿರುವ ರಾಜ್ಯ ಸರ್ಕಾರವು ರೈತರಿಗೆ ಶೇ 3 ರೂ ಬಡ್ಡಿಗೆ ನೀಡುತ್ತಿದ್ದ ಸಾಲದ ಮೊತ್ತನವನ್ನು 15 ಲಕ್ಷಕ್ಕೆ ಹೆಚ್ಚಿಸಿದೆ ಎಂದು ವಿವರಿಸಿದರು.

ಸರ್ಕಾರದ ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಯಾವ ಉದ್ದೇಶಕ್ಕಾಗಿ ಸಾಲ ಪಡೆದಿರುತ್ತೀರೋ ಆ ಉದ್ದೇಶಕ್ಕೆ ಸಾಲದ ಹಣ ಉಪಯೋಗಿಸಿಕೊಳ್ಳಿ. ಲಾಭಗಳಿಸಿ ಸಾಲದ ಕಂತನ್ನು ಸರಿಯಾದ ಸಮಯಕ್ಕೆ ಕಟ್ಟಿ. ಆ ಮೂಲಕ ಬ್ಯಾಂಕ್‌ನ್ನು ಇನ್ನಷ್ಟು ಆರ್ಥಿಕವಾಗಿ ಸದೃಢಗೊಳಿಸಿ ಮತ್ತಷ್ಟು ರೈತರಿಗೆ ಸಾಲ ಸಿಗುವಂತಾಗಬೇಕು. ಸಹಕಾರ ಸಂಘಗಳನ್ನು, ಸಹಕಾರ ಬ್ಯಾಂಕುಗಳನ್ನು ಉಳಿಸುವುದು ನಮ್ಮ ನಿಮ್ಮ ಕೈಯಲ್ಲೇ ಇದೆ ಎಂದು ಹೇಳಿದರು.

ಕೃಷಿಯ ವಿವಿಧ ಬಾಬ್ತುಗಳಿಗೆ ಒಟ್ಟು 1 ಕೋಟಿ ರೂಗಳ ಸಾಲದ ಚೆಕ್‌ನ್ನು 30 ಮಂದಿಗೆ ವಿತರಿಸಲಾಯಿತು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಕೆ.ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಿದ್ದರು. ನಿರ್ದೇಶಕರಾದ ಬಂಕ್ ಮುನಿಯಪ್ಪ, ದಿಬ್ಬೂರಹಳ್ಳಿ ಡಿ.ಸಿ.ರಾಮಚಂದ್ರ, ಮಂಜುನಾಥ್, ಸಿ.ವಿ.ನಾರಾಯಣಸ್ವಾಮಿ, ಸುರೇಶ್, ಸುನಂದಮ್ಮ, ಮುರಳಿ, ವ್ಯವಸ್ಥಾಪಕ ಕೃಷ್ಣನ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!