
Sidlaghatta : ಶಿಡ್ಲಘಟ್ಟ ನಗರದ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ದಸರಾ ಅಂಗವಾಗಿ ಶಮೀವೃಕ್ಷ ಪೂಜೆಯನ್ನು ಬುಧವಾರ ರಾತ್ರಿ ನೆರವೇರಿಸಲಾಯಿತು. ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸಲು ನಾಯ್ಡು ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.
ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸಲು ನಾಯ್ಡು ಮಾತನಾಡಿ, “ನಾಡಿನ ಸುಭಿಕ್ಷತೆಗಾಗಿ ಹಾಗೂ ನಾಡಿನಲ್ಲಿ ಮಳೆ ಬೆಳೆ ಸಕಾಲದಲ್ಲಿ ಆಗಲೆಂದು ನಾಡ ದೇವತೆ ಚಾಮುಂಡೇಶ್ವರಿ ಮತ್ತು ಗ್ರಾಮ ದೇವರು ಶ್ರೀ ವೇಣುಗೋಪಾಲಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ” ಎಂದರು.
ಗ್ರೇಡ್ 2 ತಹಶೀಲ್ದಾರ್ ಕೆ.ಎನ್. ಮಂಜುನಾಥ್, ದೇವಾಲಯದ ಸಂಚಾಲಕ ರೂಪಸಿರಮೇಶ್, ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ, ಮಧುಸೂದನ್, ಬಳೇ ವೇಣು ಗೋಪಾಲ್ ಹಾಜರಿದ್ದರು.