Home News ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ರೈತರ ಗುಂಪು ಚರ್ಚೆ

ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ರೈತರ ಗುಂಪು ಚರ್ಚೆ

0
sidlaghatta Farmers Group Discussion Programme

Sidlaghatta : “ರೈತರಿಗೆ ನೀಡುವ ಹನಿ ನೀರಾವರಿ ಸೌಲಭ್ಯ ಅಥವಾ ಇತರೆ ಕೃಷಿ ಪರಿಕರಗಳು ಕಾಲಕ್ರಮೇಣ ಹಾನಿಗೊಳಗಾಗುತ್ತವೆ. ಆದ್ದರಿಂದ, ಐದು ವರ್ಷಗಳ ನಂತರ ಸರ್ಕಾರ ಈ ಸೌಲಭ್ಯಗಳನ್ನು ಪುನಃ ಕಲ್ಪಿಸಬೇಕು,” ಎಂದು ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಗೋಪಾಲಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ರೈತರ ಗುಂಪು ಚರ್ಚೆಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.

ರೈತರ ಬೇಡಿಕೆಗಳು:

ಗೋಪಾಲಗೌಡ ಅವರು ರೈತರ ಪರವಾಗಿ ಮಾತನಾಡುತ್ತಾ, ಹಿಪ್ಪುನೇರಳೆ ಸೊಪ್ಪು ಕಟಾವು ಮಾಡಲು ಹಾಗೂ ಸಾವಯವ ಗೊಬ್ಬರ ತಯಾರಿಕೆಗೆ ಅಗತ್ಯವಿರುವ 20 ಎಚ್‌ಪಿ ಮೋಟಾರ್‌ಗಳನ್ನು ಸಬ್ಸಿಡಿ ದರದಲ್ಲಿ ಇಲಾಖೆಯ ವತಿಯಿಂದ ನೀಡಬೇಕೆಂದು ವಿನಂತಿಸಿದರು.

ರೈತರ ಅನುಭವಗಳ ವಿನಿಮಯ:

ಗುಂಪು ಚರ್ಚೆಯಲ್ಲಿ ರೈತರು ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಣೆ ಮನೆಯ ನಿರ್ವಹಣೆ, ಹಿಪ್ಪುನೇರಳೆ ತೋಟದ ಆರೈಕೆ ಹಾಗೂ ಯೂರಿಯಾದ ಮಿತ ಬಳಕೆ ಕುರಿತು ಸಮಾಲೋಚನೆ ನಡೆಸಿದರು. ರೈತರು ತಮ್ಮಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಪರಸ್ಪರ ಅನುಭವಗಳನ್ನು ವಿನಿಮಯ ಮಾಡಿಕೊಂಡರು.

ಈ ಕಾರ್ಯಕ್ರಮದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ಭಾರತಿ ಸೇರಿದಂತೆ ಮುನಿರಾಜು, ಎಚ್.ಕೆ. ಸುರೇಶ್, ಮೋಹನ್, ರಾಮಕೃಷ್ಣಪ್ಪ, ಮುರಳಿ, ಪುಟ್ಟೇಗೌಡ, ದೇವೇಗೌಡ, ಬಿ. ಮಂಜು, ಕೇಶವಮೂರ್ತಿ, ಮುನಿಕೃಷ್ಣ ಮೊದಲಾದವರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version