Home News ಕೊತ್ತನೂರಿನ ವೀರಗಾಸೆ ಕಲಾವಿದರಿಗೆ “ಕರುನಾಡ ಪದ್ಮಶ್ರೀ” ಪ್ರಶಸ್ತಿ

ಕೊತ್ತನೂರಿನ ವೀರಗಾಸೆ ಕಲಾವಿದರಿಗೆ “ಕರುನಾಡ ಪದ್ಮಶ್ರೀ” ಪ್ರಶಸ್ತಿ

0
Sidlaghatta Kothanur Veeragase team wins Karunada Sri Award

Sidlaghatta : ಗೋವಾದಲ್ಲಿ ನಡೆದ “ಗೋವಾದಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ”ದಲ್ಲಿ ಕೊತ್ತನೂರು ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆಯ ಕಲಾವಿದರು ವೀರಗಸೆ ಕಲಾ ವೈಭವ ಕಾರ್ಯಕ್ರಮ ನಡೆಸಿಕೊಟ್ಟು ಸಭಿಕರ ಮನಗೆದ್ದಿದ್ದಾರೆ. ಕರುನಾಡಿನ ಕೀರ್ತಿಯನ್ನು ಗೋವಾದಲ್ಲೂ ಪಸರಿಸಿದ್ದಾರೆ.

ಗೋವಾದ ಕರ್ಮಭೂಮಿ ಕನ್ನಡ ಸಂಘ, ಬೀಚೋಲಿಯಂ ಗೋವಾ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ “ಗೋವಾದಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ” ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಕಲಾ ಜ್ಯೋತಿ ಜಾನಪದ ಕಲಾ ತಂಡದ ಗಂಗಾಧರ್ ಮತ್ತು ತಂಡದವರು ವೀರಗಾಸೆ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನ ಸೂರೆಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಕಾರ್ಯಕ್ರಮದ ಆಯೋಜಕರು ವೀರಗಾಸೆ ತಂಡದ ಎಲ್ಲರಿಗೂ ಕರುನಾಡ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಚಟಸ್ಥಲ ಬ್ರಹ್ಮ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ, ಹಿರೇಮಠ ಉಕ್ಕೇರಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version