Home News ಶಿಡ್ಲಘಟ್ಟದಲ್ಲಿ ಮಹಾಶಿವರಾತ್ರಿ ಆಚರಣೆ

ಶಿಡ್ಲಘಟ್ಟದಲ್ಲಿ ಮಹಾಶಿವರಾತ್ರಿ ಆಚರಣೆ

0

Sidlaghatta : ಶಿವರಾತ್ರಿಯ ವಿಶೇಷ ಆಚರಣೆಯ ಅಂಗವಾಗಿ ನಗರ ಹಾಗೂ ತಾಲ್ಲೂಕಿನಾದ್ಯಂತ ಇರುವ ಶಿವಾಲಯಗಳಲ್ಲಿ ಭಕ್ತಿಯ ಜಲಪಾತ ಹರಿದುಬಂದಂತಾಯಿತು. ಬೆಳಿಗ್ಗೆಯಿಂದಲೇ ವಿವಿಧ ದೇವಾಲಯಗಳಲ್ಲಿ ರುದ್ರಾಭಿಷೇಕದೊಂದಿಗೆ ಪೂಜೆ ನಡೆಯಿತು.

ಭಕ್ತಾದಿಗಳು ವಿಶೇಷವಾದ ಪಂಚಲಿಂಗ ಕ್ಷೇತ್ರಗಳನ್ನು ದರ್ಶನ ಮಾಡಿ, ಸಾವಿರಾರು ಮಂದಿ ಪಾದಯಾತ್ರೆ ಮಾಡುತ್ತಲೇ ವೀರಾಪುರದ ಗವಿಗಂಗಾಧರೇಶ್ವರ ಹಾಗೂ ಬೂದಾಳದ ಮಲೆಮಲ್ಲೇಶ್ವರ ದೇವಾಲಯಗಳ ಕಡೆಗೆ ತೆರಳಿದ ದೃಶ್ಯ ಗಮನಸೆಳೆಯಿತು. ನಗರದಲ್ಲಿರುವ ಕೋಟೆ ಸೋಮೇಶ್ವರ, ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರದ ಜಲಕಂಠೇಶ್ವರ ಹಾಗೂ ಏಕಾಂಬರೇಶ್ವರ ದೇವಾಲಯಗಳಲ್ಲಿ ಭಕ್ತರು ನಿಂತು ಪೂಜೆ ಸಲ್ಲಿಸಿದರು.

ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ದ್ವಾದಶ ಜ್ಯೋತಿ ಲಿಂಗಗಳ ಪ್ರತಿರೂಪವನ್ನು ಸ್ಥಾಪಿಸಿದ್ದು, ಈ ಅಪೂರ್ವ ಶಿಲ್ಪಕಲಾವನ್ನು ನೋಡುವ ಜನರ ಕ್ಯೂ ಭಕ್ತಿಯ ಅನುರಣನೆ ಮೂಡಿಸಿತು. ಅಲ್ಲದೆ, ಶಿವನ ಜೀವನ ಚರಿತ್ರೆ, ಸಾಕ್ಷಾತ್ಕಾರ, ಜಾಗರಣೆ ಮತ್ತು ಉಪವಾಸದ ಮಹತ್ವ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರವಚನಗಳು ನಡೆಯಿತು.

ತಾಲ್ಲೂಕಿನ ಮಳ್ಳೂರಿನ ಸಾಯಿಬಾಬಾ ಮಂದಿರದಲ್ಲಿನ ಜಲಕಂಠೇಶ್ವರ ಸ್ವಾಮಿಗೆ ಕುಂಭಾಭಿಷೇಕ, ರುದ್ರಹೋಮ, ಪಲ್ಲಕ್ಕಿ ಸೇವೆ ಮತ್ತು ಪುಷ್ಪಾಭಿಷೇಕ ನಡೆದಿದ್ದು, ಈ ಅಪೂರ್ವ ಕ್ಷಣವನ್ನು ವೀಕ್ಷಿಸಲು ಗ್ರಾಮೀಣ ಭಾಗದಿಂದ ನೂರಾರು ಭಕ್ತರು ಸೇರಿದ್ದರು.

ಬೂದಾಳದ ಮಲೆಮಲ್ಲೇಶ್ವರ ದೇವಾಲಯ, ನಲ್ಲರಾಳ್ಳಿ ಬಳಿಯ ಶ್ರೀರಾಮಲಿಂಗನಬೋಡು, ಗುಡಿಹಳ್ಳಿಯ ಸೋಮೇಶ್ವರಸ್ವಾಮಿ, ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಪ್ರಾತಃಕಾಲದಿಂದಲೇ ಆಗಮಿಸಿದ್ದರು.

ಶಿವರಾತ್ರಿಯಂದು ಚೌಡಸಂದ್ರದ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಸೂರ್ಯಕಿರಣ ಲಿಂಗವನ್ನು ಸ್ಪರ್ಶಿಸುವ ಅದ್ಭುತ ದೃಶ್ಯ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಹಲವು ದೇವಾಲಯಗಳಲ್ಲಿ ಜಾಗರಣೆಯೊಂದಿಗೇ ಭಜನೆ, ಹರಿಕಥಾ ಕಾರ್ಯಕ್ರಮಗಳು ನಡೆದಿದ್ದು, ಭಕ್ತರಿಗೆ ಫಲಾಹಾರ ವಿತರಣೆ ಮಾಡಲಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version