Sidlaghatta, Chikkaballapur : ತಾಲ್ಲೂಕಿನಾದ್ಯಂತ ಶ್ರೀ ಹನುಮ ಜಯಂತಿ ಮಹೋತ್ಸವವನ್ನು ವಿಜೃಂಭಣೆ ಹಾಗೂ ಭಕ್ತಿ ಭಾವದಿಂದಲೂ ನೆರವೇರಿಸಲಾಯಿತು. ಶ್ರೀ ಹನುಮನ ದೇವಾಲಯಗಳಲ್ಲಿ ಪೂಜೆ ಹೋಮ, ಸಾಮೂಹಿಕ ಅನ್ನ ಸಂತರ್ಪಣೆಯಂತ ಧಾರ್ಮಿಕ ಕೈಂಕರ್ಯಗಳು ನಡೆದವು.
ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯ, ಚೌಡಸಂದ್ರದ ಶ್ರೀಪ್ರಸನ್ನಾಂಜನೇಯಸ್ವಾಮಿ ದೇವಾಲಯ, ವೀರಾಪುರದ ಗವಿಗುಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯ, ನಗರದ ಕೋಟೆಯ ಶ್ರೀ ಆಂಜನೇಯಸ್ವಾಮಿ, ಮಯೂರ ವೃತ್ತದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ , ಹೋಮಗಳು ನಡೆದವು.
View on Threads
ಇದಲ್ಲದೆ ತಾಲ್ಲೂಕಿನಾಧ್ಯಂತ ಹನುಮನ ಎಲ್ಲ ದೇವಾಲಯಗಳಲ್ಲಿ ಹನುಮ ಜಯಂತಿಯ ಮಹೋತ್ಸವ ನಡೆಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಸಂಜೆ ಶ್ರೀ ಹನುಮನ ಕೀರ್ತನೆ, ಭಜನೆ ಕೂಡ ನಡೆಯಿತು.
ಸಾಕಷ್ಟು ದೇವಾಲಯಗಳಲ್ಲಿ ದೇವರ ಭಕ್ತಿ ಗೀತೆಗಳ ಗಾಯನ ಭಕ್ತರ ಗಮನ ಸೆಳೆಯಿತು. ಬಹುತೇಕ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಸಮೀಪದ ದೇವಾಲಯಗಳಿಗೆ ಕರೆದೊಯ್ದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಕಂಡು ಬಂತು. ನಡು ರಾತ್ರಿವರೆಗೂ ಸಾಕಷ್ಟು ದೇವಾಲಯಗಳಲ್ಲಿ ಹನುಮನ ನಾಮದ ಜಪ ಮಾಡಲಾಯಿತು.
ಅಪ್ಪೆಗೌಡನಹಳ್ಳಿ ಗೇಟ್ ಬಳಿಯ ಸುಪ್ರಸಿದ್ದ ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತಿತ್ಪೂರ್ವಕವಾಗಿ ಹನುಮಜಯಂತಿ ಆಚರಿಸಲಾಯಿತು. ದೇವರಿಗೆ ಬೆಳ್ಳಿಯ ವಜ್ರಾಂಗಿ ಹಾಗೂ ಪಂಚಲೋಹದ ಪ್ರಭಾವಳಿ ಅಲಂಕಾರ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಾಮತಾರಕ ಹೋಮ, ನಾರಸಿಂಹ ಹೋಮ, ಗಾಯತ್ರಿ ಹೋಮ ನಡೆಯಿತು. ಮಾನಸ ಸಂಗೀತ ವೃಂದ ದವರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು.
For Daily Updates WhatsApp ‘HI’ to 7406303366
