Home News ಒಕ್ಕಲಿಗ ಸಂಘ ನಿರ್ದೇಶಕ ಸ್ಥಾನದ ಆಕಾಂಕ್ಷಿಯಿಂದ ಆದಿಚುಂಚನಗಿರಿ ಮಠಾಧೀಶರ ಭೇಟಿ

ಒಕ್ಕಲಿಗ ಸಂಘ ನಿರ್ದೇಶಕ ಸ್ಥಾನದ ಆಕಾಂಕ್ಷಿಯಿಂದ ಆದಿಚುಂಚನಗಿರಿ ಮಠಾಧೀಶರ ಭೇಟಿ

0
Poolakuntahalli Raghunath Reddy and associates honouring Sri Mangalanandaswami of Adichunchanagiri mutt with a shawl and garland

Sidlaghatta : ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಆಕಾಂಕ್ಷಿ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಅವರು ತಮ್ಮ ಸಂಗಡಿಗರೊಂದಿಗೆ ಆದಿಚುಂಚನಗಿರಿ ಮಹಾ ಪೀಠದ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಮಂಗಳಾನಂದಸ್ವಾಮಿ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಪ್ರಸಕ್ತ ವಿದ್ಯಮಾನಗಳು, ಸಮುದಾಯದ ಸಂಘಟನೆ ಹಾಗೂ ಯುವಜನರ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳ ಕುರಿತು ಶ್ರೀಗಳೊಂದಿಗೆ ಚರ್ಚೆ ನಡೆಸಿದರು. ಗ್ರಾಮೀಣ ಭಾಗದ ಯುವಜನರಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು, ಸಮುದಾಯದ ಸಂಘಟನೆ ಬಲಪಡಿಸುವುದು ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಕುರಿತು ವಿಚಾರ ವಿನಿಮಯ ನಡೆಯಿತು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಉದ್ದೇಶ ಹೊಂದಿರುವ ರಘುನಾಥರೆಡ್ಡಿ, ತಮ್ಮ ಕ್ಷೇತ್ರ ವ್ಯಾಪ್ತಿಯ ಒಕ್ಕಲಿಗ ಸಮುದಾಯದ ಮುಖಂಡರು ಹಾಗೂ ಮತದಾರರನ್ನು ಭೇಟಿ ಮಾಡಿ ಬೆಂಬಲ ಕೋರಿರುವ ಬಗ್ಗೆಯೂ ಶ್ರೀಗಳ ಗಮನಕ್ಕೆ ತಂದರು. ನಂತರ ಶ್ರೀಮಂಗಳಾನಂದಸ್ವಾಮಿ ಅವರನ್ನು ಶಾಲು ಹಾಗೂ ಹಾರ ಹಾಕಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ನಂದಿ ವಿನೋದ್ ಕುಮಾರ್, ತಾಲೂಕು ಅಧ್ಯಕ್ಷ ಮಂಜುನಾಥಗೌಡ, ಬಿಜೆಪಿ ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ, ವರದಹಳ್ಳಿ ಲಿಂಗಾರೆಡ್ಡಿ, ಬೊಮ್ಮನಹಳ್ಳಿ ರಾಮಸ್ವಾಮಿ ಇದ್ದರು.

In English: Poolakuntahalli Raghunath Reddy, state vice-president of the Karnataka Vokkaligara Okkuta and an aspirant for the Karnataka Vokkaligara Sangha director post, called on Sri Mangalanandaswami of the Adichunchanagiri Maha Peetha’s Chikkaballapura branch mutt along with his associates, discussing current affairs, community organisation, and educational and employment opportunities for rural youth. Reddy also informed the seer of his campaign meetings with Vokkaliga community leaders and voters in his constituency ahead of the Sangha’s director election, before honouring him with a shawl and garland.

ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದ ಇತ್ತೀಚಿನ ಮತ್ತೊಂದು ವರದಿಯಾದ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಹೊಸ ಸಮಿತಿ ಆಯ್ಕೆ ಎಂಬ ಸುದ್ದಿಯನ್ನೂ ಓದಿ.

For Daily Updates WhatsApp ‘HI’ to 7406303366

error: Content is protected !!
Exit mobile version