ತಾಲ್ಲೂಕು ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ

- Advertisement -
- Advertisement -

ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಕಳೆದ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಇಪ್ಪತ್ತಮೂರು ಕರೆಗಳು ಬಂದಿದ್ದು, ಅವುಗಳಲ್ಲಿ ಬಹುತೇಕ ಪರಿಹಾರ ಒದಗಿಸಲಾಗಿದೆ, ಉಳಿದ ಒಂದೆರಡು ಪರಿಹಾರ ದೊರಕಿಸುವ ಹಂತದಲ್ಲಿದೆ ಎಂದು ಅವರು ಹೇಳಿದರು.
ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಹದಿಮೂರು ಕರೆಗಳು ಸಾರ್ವಜನಿಕರಿಂದ ಬಂದವು. ಮೊದಲನೇ ಕರೆ ಹನ್ನೊಂದನೇ ವಾರ್ಡಿನ ಸತ್ಯಮೂರ್ತಿ ಕೋತಿಗಳ ಕಾಟದ ಬಗ್ಗೆ ಪ್ರಸ್ತಾಪಿಸಿದರು. ಮಳಮಾಚನಹಳ್ಳಿ ಬೈರೇಗೌಡ ಎಂಬುವರು ಕರೆ ಮಾಡಿ ಆಶ್ರಯ ಬಡಾವಣೆ ಅಳತೆಯಾಗಿಲ್ಲ ಎಂದು ತಿಳಿಸಿದರು. ಬೈಯಪ್ಪನಹಳ್ಳಿ ಗುರುಮೂರ್ತಿ ಕರೆ ಮಾಡಿ ಖಾತೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದು, ವಿಳಂಭವಾಗುತ್ತಿದೆ ಎಂದರು. ಕನ್ನಮಂಗಲದ ಚಿಕ್ಕಾಂಜಿನಪ್ಪ ಕರೆ ಮಾಡಿ ಗ್ರಂಥಾಲಯದ ಸ್ಥಳದಲ್ಲಿ ಪತ್ರಕರ್ತರ ಭವನ ನಿರ್ಮಾಣ ಆಗುತ್ತಿದೆ, ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕುಂದಲಗುರ್ಕಿ ಸಂತೋಷ್ ಕುಮಾರ್ ಅವರು ಕರೆ ಮಾಡಿ ಅಂಗವಿಕಲರ ಕುಂದುಕೊರತೆ ಸಭೆಯನ್ನು ತಾಲ್ಲೂಕು ಆಡಳಿತ ಮಾಡಿಲ್ಲ ಎಂದು ಗಮನ ಸೆಳೆದರು.
ಬೈಯಪ್ಪನಹಳ್ಳಿ ನರಸಿಂಹರೆಡ್ಡಿ ಕರೆ ಮಾಡಿ, ಸಾಗುವಳಿದಾರರು ಬಂಡಿದಾರಿಯನ್ನು ಒತ್ತುವರಿ ಮಾಡಿದ್ದಾರೆ, ತೆರವುಗೊಳಿಸಲು ಕೋರಿದರು. ಚಿಕ್ಕದಾಸರಹಳ್ಳಿಯಿಂದ ಅನಾಮಿಕ ವ್ಯಕ್ತಿ ಕರೆ ಮಾಡಿ, ಮನೆಮನೆಗಳಲ್ಲಿ ಅಂಗಡಿಗಳಲ್ಲಿ ಅಕ್ರ್ರಮ ಮದ್ಯ ಮಾರಾಟದಿಂದ ಗ್ರಾಮದ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವಲತ್ತುಕೊಂಡರು. ನಗರದ ಮೈದೀನ್ ಸಾಬ್ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ನೀಡುತ್ತಿಲ್ಲ, ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಚಿಕ್ಕದಾಸರಹಳ್ಳಿಯ ಪವನ್ ಕರೆ ಮಾಡಿ, ಗ್ರಾಮದಲ್ಲಿ ರುದ್ರಭೂಮಿ ಒತ್ತುವರಿ, ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು. ಹಿತ್ತಲಹಳ್ಳಿಯ ಮುನಿರಾಜು ಕರೆ ಮಾಡಿ, ತಮ್ಮ ಗ್ರಾಮದಲ್ಲಿ 800 ವರ್ಷಗಳಷ್ಟು ಹಳೆಯದಾದ ವೀರಗಲ್ಲುಗಳಿವೆ, ಅವನ್ನು ಸಂರಕ್ಷಿಸಬೇಕೆಂದು ಕೋರಿದರು. ನಗರದ ತೌಸೀಫ್ ಖಾನ್ ಕರೆ ಮಾಡಿ, ಒಳಾಂಗಣ ಕ್ರೀಡಾಂಗಣದ ಅಗತ್ಯತೆಯ ಬಗ್ಗೆ ತಿಳಿಸಿದರು. ಚಿಕ್ಕದಾಸರಹಳ್ಳಿಯ ನಾಗೇಶ್ ಕರೆ ಮಾಡಿ, ರುದ್ರಭೂಮಿಯ ಒತ್ತುವರಿ
ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳನ್ನು ಒದಗಿಸಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಫೋನ್ ಮೂಲಕ ತಿಳಿಸಿ, ಪರಿಹಾರ ಕಂಡುಕೊಳ್ಳಲಿ ಎಂದು ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಈ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರ್ ಎಂ.ದಯಾನಂದ್ ಮನವಿ ಮಾಡಿದರು.
ಗ್ರೇಡ್ 2 ತಹಶೀಲ್ದಾರ್ ಹನುಮಂತರಾವ್, ಶಿರಸ್ತೆದಾರ್ ಮಂಜುನಾಥ್, ಆರ್.ಐ.ವಿಶ್ವನಾಥ್ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!