ರಾಜ್ಯ ಆಹಾರ ಆಯೋಗದ ಸದಸ್ಯರಿಂದ ಪರಿಶೀಲನೆ

- Advertisement -
- Advertisement -

“ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013”ರ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಲು ರಾಜ್ಯ ಆಹಾರ ಆಯೋಗದ ಡಾ.ಕೆ.ಕೃಷ್ಣಮೂರ್ತಿ ಅವರ ನೇತೃತ್ವದ ಸದಸ್ಯರ ತಂಡ ಶಿಡ್ಲಘಟ್ಟ ನಗರದ ವೇಣು ನ್ಯಾಯಬೆಲೆ ಅಂಗಡಿ, ಬೋವಿ ಕಾಲೋನಿ ಅಂಗನವಾಡಿ ಕೇಂದ್ರ, ಕೋಟೆ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟೆ ಬಾಲಕಿಯರ ಕನ್ನಡ ಮತ್ತು ಆಂಗ್ಲ ಮಾದ್ಯಮ ಸರ್ಕಾರಿ ಶಾಲೆ ಮತ್ತು ಕೆ.ಎಫ್.ಸಿ.ಎಸ್.ಸಿ ಆಹಾರ ಧಾನ್ಯಗಳ ಸಗಟು ಮಳಿಗೆಗೆ ಭೇಟಿ ನೀಡಿ ಪರಿಶಿಲಿಸಿದರು.
ಮಕ್ಕಳ ಹಾಜರಾತಿ, ಹಾಲು ವಿತರಣೆ, ಬಿಸಿಯೂಟ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ, ಸ್ವಚ್ಛತೆ, ಸುರಕ್ಷತೆ, ಕಟ್ಟಡ ನಿರ್ಮಾಣ, ಆಹಾರ ಧಾನ್ಯಗಳ ಸಂಗ್ರಹಣೆ, ಬಳಕೆ ಮತ್ತು ವಿತರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಂಗನವಾಡಿಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿ ಸ್ತ್ರೀಯರ ಸಂಖ್ಯೆ, ಅವರಿಗೆ ನೀಡುವ ಮಧ್ಯಾಹ್ನದ ಉಪಹಾರ ಹಾಗೂ ಧಾನ್ಯಗಳ ಪ್ರಮಾಣ, ಹಾಜರಾತಿ ಬಗ್ಗೆ ಆಯೋಗದ ಸದಸ್ಯರು ಮಾಹಿತಿ ಪಡೆದರು. ಅಂಗನವಾಡಿಗೆ ಬರದ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಸೌಲಭ್ಯಗಳು, ಕಲಿಕೆಯ ಮಹತ್ವ ಕುರಿತು ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ್ಯಾಯಬೆಲೆ ಅಂಗಡಿಯ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದ ತಂಡ, ಸಕಾಲಕ್ಕೆ ಸಾರ್ವಜನಿಕರಿಗೆ ಪಡಿತರವನ್ನು ನೀಡಬೇಕು. ಪಡಿತರದ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು. ಅಂತ್ಯೋದಯ ಪಡಿತರ ಚೀಟಿಗೆ ಉಚಿತವಾಗಿ 35 ಕೆ.ಜಿ ಅಕ್ಕಿ, ಬಿ.ಪಿ.ಎಲ್ ಪಡಿತರ ಚೀಟಿಗೆ ಒಬ್ಬರಿಗೆ ತಲಾ 6 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ರಾಗಿ ನೀಡಬೇಕು ಮತ್ತು ಅಡುಗೆ ಅನಿಲ ಹೊಂದದೆ ಇರುವವರಿಗೆ ಮೂರು ಲೀಟರ್, ಸಂಪರ್ಕ ಹೊಂದಿದವರಿಗೆ ಒಂದು ಲೀಟರ್ ಸೀಮೆಎಣ್ಣೆಯನ್ನು 35 ರೂ ದರದಲ್ಲಿ ವಿತರಿಸಬೇಕು ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, “ಈಗಾಗಲೇ ನಾವು ೨೨ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಅಂಗನವಾಡಿ, ಶಾಲೆಯ ಬಿಸಿಯೂಟ, ಗೋದಾಮು ಹಾಸ್ಟೆಲ್ ಪರಿಶಿಲನೆ ನಡೆಸುತ್ತಿದ್ದೇವೆ. ಈ ಜಿಲ್ಲೆಯಲ್ಲಿ ಪ್ರವಾಸ ಮುಗಿಸಿ, ಅಕ್ಟೋಬರ್ 24 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯನ್ನು ನಡೆಸುತ್ತೇವೆ. ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಅಲ್ಲಲ್ಲೇ ತಿಳಿಹೇಳುತ್ತೇವೆ. ಚೆನ್ನಾಗಿ ನಿರ್ವಹಣೆ ಮಾಡಿದ್ದರೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ನಮ್ಮ ಎಲ್ಲಾ ಭೇಟಿಯ ವಿವರವನ್ನು ಸಭೆಯಲ್ಲಿ ಚರ್ಚಿಸುತ್ತೇವೆ. ಸರ್ಕಾರಗಳು ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣಕ್ಕೆ ಪಣತೊಟ್ಟಿವೆ. ಆದ್ದರಿಂದ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಉತ್ತಮ ಬೆಳವಣಿಗೆಗೆ ಪೂರಕವಾಗಿ ಹಾಲು ವಿತರಿಸಬೇಕು. ಮಧ್ಯಾಹ್ನ ದ್ವಿದಳ ಧಾನ್ಯಗಳ ಬಳಸಿ ತಯಾರಿಸಿರುವ ಊಟ ನೀಡಬೇಕು. ಇದು ನಮ್ಮ ಕಾಳಜಿಯಾಗಿದೆ” ಎಂದರು.
ಆಯೋಗದ ಸದಸ್ಯರಾದ ಶಿವಶಂಕರ್, ಮಹಮದ್ ಆಲಿ, ಬಿ.ಜಿ. ಆಸನಾಬಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!