ತಾಲ್ಲೂಕಿನ ಆನೆಮಡುಗು ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಾ.ಎ.ಎಂ.ಜಯರಾಮರೆಡ್ಡಿ, ಹಾಗೂ ಉಪಾಧ್ಯಕ್ಷರಾಗಿ ಚಿಕ್ಕತೇಕಹಳ್ಳಿ ಸಿ.ವೆಂಕಟೇಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆವರಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎರಡನೇ ಭಾರಿಗೆ ಅಧ್ಯಕ್ಷರಾಗಿ ಡಾ.ಎ.ಎಂ.ಜಯರಾಮರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕತೇಕಹಳ್ಳಿ ಸಿ.ವೆಂಕಟೇಶಪ್ಪ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಕನ್ನಪ್ಪನಹಳ್ಳಿ ಕೆ.ಬೈರಾರೆಡ್ಡಿ, ಆನೇಮಡುಗು ಎ.ಎನ್.ಲಕ್ಷ್ಮೀನಾರಾಯಣ, ಪಲಿಚೇರ್ಲು ಪಿ.ವಿ.ಸೋಮಶೇಖರರೆಡ್ಡಿ, ದೊಡ್ಡತೇಕಹಳ್ಳಿ ನರಸಿಂಹಪ್ಪ, ಆನೇಮಡುಗು ಕೆ.ನರಸಿಂಹಮೂರ್ತಿ, ಸಾದಹಳ್ಳಿ ಎಲ್.ಅನಸೂಯಮ್ಮ, ಕನ್ನಪ್ಪನಹಳ್ಳಿ ಸುಶಿಲಮ್ಮ, ಆನೇಮಡುಗು ಲಕ್ಷ್ಮಯ್ಯ, ಬಿನ್ನಮಂಗಲ ನರಸಿಂಹಪ್ಪ, ಗ್ರಾ.ಪಂ ಸದಸ್ಯ ಕೆ.ಬೈರಾರೆಡ್ಡಿ, ಸಂಘದ ಮಾಜಿ ಅಧ್ಯಕ್ಷ ಗೌಡನಹಳ್ಳಿ ನರಸಪ್ಪ ಮುಖಂಡ ಕೆ.ನಾರಾಯಣಸ್ವಾಮಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -