ಸಮುದಾಯ ಚರ್ಮ ವೈದ್ಯರ ಸಂಘ ಹಾಗೂ ಗ್ರಾಮಾಂತರ ಟ್ರಸ್ಟ್ ವತಿಯಿಂದ ಭಾನುವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರದಲ್ಲಿ ಸಮುದಾಯ ಚರ್ಮ ವೈದ್ಯರ ಸಂಘದ ಅಧ್ಯಕ್ಷೆ ಡಾ.ಟಿ.ಎಸ್.ವಿದ್ಯಾ ಮಾತನಾಡಿದರು.
ಚರ್ಮರೋಗ ಪ್ರಸ್ತುತ ಪ್ರಮುಖವಾಗಿ ಕಾಡುವಂತಹ ಸಮಸ್ಯೆಯಾಗಿದೆ. ಚರ್ಮರೋಗಕ್ಕೆ ಆರಂಭದಲ್ಲಿ ಉತ್ತಮ ಚಿಕಿತ್ಸೆ ನೀಡಿದಾಗ ಇದರಿಂದ ನಿವಾರಣೆ ಸಾಧ್ಯ ಎಂದು ಅವರು ತಿಳಿಸಿದರು.
ಈ ಉಚಿತ ಶಿಬಿರದಲ್ಲಿ ಪರಿಣಿತ ತಜ್ಞರಿಂದ ಮೊಡವೆ, ಬಿಳಿಮಚ್ಚೆ, ತಲೆಹೊಟ್ಟು, ಕೂದಲುದುರುವಿಕೆ, ಕುಷ್ಟರೋಗ, ಗುಪ್ತರೋಗ, ಇಸುಬು, ಗಜಕರ್ಣ, ಕಪ್ಪುಕಲೆ, ತೊನ್ನು, ಸಿಬ್ಬು, ಐತಿಗೆ, ಲೈಂಗಿಕ ಸಮಸ್ಯೆ, ಸರ್ಪಹುಣ್ಣು, ಸೋರಿಯಾಸಿಸ್, ಚರ್ಮರೋಗಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಕಾಯಿಲೆ ಗಳಿಗೆ ಉಚಿತ ತಪಾಸಣೆ ಹಾಗೂ ಔಷಧಿಯನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಶಿಡ್ಲಘಟ್ಟದಲ್ಲಿ ಸುಮಾರು ೨೦೦ ಮಂದಿ ಹಾಗೂ ಮುತ್ತೂರಿನಲ್ಲಿ ೧೫೦ ಮಂದಿ ಈ ಉಚಿತ ಚಿಕಿತ್ಸೆಯಲ್ಲಿ ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡರು.
ನಗರದ ಬಸ್ ನಿಲ್ದಾಣದ ಬಳಿ ವಿವಿಧ ಚರ್ಮ ಸೋಂಕುಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.
ಡಾ.ಪ್ರಭಾಕರ್ ಸಂಗೊಳ್ಳಿ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಅಭಿಷೇಕ್, ಅನಂತಲಕ್ಷ್ಮಿ, ಮುನಿರಾಜು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







