ಮೇ ೧೨ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಶನಿವಾರ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಎಂ.ಇ.ಪಿ ಪಕ್ಷದ ಅಭ್ಯರ್ಥಿಯಾಗಿ ಕನ್ನಪ್ಪನಹಳ್ಳಿ ಯಾಮೇಗೌಡ ನಾಮಪತ್ರವನ್ನು ಚುನಾವಣಾಧಿಕಾರಿ ಮಲ್ಲಿಕಾರ್ಜುನ್ರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,‘ನಾನು ರೈತ ಕುಟುಂಬದ ಹಿನ್ನೆಲೆಯವನು. ಸುಮಾರು 65 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದೇ ಬೇಸತ್ತು ಏನಾದರೂ ಬದಲಾವಣೆ ಮಾಡಬೇಕೆಂಬ ಉದ್ದೇಶದಿಂದ ಕಳೆದ ಎಂಟು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಅಹಿಂದ ವರ್ಗದವರನ್ನು ನಮ್ಮ ಕ್ಷೇತ್ರದಲ್ಲಿ ಬೆಳೆಯಬಾರದು ಎಂಬ ಅಜೆಂಡಾ ಇಟ್ಟುಕೊಂಡು ಕಲವಾರು ಪಕ್ಷಗಳು ನಮಗೆ ಟಿಕೇಟ್ ಕೊಟ್ಟಿಲ್ಲ. ಆದರೆ ಎಂ.ಇ.ಪಿ ಪಕ್ಷ ನಮ್ಮನ್ನು ಗುರುತಿಸಿ ಟಿಕೇಟ್ ನೀಡಿದೆ. ಸೋಲು ಗೆಲುವು ಯಾವುದೇ ಬಂದರೂ ಸ್ವೀಕರಿಸುತ್ತೇವೆ. ಆದರೆ ಜನರ ನಡುವೆ ಹೋಗಿ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಪಕ್ಷವನ್ನು ಮುಂದಿನ ದಿನಗಳಲ್ಲಿ ಸದೃಢಗೊಳಿಸುತ್ತೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್.ಪ್ಯಾರೇಜಾನ್, ನವೀನ್, ಸುಜಿತ್, ಜಯಚಂದ್ರ, ಸೋಮಣ್ಣ, ರಾಮಣ್ಣ, ಕುಮಾರ್, ರವಿಚಂದ್ರ ಹಾಜರಿದ್ದರು.