ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ನಂತರ ತಾಲ್ಲೂಕಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಹಾಗೂ ೬೦೦ ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವುದರ ಹಿನ್ನೆಲೆಯಲ್ಲಿ ಅವರನ್ನು ಪ್ರೋತ್ಸಾಹಿಸುವುದರ ಜೊತೆಯಲ್ಲಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸದಾಶಯವಿದೆ ಎಂದು ಅವರು ತಿಳಿಸಿದರು.
ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಓದುವ ವಿದ್ಯಾರ್ಥಿಗಳಿಗೆ ವಿದ್ಯೆ ಒಲಿಯಬೇಕಾದರೆ ಶಿಸ್ತು, ಶ್ರದ್ಧೆ, ಅದಮ್ಯ ಕಲಿಕೋತ್ಸಾಹ ಮತ್ತು ಶ್ರಮವನ್ನು ಅದು ಬೇಡುತ್ತದೆ. ಎಲ್ಲರ ಬಳಿಯಿರುವುದೂ ಅದೇ ಸಮಯ. ಆದರೆ ಯಾರು ಯಾವುದಕ್ಕೆ ಸಮಯವನ್ನು ಮೀಸಲಿಡುತ್ತಾರೆ ಎಂಬುದು ಅವರ ಗುರಿಯನ್ನು ತಲುಪುವ ವೇಗವನ್ನು ನಿರ್ಧರಿಸುತ್ತದೆ. ಈ ರೀತಿಯ ಪ್ರತಿಭಾ ಪುರಸ್ಕಾರ ಇತರ ವಿದ್ಯಾರ್ಥಿಗಳ ಮುಂದೆ ನಡೆಸುವ ಉದ್ದೇಶ ಅವರಿಗೂ ಇವರಂತಾಗುವ ಛಲ, ಹುಮ್ಮಸ್ಸು, ಉತ್ಸಾಹ ಮತ್ತು ಆಸಕ್ತಿ ಮೂಡಲಿ ಎಂಬುದಾಗಿದೆ. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳುಈಗಿನವರ ದಾಖಲೆಗಳನ್ನು ಮುರಿಯುವಂತಾಗಲಿ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶೇ ೧೦೦ ರಷ್ಟು ಅಂಕಗಳನ್ನು ಪಡೆಯಲು ಕಾರಣರಾದ ಶಿಕ್ಷಕರನ್ನು ಸಹ ಗೌರವಿಸುವ ಕೆಲಸವಾಗಲಿ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ನಂತರ ೬೧೯ ಅಂಕಗಳನ್ನು ಗಳಿಸಿ ಬಿ.ಕೆ.ಚಂದನಾ ತಾಲ್ಲೂಕಿಗೆ ಪ್ರಥಮಳಾಗಿ. ಇಂಗ್ಲಿಷ್, ಹಿಂದಿ, ಗಣಿತ, ಸಮಾಜ ವಿಜ್ಞಾನ ವಿಷಯಗಳಲ್ಲಿ ಶೇ ೧೦೦ ಅಂಕಗಳನ್ನು ಪಡೆದಿದ್ದಾಳೆ. ಶಾಲೆಯ ವತಿಯಿಂದ ಬಿ.ಕೆ.ಚಂದನಾ ಗೆ ಪ್ರಶಸ್ತಿ ಫಲಕ, ಪುಸ್ತಕ ಮತ್ತು ಆರು ಸಾವಿರ ರೂ ನಗದನ್ನು ನೀಡಿ ಪುರಸ್ಕರಿಸಲಾಯಿತು. ಶಾಲೆಗೆ ದ್ವಿತೀಯನಾದ ಬಿ.ಆರ್.ಯಶ್ವಂತ್ ಗೆ ಪ್ರಶಸ್ತಿ ಫಲಕ, ಪುಸ್ತಕ ಮತ್ತು ನಾಲ್ಕು ಸಾವಿರ ರೂ ನಗದನ್ನು ನೀಡಿ, ವಿದ್ಯಾರ್ಥಿಗಳಾದ ಅರುಣ್ ಕುಮಾರ್, ರಾಹುಲ್ ಭಾರಧ್ವಾಜ್, ಸಾಗರ್ ರಾವಲ್, ಎಂ.ಎಂ.ಸ್ಕಂದನ್ ಅವರಿಗೆ ಒಂದು ಸಾವಿರ ರೂ ನೀಡಿ ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕ್ರಮ ಮತ್ತು ಪರಿಶ್ರಮದ ಕುರಿತಾಗಿ ಅನುಭವಗಳನ್ನು ಹಂಚಿಕೊಂಡರು.
ಕ್ರೆಸೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್, ಕಾರ್ಯದರ್ಶಿ ತಮೀಮ್ ಅನ್ಸಾರಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿ ನಟರಾಜ್, ಕಸಾಪ ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಶಿಕ್ಷಕರಾದ ಭಾಸ್ಕರ್, ಸುಬ್ರಮಣ್ಯ,ರಾಮಚಂದ್ರ, ಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -