25.1 C
Sidlaghatta
Thursday, April 25, 2024

ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ದೊಡ್ಡತೇಕಹಳ್ಳಿ ತಂಡಕ್ಕೆ ‘ಟಗರು’ ಬಹುಮಾನ

- Advertisement -
- Advertisement -

ನಗರದ ಗಾಂಧಿನಗರದ ಇದ್ಲೂಡು ರಸ್ತೆಯಲ್ಲಿ ಈಚೆಗೆ ಫ್ರೆಂಡ್ಸ್ ಕಬಡ್ಡಿ ಕ್ಲಬ್ ವತಿಯಿಂದ ದಿ.ಡಾ.ಎಂ.ಶ್ರೀಧರ್ ಸ್ಮರಣಾರ್ಥ ನಡೆಸಿದ ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ದೊಡ್ಡತೇಕಹಳ್ಳಿ ಗ್ರಾಮದ ತಂಡ ವಿಜೇತರಾಗಿ ‘ಟಗರು’ ಬಹುಮಾನವಾಗಿ ಪಡೆಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 21 ತಂಡಗಳು ಭಾಗವಹಿಸಿದ್ದವು. ಮೊದಲನೇ ಬಹುಮಾನವಾಗಿ ಟಗರು, ಪ್ರಮಾಣಪತ್ರ ಮತ್ತು ಪದಕವನ್ನು ವಿಜೇತ ದೊಡ್ಡತೇಕಹಳ್ಳಿ ಗ್ರಾಮದ ತಂಡಕ್ಕೆ ನೀಡಲಾಯಿತು. ಎರಡನೇ ಬಹುಮಾನ 10 ಸಾವಿರ ರೂ ನಗದು ಮತ್ತು ಪದಕವನ್ನು ವರದನಾಯಕನಹಳ್ಳಿ ಗ್ರಾಮದ ತಂಡ ಪಡೆದರೆ, ಮೂರನೇ ಬಹುಮಾನ 5 ಸಾವಿರ ರೂ ನಗದು ಮತ್ತು ಪದಕವನ್ನು ದೇವರಮಳ್ಳೂರು ತಂಡ ಪಡೆಯಿತು. ಸಮಾಧಾನಕರ ಬಹುಮಾನ 2 ಸಾವಿರ ರೂ ನಗದು ಮತ್ತು ಪದಕ ವೆಂಕಟಾಪುರ ತಂಡಕ್ಕೆ ಹಾಗೂ ಭಾಗವಹಿಸಿದ ಪ್ರತಿ ತಂಡಗಳಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹದಿನೈದು ಮಂದಿ ಹಿರಿಯ ಕಬಡ್ಡಿ ಆಟಗಾರರನ್ನು ಸನ್ಮಾನಿಸಲಾಯಿತು. ದಿ.ಡಾ.ಎಂ.ಶ್ರೀಧರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಫ್ರೆಂಡ್ಸ್ ಕಬಡ್ಡಿ ಕ್ಲಬ್ ಸದಸ್ಯರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!