ನಗರದ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಶಿಟೋ ರಿಯೋ ಕರಾಟೆ ಡು ಇಂಡಿಯಾ ಅಕಾಡೆಮಿ ವತಿಯಿಂದ ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ಶಿಬಿರದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬೆಲ್ಟ್ ಹಾಗೂ ಪ್ರಮಾಣಪತ್ರವನ್ನು ವಿತರಿಸಿ ಗೌರಿಬಿದನೂರಿನ ಕರಾಟೆ ಶಿಕ್ಷಕ ಹಾಗೂ ಕರಾಟೆ ಪರಿವೀಕ್ಷಕ ಚಂದ್ರಶೇಖರ್ ಮಾತನಾಡಿದರು.
ಕರಾಟೆ ಕ್ರೀಡೆಯಾಗಿ ಮಾತ್ರವಲ್ಲ, ಆತ್ಮರಕ್ಷಣೆಯ ಕಲೆಯಾಗಿಯೂ ದೇಶದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಉತ್ತಮ ಆರೋಗ್ಯವನ್ನು ಹೊಂದಲೂ ಸಹ ಕರಾಟೆ ಸಹಾಯಕವಾಗಲಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲರ ಜೀವನ ಶೈಲಿ ಬದಲಾಗಿದ್ದು ಕಂಪ್ಯೂಟರ್, ಟಿ.ವಿ. ಮುಂದೆ ಕುಳಿತುಕೊಳ್ಳುವ ಪ್ರವೃತ್ತಿ, ಕೆಲಸದಿಂದ ದೇಹಕ್ಕೆ ಕಸರತ್ತು ಇಲ್ಲದೆ ಹತ್ತು ಹಲವು ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ. ಈ ಸಮಸ್ಯೆಯಿಂದ ಪಾರಾಗಲು ವ್ಯಾಯಾಮ ಮತ್ತಿತರೆ ದೈಹಿಕ ಕಸರತ್ತು ಮಾಡುವುದರೊಂದಿಗೆ ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಂಡು ಹಿತಮಿತವಾದ ಊಟೋಪಚಾರ ಮಾಡಬೇಕಿದೆ. ಆಗಲೇ ಎಲ್ಲರೂ ಆರೋಗ್ಯ ಜೀವನ ನಡೆಸಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಎಲ್ಲೋ, ಆರೆಂಜ್, ಗ್ರೀನ್, ಬ್ಲೂ, ಪರ್ಪಲ್, ಬ್ರೌನ್ ಬೆಲ್ಟ್ಗಳನ್ನು ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕರಾಟೆ ಶಿಕ್ಷಕರಾದ ವಿ.ಅರುಣ್ ಕುಮಾರ್, ನಾಗೇಶ್, ದೈಹಿಕ ಶಿಕ್ಷಕ ಮುರಳಿ ಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -







