ಕುಡಿಯುವ ನೀರಿಗಾಗಿ ಪ್ರತಿಭಟನೆ

- Advertisement -
- Advertisement -

ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ವಿಫಲರಾಗಿದ್ದಾರೆ ಎಂದು ೧೫ ನೇ ವಾರ್ಡಿನ ನಾಗರಿಕರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದ ಇದ್ಲೂಡು ರಸ್ತೆಯಲ್ಲಿರುವ ಮಾರುತಿನಗರದ ನಿವಾಸಿಗಳು ಖಾಲಿಬಿಂದಿಗೆಗಳನ್ನು ಹಿಡಿದುಕೊಂಡು ಬೀದಿಗಿಳಿದು ನಗರಸಭೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ನೀಡುತ್ತಿಲ್ಲ, ಕುಡಿಯುವ ನೀರಿಲ್ಲದೆ ನಾವೆಲ್ಲಾ ಪರದಾಡುವಂತಾಗಿದೆ, ನಗರಸಭಾ ಸದಸ್ಯರ ಮನೆಯ ಬಳಿಯಲ್ಲಿ ಹೋಗಿ ಕೇಳಿದರೆ, ಮನೆಗಳ ಬಳಿಗೆ ಬರಬೇಡಿ ಎನ್ನುತ್ತಾರೆ, ಹೋಗಿ ನಗರಸಭೆಯ ಮುಂದೆ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ, ನಗರಸಭೆಯ ಬಳಿಗೆ ಹೋದರೆ, ಮಹಿಳೆಯರು ಬರಬೇಡಿ ಎನ್ನುತ್ತಾರೆ ಈ ರೀತಿ ನಗರಸಭಾ ಸದಸ್ಯರು, ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾವು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!