ನಗರಕ್ಕೆ ಬೇರೆ ಊರುಗಳಿಂದ ಬಂದವರನ್ನು ನಗರಸಭೆ ಪೌರಾಯುಕ್ತ ತ್ಯಾಗರಾಜ್, ಆರೋಗ್ಯ ನಿರೀಕ್ಷಕಿ ಶೋಭಾ ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆ ಮತ್ತು ಪೊಲೀಸರ ಜೊತೆಗೂಡಿ ವಾಪಸ್ ಕಳುಹಿಸುತ್ತಿದ್ದಾರೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವನ್ನೇ ಲಾಕ್ ಔಟ್ ಮಾಡಿ, ಎಲ್ಲರೂ ತಾವಿರುವಲ್ಲಿಯೇ ಇರಿ ಎಂದು ತಿಳಿಸಿದ್ದರೂ, ಕೆಲವರು ಪರ ಊರುಗಳಿಂದ ನಗರಕ್ಕೆ ಬರುವುದು ನಡೆಯುತ್ತಿದೆ. ಅಂಥವರನ್ನು ನಗರಸಭೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿ ಅವರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಸೋಮವಾರ ಕಾಮಾಟಿಗರಪೇಟೆಗೆ ನಾಲ್ಕು ಜನ ಬೆಂಗಳೂರಿನಿಂದ ಆಗಮಿಸಿದ್ದರು, ಕೋಟೆವೃತ್ತದ ಬಳಿಯ ರಸ್ತೆಯಲ್ಲಿ ಗೌರಿಬಿದನೂರಿನ ಡಿ.ಪಾಳ್ಯದಿಂದ ನಾಲ್ವರು ಬಂದಿದ್ದರು. ಅವರ ಆರೋಗ್ಯವನ್ನು ಪರೀಕ್ಷಿಸಿ ಅವರ ಮಾಹಿತಿ ಪಡೆದು, ತಕ್ಷಣವೇ ಅವರು ವಾಪಸ್ ತೆರಳುವಂತೆ ಸೂಚಿಸಿ ಕಳುಹಿಸಲಾಯಿತು. ಮಂಗಳವಾರ ಕ್ರೆಸೆಂಟ್ ಶಾಲೆಯ ಬಳಿ ಹಿಂದೂಪುರದಿಂದ ಬಂದಿದ್ದ ಇಬ್ಬರನ್ನು ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರನ್ನು ವಾಪಸ್ ಅವರ ಸ್ಥಳಗಳಿಗೆ ಕಳುಹಿಸಿದರು.
“ಯಾರೇ ಪರಸ್ಥಳಗಳಿಂದ ಬಂದಿದ್ದು ತಿಳಿದರೂ ನಗರಸಭೆಯವರ ಗಮನಕ್ಕೆ ತನ್ನಿ. ಕೊರೊನಾ ಎಂಬ ಸೋಂಕು ರೋಗ ತಡೆಗಟ್ಟಬೇಕೆಂದು ಸರ್ಕಾರ ಎಲ್ಲರನ್ನೂ ತಾವಿರುವಲ್ಲಿಯೇ ಇರಿ ಎಂದು ತಿಳಿಸಲಾಗುತ್ತಿದೆ. ಅನಗತ್ಯವಾಗಿ ಸಂಚರಿಸಬಾರದು” ಎಂದು ನಗರಸಭೆ ಪೌರಾಯುಕ್ತ ತ್ಯಾಗರಾಜ್ ತಿಳಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







