ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರ್.ಶ್ರೀನಿವಾಸ್ ಜಯಶಾಲಿಯಾಗಿದ್ದಾರೆ.
ಕೋಚಿಮುಲ್ ನ ಹಾಲಿ ನಿರ್ದೇಶಕರಾಗಿದ್ದ ಜೆಡಿಎಸ್ ಬೆಂಬಲಿತ ಬಂಕ್ ಮುನಿಯಪ್ಪ ಅವರ ವಿರುದ್ಧ ಒಂದೇ ಒಂದು ಮತದ ಅಂತರದಲ್ಲಿ ಗೆಲುವನ್ನು ಸಾಧಿಸಿ ಕೆ.ಮುತ್ತುಗದಹಳ್ಳಿಯ ಆರ್.ಶ್ರೀನಿವಾಸ್ ಕೋಚಿಮುಲ್ ನಿರ್ದೇಶಕರಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಿಂದ ಒಟ್ಟು ೧೭೪ ಮತದಾರರು ಮತ ಚಲಾಯಿಸಿದ್ದು, ಈ ಪೈಕಿ ಒಂದು ಮತ ಕುಲಗೆಟ್ಟಿದೆ. ಆರ್.ಶ್ರೀನಿವಾಸ್ ಗೆ ೮೭ ಮತಗಳನ್ನು ಪಡೆದರೆ, ಬಂಕ್ ಮುನಿಯಪ್ಪ ಅವರು ೮೬ ಮತಗಳನ್ನು ಪಡೆದಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೧೯ ಮಹಿಳಾ ಸಹಕಾರ ಸಂಘಗಳು ಸೇರಿದಂತೆ ಒಟ್ಟು ೨೧೩ ಹಾಲು ಉತ್ಪಾದಕ ಸಂಘಗಳಿವೆ. ಈ ಪೈಕಿ ಒಟ್ಟು ೧೭೪ ಸಂಘಗಳು ಮಾತ್ರ ಮತದಾನದ ಅರ್ಹತೆ ಪಡೆದಿದ್ದವು.
- Advertisement -
- Advertisement -
- Advertisement -







