ನಗರದ ಸ್ತ್ರೀಶಕ್ತಿ ಭವನದಲ್ಲಿ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
೫ ರಿಂದ ೮ ವರ್ಷ : ಮಳ್ಳೂರು ಸ್ವಾಮಿ ವಿವೇಕಾನಂದ ಶಾಲೆಯ ಕಾವ್ಯಗೌಡ (ಪ್ರಥಮ), ಸರಸ್ವತಿ ವಿದ್ಯಾಸಂಸ್ಥೆಯ ಸೈಯದ್ ಫೈಜಾನ್ (ದ್ವಿತೀಯ);
೯ ರಿಂದ ೧೨ ವರ್ಷ : ಡಾಲ್ಫಿನ್ ಶಾಲೆಯ ವಿ.ಹರ್ಷಿತ್ (ಪ್ರಥಮ), ಡಾಲ್ಫಿನ್ ಶಾಲೆಯ ಎಸ್.ಜಯಂತ್ (ದ್ವಿತೀಯ), ಬಿ.ಜಿ.ಎಸ್. ಶಾಲೆಯ ಸಿ.ಎಂ.ಯೋಗೇಶ್ (ತೃತೀಯ) ;
೧೩ ರಿಂದ ೧೬ ವರ್ಷ : ಡಾಲ್ಫಿನ್ ಶಾಲೆಯ ಡಿ.ಎಂ.ಮೋಹನ್ (ಪ್ರಥಮ), ಬಿ.ಜಿ.ಎಸ್ ಶಾಲೆಯ ಎನ್.ಶಿವಮಣಿ (ದ್ವಿತೀಯ), ಬಿ.ಜಿ.ಎಸ್ ಶಾಲೆಯ ಎಸ್.ಎನ್.ಚಂದ್ರಿಕಾ (ತೃತೀಯ) ಸ್ಥಾನ ಪಡೆದರು.
ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನವನ್ನು ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀದೇವಮ್ಮ, ತೀಪುಗಾರರಾಗಿದ್ದ ಚಿತ್ರಕಲಾ ಶಿಕ್ಷಕ ಎಂ.ನಾಗರಾಜ್, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಡಾಲ್ಫಿನ್ ಶಾಲೆಯ ಕೆ.ಕೆ.ಶೈನ್, ಬಿ.ಜಿ.ಎಸ್ ಶಾಲೆಯ ಸಯ್ಯದ್ ಅಲಿ, ಗಿರಿಜಾಂಬಿಕೆ, ಶಾಂತಜಿಂದ್ರಾಳೆ, ಎಂ.ರಾಧಮ್ಮ, ಸಂದೀಪ್, ಅಂಜದ್ ಹಾಜರಿದ್ದರು.
- Advertisement -
- Advertisement -
- Advertisement -