19.9 C
Sidlaghatta
Sunday, July 20, 2025

ಚರಂಡಿ ನಿರ್ಮಿಸದೇ ರಸ್ತೆ ಕಾಮಗಾರಿ – ಸ್ಥಳೀಯರ ಅಡ್ಡಿ

- Advertisement -
- Advertisement -

ನಗರದ ಎರಡನೇ ಕಾರ್ಮಿಕ ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಚರಂಡಿಯನ್ನು ನಿರ್ಮಾಣ ಮಾಡದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಬಾರದೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ನಗರದ ಎರಡನೇ ಕಾರ್ಮಿಕ ನಗರ 26 ನೇ ವಾರ್ಡ್ ಗೆ ಸೇರುತ್ತದೆ. ಇದು ತಗ್ಗು ಪ್ರದೇಶವಾಗಿದೆ. ಈಗಾಗಲೇ ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಮಳೆ ನೀರು ಹರಿದು ಹೋಗಲು ಸ್ಥಳವಿಲ್ಲದೆ ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರದ ೧೭ ರಿಂದ ೨೬ನೇ ವಾರ್ಡ್ ವರೆಗೂ ನಗರೋತ್ಥಾನದ ೨ನೇ ಹಂತದ ಯೋಜನೆಯಲ್ಲಿ ಸುಮಾರು ೫೦ ಲಕ್ಷರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲು ಚರಂಡಿ ಕಾಮಗಾರಿ ಪೂರ್ಣಗೊಳಿಸದೆ, ಚರಂಡಿಯಲ್ಲಿ ತುಂಬಿದ ಹೂಳನ್ನು ಕೂಡ ತೆಗೆಸದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮೊದಲು ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ನಂತರ ರಸ್ತೆ ಕಾಮಗಾರಿ ಪ್ರಾರಂಭ ಮಾಡಬೇಕೆಂದು ೨ನೇ ಕಾರ್ಮಿಕ ನಗರದ ವಾಸಿಗಳಾದ ಗೌಸ್ ಖಾನ್, ಅಮೀರ್ ಖಾನ್, ಇಲಿಯಾಜ್, ಅಮೀರ್, ನೌಕತ್ ಖಾನ್. ಅಸದ್ ಒತ್ತಾಯಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!