ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಪುಷ್ಪನಮನ

- Advertisement -
- Advertisement -

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಡಾ.ವಿಜಯ್ ಕುಮಾರ್ ಮಾತನಾಡಿದರು.
ಅಂಬೇಡ್ಕರ್‌ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಭಾರತೀಯನೂ ಆತ್ಮ ಗೌರವದಿಂದ ಬದುಕಬೇಕೆಂಬುದು ಆ ಮಹಾಪುರುಷನ ಕನಸಾಗಿತ್ತು.ವಿದೇಶಿಯರ ಆಳ್ವಿಕೆಯಿಂದ ಬಿಡುಗಡೆ ಪಡೆದ ಭಾರತವು ನಿಜವಾಗಿಯೂ ಸ್ವತಂತ್ರ ದೇಶವಾಗಬೇಕಾದರೆ, ಜಾತೀಯತೆ ಮತ್ತು ಬಡತನದಿಂದ ಬಿಡುಗಡೆ ಪಡೆಯಬೇಕೆನ್ನುವುದು ಅವರ ದ್ಯೇಯವಾಗಿತ್ತು. ಭಾರತಿಯರೆಲ್ಲರು ಜಾತಿ-ಭೇದ ಮತ್ತು ಕೋಮುಭಾವನೆಯನ್ನು ಬಿಟ್ಟು ಒಂದೇ ತಾಯಿಯ ಮಕ್ಕಳಾಗಿ ಬಾಳಬೇಕೆನ್ನುವುದು ಅವರ ಮನದಾಳದ ಮಹಾಬಯಕೆಯಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಪ್ಪ ಅವರು ಅಂಬೇಡ್ಕರ್ ಕುರಿತಂತೆ ಭಾವಗೀತೆಗಳನ್ನು ಹಾಡಿದರು.
ಡಾ.ತಿಮ್ಮೇಗೌಡ, ಆಸ್ಪತ್ರೆಯ ಸಿಬ್ಬಂದಿಗಳಾದ ಅಕ್ಕಲರೆಡ್ಡಿ, ಲೋಕೇಶ್, ಸಿ.ವಿಜಯ, ಲಲಿತಮ್ಮ, ಆಶಾಕಾರ್ಯಕರ್ತೆಯರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!