ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದನ್ನು ಖಂಡಿಸಿ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ತಾಲ್ಲೂಕಿನ ಜಂಗಮಕೋಟೆ ವೃತ್ತದಲ್ಲಿ ಬುಧವಾರ ಟೈರುಗಳನ್ನು ಸುಟ್ಟು ಮಾನವ ಸರಪಣಿಯನ್ನು ನಿರ್ಮಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇಡಿ ಅಧಿಕಾರಿಗಳು ಕೇಂದ್ರ ಬಿಜೆಪಿ ನಾಯಕರ ದಾಳಕ್ಕೆ ಕುಣಿಯುತ್ತಿದ್ದಾರೆ. ಕಾನೂನು ಚೌಕಟ್ಟಿನಿಂದ ಗೆದ್ದು ಡಿಕೆಶಿ ಹೊರ ಬರಲಿದ್ದಾರೆ ಎಂಬ ಘೋಷಣೆ ಕೂಗಿದರು. ಈ ದ್ವೇಷದ ರಾಜಕಾರಣಕ್ಕೆ ಸಾರ್ವಜನಿಕರು ಉತ್ತರ ಕೊಡಲಿದ್ದಾರೆ. ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಬಂಧನ ಖಂಡಿಸಿ ಪ್ರತಿಭಟಿಸಿದರು.
ಜಂಗಮಕೋಟೆ ವೃತ್ತದ ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಆಂಜನೇಯರೆಡ್ಡಿ, ಕೃಷ್ಣಮೂರ್ತಿ, ಮೂರ್ತಿ, ಮಂಜುನಾಥ್, ಮುನಿಆಂಜಿನೇಯ, ದೇವರಾಜು, ನಾರಾಯಣಸ್ವಾಮಿ, ಮುನಿರಾಜು ಹಾಜರಿದ್ದರು.