27.2 C
Sidlaghatta
Thursday, July 10, 2025

ನಗರಸಭೆಗೆ ಜೆ.ಸಿ.ಬಿ ಯಂತ್ರ ಹಸ್ತಾಂತರ ಮತ್ತು ಸೋಲಾರ್ ದೀಪಗಳಿಗೆ ಚಾಲನೆ

- Advertisement -
- Advertisement -

ನಗರಸಭೆ ಆವರಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ.ನಾಗಾಂಬಿಕಾದೇವಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎ.ಸಿ ರಘುನಂದನ್, ಯೋಜನಾ ನಿರ್ದೇಶಕಿ ರೇಣುಕಾ ಮತ್ತು ಶಾಸಕ ವಿ.ಮುನಿಯಪ್ಪ ಸುಮಾರು ೨೫ ಲಕ್ಷ ರೂ ವೆಚ್ಚದ ಜೆ.ಸಿ.ಬೆ ಯಂತ್ರವನ್ನು ನಗರಸಭೆ ಪೌರಾಯುಕ್ತ ಶ್ರೀಕಾಂತ್ ಅವರಿಗೆ ಸಾಂಕೇತಿಕವಾಗಿ ಬೀಗದ ಕೈ ನೀಡುವ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿ, “ನಗರಸಭೆಯಾದ ಮೇಲೆ ನಗರೋತ್ಥಾನದಲ್ಲಿ ೪೦ ಕೋಟಿ ರೂಪಾಯಿ ಬಂದಿದ್ದು, ಸಾಕಷ್ಟು ಕೆಲಸಗಳಾಗಿವೆ, ಇನ್ನೂ ಆಗಬೇಕಾದ ಕೆಲಸಗಳು ಬಹಳ ಇವೆ. ನಗರದ ಅಭಿವೃದ್ಧಿಗೆ ಹೆಚ್ಚುವರಿ ಹಣವನ್ನು ನಗರೋತ್ಥಾನದ ಮೂಲಕ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರನ್ನು ವಿನಂತಿ ಮಾಡಿದರು.
ನಗರಸಭೆ ಎಂದು ಉನ್ನತೀಕರಣಗೊಳಿಸಿದ ನಂತರ ಬೇಕಾದ ಎಲ್ಲಾ ಸೌಲತ್ತುಗಳು ಸಂಪೂರ್ಣವಾಗಿ ಸಿಕ್ಕಿಲ್ಲ. ಆರ್ಥಿಕ ಶಕ್ತಿಯನ್ನು ತಾವು ಕೊಡಬೇಕು. ಕಳೆದ ಐದು ತಿಂಗಳ ಹಿಂದೆ ಚುನಾವಣೆ ನಡೆಯಿತು, ಆದರೆ ಅಧ್ಯಕ್ಷ ಚುನಾವಣೆ ನಡೆಯದೇ ಅಭಿವೃದ್ಧಿಗೆ ಅಡಚಣೆಯಾಗಿದೆ. ದಯಮಾಡಿ, ನಗರಸಭೆ ಅಧ್ಯಕ್ಷ ಚುನಾವಣೆಗೆ ಹಾಕಿರುವ ನಿರ್ಭಂದವನ್ನು ದಯಮಾಡಿ ತೆರವುಗೊಳಿಸಿ. ನಗರ ೨೦ ವರ್ಷದಿಂದೀಚೆಗೆ ತುಂಬಾ ಬೆಳೆದಿದೆ, ನಗರದಲ್ಲಿ ಶೇ ೫೯ ರಷ್ಟು ಯುಜಿಡಿ ಮಾಡಬೇಕಿದೆ. ಅದಕ್ಕೂ ತಮ್ಮ ಸಹಕಾರ ಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸೋಲಾರ್ ಶಕ್ತಿಯಿಂದ ಉರಿಯುವ ೨೦ ಎ.ಇ.ಡಿ ಬೀದಿ ದೀಪಗಳಿಗೆ ಚಾಲನೆ ನೀಡಲಾಯಿತು. ಮನೆಗಳಿಗೆ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿರುವವರಿಗೆ ನಗರಸಭೆ ವತಿಯಿಂದ ಪ್ರೋತ್ಸಾಹದಾಯಕವಾಗಿ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!