ನಗರದ ವ್ಯಾಪ್ತಿಯಲ್ಲಿ ನಗರಸಭೆಯ ಸಿಬ್ಬಂದಿಯು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ನಗರದಾದ್ಯಂತ ಕಸ ಕಡ್ಡಿಗಳಿಂದ ತುಂಬಿದ್ದು ಚರಂಡಿಗಳನ್ನು ಹಾಗೂ ಒಳ ಚರಂಡಿಯನ್ನು ಶುಚಿಗೊಳಿಸದೆ ಬಗ್ಗೆ ಹಲವು ಬಾರಿ ನಗರಸಭಾ ಸದಸ್ಯರು ಹಾಗೂ ಸಾರ್ವಜನಿಕರು ನೀಡಿದ ದೂರನ್ನು ಪರಿಗಣಿಸಿಲ್ಲ. ಈ ಬಗ್ಗೆ ಆಕ್ರೋಶಗೊಂಡ ಕೆಲ ನಗರಸಭಾ ಶುಕ್ರವಾರ ನಗರಸಭಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ನಗರದ ಕ್ರೆಸೆಂಟ್ ಶಾಲೆಯ ರಸ್ತೆಯಲ್ಲಿನ ಒಳ ಚರಂಡಿಯ ಮ್ಯಾನ್ಹೋಲ್ ಮುಚ್ಚಳ ಇಲ್ಲದೆ ಕಸಕಡ್ಡಿಗಳಿಂದ ತುಂಬಿದ್ದು ಕೊಳಚೆ ನೀರು ಕಳೆದ 10 ದಿನಗಳಿಂದ ದುರ್ನಾತ ಬೀರುತ್ತಿತ್ತು. ಈ ಬಗ್ಗೆ ನಾಲ್ಕನೇ ವಾರ್ಡಿನ ನಗರಸಭಾ ಸದಸ್ಯ ಲಕ್ಷ್ಮಯ್ಯ ಹಲವು ಬಾರಿ ನಗರಸಭೆಯ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೇ ಕಾರಣ ನಗರಸಭೆ ಅಧಿಕಾರಿಗಳ ಕಾರ್ಯವೈಕರಿಯಿಂದ ಬೇಸತ್ತು ನಗರಸಭಾ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಎಚ್ಚೆತ್ತುಕೊಂಡ ನಗರಸಭೆಯ ಆರೋಗ್ಯಾಧಿಕಾರಿ ದಿಲೀಪ್ ತಕ್ಷಣವೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಒಳ ಚರಂಡಿಯನ್ನು ಸ್ವಚ್ಚಗೊಳಿಸಿ ಮ್ಯಾನ್ಹೋಲ್ ಮುಚ್ಚಳವನ್ನು ದುರಸ್ಥಿಗೊಳಿಸಿದರು. ಆ ನಂತರ ನಗರಸಭೆ ಕಚೇರಿಯ ಬೀಗವನ್ನು ತೆಗೆಯಲಾಯಿತು.
- Advertisement -
- Advertisement -
- Advertisement -