ತಾಲ್ಲೂಕಿನ ಅಜ್ಜಕದಿರೇನಹಳ್ಳಿ ಡೀಮ್ಡ್ ಅರಣ್ಯದ ಬಳಿ ನಾಯಿಗಳ ಆಕ್ರಮಣಕ್ಕೆ ತುತ್ತಾದ ಕೃಷ್ಣಮೃಗದ ಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ.
“ಕೃಷ್ಣಮೃಗದ ಮರಿಯ ಮೇಲೆ ಶನಿವಾರ ನಾಯಿಗಳು ಆಕ್ರಮಣ ಮಾಡಿದ್ದನ್ನು ಕಂಡು ನಮ್ಮ ಇಲಾಖೆಯ ಗಾರ್ಡ್ ವೆಂಕಟರೋಣಪ್ಪ ಮತ್ತು ವಾಚರ್ ಎ.ಪಿ.ನರಸಿಂಹಪ್ಪ ಅದನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಮರಿಗೆ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ನಂತರ ಅದೇ ಅರಣ್ಯದಲ್ಲಿ ಅದನ್ನು ಬಿಟ್ಟಿದ್ದಾರೆ” ಎಂದು ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ತಿಳಿಸಿದ್ದಾರೆ.
- Advertisement -
- Advertisement -
- Advertisement -







