ರಂಜಾನ್ ಮಾಸ ಪ್ರಾರಂಭವಾಗುವುದರಿಂದ ಪೊಲೀಸರು ಮುಸ್ಲಿಂ ಬಾಂಧವರಿಗೆ ಕೊರೊನಾ ಹಿನ್ನೆಲೆಯಲ್ಲಿ ಕೆಲವೊಂದು ಸೂಚನೆಗಳಿರುವ ಕರಪತ್ರವನ್ನು ನಗರದಲ್ಲಿ ಹಂಚುತ್ತಿದ್ದಾರೆ.
ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವಂತಿಲ್ಲ, ಬದಲಿಗೆ ನಿಮ್ಮ ನಿಮ್ಮ ಮನೆಗಳಲ್ಲಿ ಅಂತರವನ್ನು ಕಾಯ್ದುಕೊಂಡು ಮಾಡಿಕೊಳ್ಳುವುದು. ರಂಜಾನ್ ಮಾಸದಲ್ಲಿ ಮಸೀದಿಯಲ್ಲಿ ಕೆಲಸ ಮಾಡುವ ಮೌಜಾನ್ ಅಥವಾ ಇಮಾಮ್ ಅವರು ಬೆಳಗ್ಗೆ ಮಾಡುವ ಸೆಹರಿ ಮುಕ್ತಾಯದ ಸಮಯ ಮತ್ತು ಇಫ್ತಿಯಾರ್ ಪ್ರಾರಂಭದ ಸಮಯವನ್ನು ಕನಿಷ್ಠ ಧ್ವನಿಯಲ್ಲಿ ಧ್ವನಿವರ್ಧಕದಲ್ಲಿ ತಿಳಿಸಬೇಕು. ಧ್ವನಿವರ್ಧಕವನ್ನು ಕೇವಲ ಸಮಯವನ್ನು ತಿಳಿಸಲು ಉಪಯೋಗಿಸಬಹುದೇ ವಿನಃ ನಮಾಜ್ ಮಾಡಲು ಉಪಯೋಗಿಸುವಂತಿಲ್ಲ.
ರಂಜಾನ್ ತಿಂಗಳಲ್ಲಿ ಮೊಹಲ್ಲಾ, ಮಸೀಸಿ, ಮದರಸಾ ಅಥವಾ ದರ್ಗಾಗಳಲ್ಲಿ ಯಾವುದೇ ರೀತಿಯ ಗಂಜಿ, ಜ್ಯೂಸ್, ತಿಂಡಿ ತಯಾರಿಸಿ ವಿತರಿಸುವಂತಿಲ್ಲ. ತಿಂಡಿಗಳ ಅಂಗಡಿಗಳನ್ನು ತೆರೆಯುವಂತಿಲ್ಲ. ಝಕಾತ್ ಸಂಬಂಧ ಮಾಡುತ್ತಿದ್ದ ದಾನಗಳನ್ನು ಜಿಲ್ಲಾಡಳಿತದ ಅನುಮತಿಯಿಲ್ಲದೆ ಮಾಡುವಂತಿಲ್ಲ. ದಾವತ್ ಅಥವಾ ಇಫ್ತಾರ್ ಕೂಟಗಳನ್ನು ಆಯೋಜಿಸುವಂತಿಲ್ಲ ಎಂದು ಕರಪತ್ರದಲ್ಲಿ ಮುದ್ರಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕೋರುತ್ತಿದ್ದಾರೆ.
- Advertisement -
- Advertisement -
- Advertisement -