ಪ್ರತ್ಯಂಗಿರಾ ದೇವಿ ಹಾಗೂ ಶ್ರೀಲಕ್ಷ್ಮೀ ಪೂಜೆ

- Advertisement -
- Advertisement -

ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಲೋಕಕಲ್ಯಾಣಾರ್ಥವಾಗಿ ಶುಕ್ರವಾರ ಪೂರ್ಣಿಮೆಯಂದು ಕೇರಳ ಮಾದರಿಯಲ್ಲಿ ತಾಂತ್ರಿಕ ಪ್ರತ್ಯಂಗಿರಾ ದೇವಿ ಹೋಮ ಹಾಗೂ ಲಕ್ಷ್ಮೀದೇವಿ ಪೂಜೆಯನ್ನು ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ನಡೆಸಿದರು. ಸಾವಿರಾರು ಮಂದಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“ಊರಿಗೆ, ತಾಲ್ಲೂಕಿಗೆ ಹಾಗೂ ಪೂಜೆ ಮಾಡಲಿಚ್ಚಿಸುವ ಜನರಿಗೆ ಅನುಕೂಲವಾಗಲಿ ಮತ್ತು ಸರ್ವರಿಗೂ ಶುಭವಾಗಲಿ ಎಂಬ ಉದ್ದೇಶದಿಂದ ಈ ಬೃಹತ್ ಹೋಮ ಹಾಗೂ ಪೂಜೆಯನ್ನು ಮಾಡುತ್ತಿದ್ದೇವೆ. ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಮದುವೆ ಆಗುವುದಕ್ಕೆ ಅಡೆತಡೆ, ಸ್ವಯಂವರ ಪಾರ್ವತಿ ಲಗ್ನ ದೋಷ ನಿವಾರಣೆ ಆಗುವುದು” ಎಂದು ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ತಿಳಿಸಿದರು.
ಒಣಮೆಣಸಿನಕಾಯಿ ಹೋಮ, ಬಾಳೆ ಬಲಿ, ಜನಶತ್ರು ನಿವಾರಣೆ, ವ್ಯಾಪಾರದಲ್ಲಿ ಅಡೆತಡೆ ನಿವಾರಣೆ, ಲಕ್ಷ್ಮೀ ಆಕರ್ಷಣೆ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ಪೂಜೆಯಲ್ಲಿ ಭಾಗವಹಿಸಿದವರಿಗೆ ಬೆಳ್ಳಿಯ ಶ್ರೀಲಕ್ಷ್ಮೀ ನಾಣ್ಯವನ್ನು ಉಚಿತವಾಗಿ ನೀಡಲಾಯಿತು.
ಪೂಜೆಯಲ್ಲಿ ಭಾಗವಹಿಸಿದ್ದ ದಂಪತಿಗಳು 200 ಗ್ರಾಂ ಒಣಮೆಣಸಿನಕಾಯಿ ಮತ್ತು ಒಂದು ಸಣ್ಣ ಅಣತಿ ತುಪ್ಪದ ದೀಪ ತಂದಿದ್ದರು. ಹೋಮದಲ್ಲಿ ಪೂಜೆಯಲ್ಲಿ ಪಾಲ್ಗೊಂಡವರೆಲ್ಲರೂ ಒಣಮೆಣಸಿನಕಾಯಿಯನ್ನು ಅಗ್ನಿಗೆ ಅರ್ಪಿಸಿದರು. ಮೆಣಸಿನಕಾಯಿಯ ಘಾಟು ಮಾತ್ರ ಇರದಿದ್ದುದು ವಿಶೇಷವಾಗಿತ್ತು.
ಆರ್.ಎನ್.ಆರ್ ಪ್ರಾವಿಜನ್ ಸ್ಟೋರ್ಸ್ ಆರ್.ನಾಗರಾಜ್ ಮಾತನಾಡಿ, ಮೈಸೂರು, ಕೊಳ್ಳೇಗಾಲ, ಚಿಂತಾಮಣಿ, ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ, ಮಾಲೂರು, ಶ್ರೀನಿವಾಸಪುರ, ದೊಡ್ಡಬಳ್ಳಾಪುರ ಮುಂತಾದೆಡೆಗಳಿಂದ ಹೋಮ ಮತ್ತು ಪೂಜೆಗೆ ಆಗಮಿಸಿದ್ದಾರೆ. ನಿಯಮಬದ್ಧವಾಗಿ ಪೂಜೆಯನ್ನು ನಡೆಸಿದ್ದೇವೆ. ಪೂಜೆಯಲ್ಲಿ ಭಾಗವಹಿಸುವವರಿಗೆಲ್ಲಾ ತಿಂಡಿ ಹಾಗೂ ಪ್ರಸಾದವನ್ನು ಸಹ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಪೂಜೆಯಲ್ಲಿ ಭಾಗವಹಿಸಿ ನಮ್ಮ ತಾಲ್ಲೂಕಿಗೆ ಹಾಗೂ ನಾಡಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದಾರೆ” ಎಂದರು.
ಯಾಗದ ಉಸ್ತುವಾರಿ ಆರ್.ಎನ್.ಮನೋಜ್ ಮಾತನಾಡಿ, ನಿರ್ಗುಣ ತತ್ವದಿಂದ ಬಂದ ಅಗಾಧ ಶಕ್ತಿ ದೇವಿಯೆ ಪ್ರತ್ಯಂಗಿರಾ ದೇವಿ. ಈ ದೇವಿಯನ್ನು ಆರಾಧಿಸುವವರಿಗೆ ಯಾವುದೆ ರೀತಿಯ, ಗಂಡಾಂತರವಾಗಲಿ, ಅಪಾಯಗಳಾಗಲಿ, ಶತ್ರು ಬಾಧೆಯಾಗಲಿ ಇಲ್ಲವೆ ಭಯವಾಗಲಿ ಇರುವುದೆ ಇಲ್ಲ ಎಂದರ್ಥ. ಅಷ್ಟು ಮಹತ್ವ ಪಡೆದಿರುವ ದೇವಿ ಪ್ರತ್ಯಂಗಿರಾ ದೇವಿಯ ಹೋಮ ಮತ್ತು ಪೂಜೆಯನ್ನು ಸರ್ವರ ಒಳಿತಿಗಾಗಿ ಉಚಿತವಾಗಿ ಆಯೋಜಿಸಿರುವ ಉದ್ದೇಶ ಊರಿಗೆ, ತಾಲ್ಲೂಕಿಗೆ ಮತ್ತು ನಾಡಿಗೆ ಒಳ್ಳೆಯದಾಗಲಿ ಎಂಬುದಾಗಿದೆ ಎಂದರು.
ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ಅವರನ್ನು ಸನ್ಮಾನಿಸಲಾಯಿತು. ಪಟಾಕಿ ಸಿಡಿಸುವ ಮೂಲಕ ಪೂಜೆ ಮತ್ತು ಹೋಮದ
ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಬಿ.ಸಿ.ನಂದೀಶ್, ಮುಖೇಶ್, ಮಂಜುನಾಥ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!