ಜನಸಾಮಾನ್ಯನಿಗೆ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ತಿಳಿಸುವ ಕೃತಿಯೆ ವಚನ ಸಾಹಿತ್ಯ. ವಚನ ಸಾಹಿತ್ಯ ಕನ್ನಡವನ್ನು ಉಳಿಸುವಲ್ಲಿ ಮತ್ತು ಬೆಳೆಸುವಲ್ಲಿ ಕ್ರಾಂತಿಯನ್ನು ಮಾಡಿದೆ. ಕಾರ್ಯಕ್ಕೆ ಮಹತ್ವ ಹೊರತು ಅವರ ಜಾತಿ ಮಹತ್ವದಲ್ಲ ಎಂಬ ಬಸವಣ್ಣನವರ ತತ್ವಗಳನ್ನು ವಿವರಿಸಿದರು. ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯ ಹೆಚ್ಚು, ಮಹಿಳಾ ಸ್ವಾತಂತ್ರ್ಯ, ಅಂತರ್ಜಾತಿ ವಿವಾಹಕ್ಕೆ ಈ ಮೂಲಕ ಪ್ರೋತ್ಸಾಹಿಸಿದ್ದಾರೆ ಎಂದು ತಹಶೀಲ್ದಾರ್ ಅಜಿತ್ಕುಮಾರ್ ರೈ ತಿಳಿಸಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ‘ವಚನ ಸಾಹಿತ್ಯ ಸಿಂಚನ’ ಕಾರ್ಯಕ್ರಮದ ಅಡಿಯಲ್ಲಿ ಗುರುವಾರ ರಾತ್ರಿ ಷರಾಫ್ ರಸ್ತೆಯಲ್ಲಿರುವ ರೂಪಸಿ ರಮೇಶ್ ಅವರ ಮನೆಯಲ್ಲಿ ನಡೆದ ಯುಗಾದಿಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಚ್ಛ ಕುಲದವರ ಸ್ವತ್ತೆಂದು ಪರಿಗಣಿಸಿದ್ದ ಸಂಸ್ಕೃತದ ಸೋಂಕಿಲ್ಲದೆ, ಪ್ರಾಸ, ಛಂದಸ್ಸುಗಳ ಸೋಂಕಿಲ್ಲದೆ ನಾಡಿನ ಜನರ ಆಡುಭಾಷೆಯಾದ ಕನ್ನಡದಲ್ಲಿಯೇ ಸೀದಾ ಸಾದಾ ನೇರ ನುಡಿಗಳಲ್ಲಿ ರಚಿತವಾದವುಗಳು ಶಿವ ಶರಣರ ವಚನಗಳು. ಈ ವಚನಗಳು ಕೇವಲ ದೇವರು, ದಿಂಡಿರುಗಳ ಬಗ್ಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳ ಎಳೆಗಳನ್ನು ವಚನಕಾರರ ವಚನಗಳುಮಾರ್ಮಿಕವಾಗಿ ತಿಳಿಸಿವೆ. ಇವನ್ನು ಮನೆಯಂಗಳಕ್ಕೆ ಸೀಮಿತಗೊಳಿಸದೆ ಶಾಲಾ ಕಾಲೇಜುಗಳಿಗೆ ಕೊಂಡೊಯ್ಯಿರಿ. ಮುಂದಿನ ಜನಾಂಗಕ್ಕೆ ವಚನಗಳನ್ನು ಪರಿಚಯಿಸಿ ಎಂದು ಹೇಳಿದರು.
ಕವಿಗಳಾದ ಪ್ರಕಾಶ್, ಗಜೇಂದ್ರ, ವೇಣುಗೋಪಾಲ್, ವೆಂಕಟೇಶಪ್ಪ, ನರಸಿಂಹರಾಜು, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಚನ್ನಕೃಷ್ಣ, ಅನಂತಲಕ್ಷ್ಮಿ, ಸ್ವರ್ಣಲತಗುಪ್ತ, ಗಂಗರಾಜು, ಪುರುಷೋತ್ತಮ, ರೂಪ, ಅನುರಾಧ, ಸುಂದರಾಚಾರಿ ಕವನ ವಾಚಿಸಿದರು.
ವಚನ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಮಹಮ್ಮದ್ಖಾಸಿಂ, ಶ್ರೀಕಾಂತ್, ಶ್ರೀರಾಮಯ್ಯ, ವೆಂಕಟಸ್ವಾಮಿ, ಕೆಂಪರೆಡ್ಡಿ, ನಂದಕಿಶನ್, ನಂದೀಶ್, ಪುರುಷೋತ್ತಮ್, ಶಹನಾಜ್ಬೇಗ್, ರಾಮಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -