ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಹಾಗೂ ಭಗತ್ ಸಿಂಗ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್ ಮಾತನಾಡಿದರು.
ಹಾಕಿ ಕ್ರೀಡೆಯಲ್ಲಿ ಭಾರತ ದೇಶಕ್ಕೆ ಚಿನ್ನದ ಪದಕವನ್ನು ಪಡೆದು ಭಾರತದ ಕೀರ್ತಿಯನ್ನು ಧ್ಯಾನ್ ಚಂದ್ ಹೆಚ್ಚಿಸಿದ್ದಾರೆ. ಅವರ ಹಾದಿಯಲ್ಲಿ ಯುವ ಪೀಳಿಗೆ ಸಾಗಲಿ ಎಂಬ ಉದ್ದೇಶದಿಂದ ಶಿಡ್ಲಘಟ್ಟ ನೆಹರೂ ಕ್ರೀಡಾಂಗಣ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಅಧಿಕಾರಿಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ರಾಷ್ಟ್ರೀಯ ಕ್ರೀಡಾ ಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಮಾತನಾಡಿ, ಮೇಜರ್ ಧ್ಯಾನ್ ಚಂದ್ ರವರ ಬದುಕು ಮತ್ತು ಸಾಧನೆಯ ಕುರಿತು ವಿವರಿಸಿದರು. 1956 ರಿಂದ ಆಗಸ್ಟ್ 29 , ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಭಾರತ ಸರ್ಕಾರ ಆಚರಿಸುತ್ತಿದೆ. ಇಂದಿಗೂ ಧ್ಯಾನ್ ಚಂದ್ ರವರ ಸಾಧನೆ ಅವರ ದೇಶ ಪ್ರೇಮ ಪ್ರತಿಯೊಬ್ಬರಿಗೂ ಪ್ರೇರಣೆ. ಶಿಡ್ಲಘಟ್ಟ ತಾಲ್ಲೂಕು ನಿಂದ ಉತ್ತಮ ಹಾಕಿ ಕ್ರೀಡಾಪಟುಗಳು ತಯಾರಾಗಲಿ ಎಂದು ಕರೆ ಕೊಟ್ಟರು.
ನೆಹರೂ ಕ್ರೀಡಾಂಗಣ ಸಮಿತಿಯ ಉಪಾಧ್ಯಕ್ಷ ಟಿ.ಟಿ ನರಸಿಂಹಪ್ಪ, ವಸಂತ್ ಕುಮಾರ್, ಶಿವಪ್ಪ, ಮುರಳಿ, ಹಪೀಜುಲ್ಲಾ, ತಾಲ್ಲೂಕು ಪಂಚಾಯತ್ ಸದಸ್ಯೆ ಪಂಕಜ ನಿರಂಜನ್, ಶಿಕ್ಷಕಿ ದಾಕ್ಷಾಯಿಣಿ, ಸಂತೋಷ್, ಜಯರಾಮ್, ಗಿರೀಶ್ ಬಾಬು, ಬಾಲಕೃಷ್ಣ, ತಾಜ್ ಪಾಷ, ರಾಜ್ ಕುಮಾರ್, ಪ್ರಸಾದ್, ಅಜೀಬ್ ಪಾಷ ಹಾಜರಿದ್ದರು.
- Advertisement -
- Advertisement -
- Advertisement -







