ತಾಲ್ಲೂಕಿನ ದೇವರಮಳ್ಳೂರು ಮತ್ತು ಕುತ್ತಾಂಡಹಳ್ಳಿ ಗ್ರಾಮಗಳ ನಡುವೆ ಮುಚ್ಚಿಹೋಗಿದ್ದ ರಸ್ತೆಯನ್ನು ಸರಿಪಡಿಸುವ ಸಮಯದಲ್ಲಿ ಅಡ್ಡಿಪಡಿಸಿದ ರೈತರ ಮನವೊಲಿಸಿದ ತಹಶೀಲ್ದಾರ್ ಅಜಿತ್ ಕುಮಾರ್ ರೈ ರಸ್ತೆ ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟರು.
ದೇವರಮಳ್ಳೂರು ಕೆರೆಯಲ್ಲಿ ತಾಲ್ಲೂಕು ಆಡಳಿತದಿಂದ ಹೂಳನ್ನು ತೆಗೆಯುತ್ತಿದ್ದು, ಹೂಳಿನ ಮಣ್ಣನ್ನು ಮುಚ್ಚಿಹೋಗಿದ್ದ ರಸ್ತೆಯನ್ನು ಸರಿಪಡಿಸುವ ಕೆಲಸಕ್ಕೆ ಬಳಸಲಾಗುತ್ತಿದೆ. ಆ ಮಾರ್ಗದ ಅಕ್ಕಪಕ್ಕದ ಕೆಲವು ರೈತರು ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಕೈಜೋಡಿಸಲು ಮನವಿ ಮಾಡಿದ ತಹಶೀಲ್ದಾರರು, ಎರಡೂ ಬದಿಯ ರೈತರಿಗೆ ವಸ್ತುಸ್ಥಿತಿಯನ್ನು ವಿವರಿಸಿದರು. ರಸ್ತೆಯಿದ್ದರೆ ಎಲ್ಲರಿಗೂ ಅನುಕೂಲಕರವೆಂದು ಅರ್ಥಮಾಡಿಸಿದರು. ಅಗಲವಾದ ರಸ್ತೆ ನಿರ್ಮಿಸಲು ತಹಶೀಲ್ದಾರ್ ಅವರು ರೈತರ ಒಪ್ಪಿಗೆ ಪಡೆದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಭೂ ಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, ಪಿಡಿಒ ರಮಾಕಾಂತ್, ರೈತರು ಹಾಜರಿದ್ದರು.