ನಗರಸಭಾ ಚುನಾವಣೆಗೆ ಸಂಬಂಧಿಸಿದಂತೆ ಹೊಸ ಟೌನ್ ವಾರ್ಡುಗಳ ವಿಂಗಡನೆಯಲ್ಲಿ ವ್ಯಾತ್ಯಾಸಗಳಾಗಿವೆ. ಮತದಾರರ ಪಟ್ಟಿಯಲ್ಲಿ ಆಯಾ ವಾರ್ಡ್ ನಲ್ಲಿ ವಾಸವಾಗಿರುವ ಜನರ ಹೆಸರು ಕೈಬಿಟ್ಟು ಬೇರೆಡೆ ವಾಸಿಸುವವರ ಹೆಸರು ಸೇರಿಸಲಾಗಿರುವುದನ್ನು ಸರಿಪಡಿಸಿ ಎಂದು ಮನವಿಯನ್ನು ನಾಗರಿಕ ಸಂರಕ್ಷಣಾ ಸೇವಾ ಸಮಿತಿ ಸದಸ್ಯರು ಚುನಾವಣಾಧಿಕಾರಿ ಸಿದ್ದಪ್ಪ ಅವರಿಗೆ ಬುಧವಾರ ಸಲ್ಲಿಸಿದರು.
ಆಯಾ ವಾರ್ಡಿನಲ್ಲಿ ವಾಸಿಸುವವರು ಮಾತ್ರ ಆಯಾ ವಾರ್ಡಿನ ಮತದಾರರ ಪಟ್ಟಿಯಲ್ಲಿರಬೇಕು. ಬೇರೆಡೆ ವಾಸಿಸುವವರು ಇರಬಾರದು. ಆಯಾ ವಾರ್ಡಿನಲ್ಲಿ ಇರುವ ಜಾತಿಯ ಆಧಾರದ ಮೇಲೆ ಮೀಸಲಾತಿಯನ್ನು ನೀಡಬೇಕು. ನಗರಸಭೆ ವ್ಯಾಪ್ತಿಗೆ ಸೇರಿದ ಹೊಸಟೌನ್ ನ ವಾರ್ಡುಗಳಾದ ೨೬, ೨೦, ೧೮, ೧೯, ೨೯, ೧೬, ೧೪, ೨೭, ೨೫, ೨೪, ೧೭, ೧೫ ಮುಂತಾದ ವಾರ್ಡುಗಳಲ್ಲಿ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಾಗಿವೆ. ಬೇರೆಡೆ ವಾಸಿಸುವವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಸೇರಿಸಲ್ಪಟ್ಟಿದೆ. ವಾರ್ಡುಗಳ ವಿಂಗಡನೆ ಮಾಡುವಾಗಲೂ ಮತದಾರರ ಹೆಸರುಗಳ ವ್ಯಾತ್ಯಾಸವಾಗಿದೆ. ವಾರ್ಡುಗಳ ಪ್ರಕಾರ ಮಾಡಬೇಕಾದ ಮೀಸಲಾತಿ ಪ್ರಕ್ರಿಯೆಯಲ್ಲೂ ಬದಲಾವಣೆಗಳಾಗಿವೆ. ಆದ್ದರಿಂದ ಆಯಾ ವಾರ್ಡ್ ಗಳಲ್ಲಿ ವಾಸವಾಗಿರುವ ಮತದಾರರ ಹೆಸರು ಆಯಾ ವಾರ್ಡಿನ ಮತದಾರರ ಪಟ್ಟಿಗೆ ಸೇರಿಸಿ ಹಾಗೂ ಮೀಸಲಾತಿ (ಕ್ಯಾಟಗರಿ) ಯನ್ನು ಸರಿಪಡಿಸಿ ಎಂದು ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಸ್ವೀಕರಿಸಿದ ಚುನಾವಣಾಧಿಕಾರಿ ಸಿದ್ದಪ್ಪ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ನ್ಯೂನತೆಗಳನ್ನು ಸರಿಪಡಿಸುವುದಾಗಿ ತಿಳಿಸಿದರು.
ನಾಗರಿಕ ಸಂರಕ್ಷಣಾ ಸೇವಾ ಸಮಿತಿ ಅಧ್ಯಕ್ಷ ಆರ್.ನಾಗರಾಜಪ್ಪ, ಉಪಾಧ್ಯಕ್ಷ ಬಿ.ಅಂಜದ್ ಪಾಷ, ಕಾರ್ಯದರ್ಶಿ ಫೀರ್ ಪಾಷ(ಬಾಬು), ಮೌಲಾ, ನಾಸಿರ್, ಷಫೀವುಲ್ಲ, ಜಾದಿರ್ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







