ವಿದ್ಯುತ್ ಶಾಕ್‌ನಿಂದ ಯುವಕ ಸಾವು : ಬೆಸ್ಕಾಂ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ

0
458

ನಗರದ ವಾಸಿ ಶಶಿಕುಮಾರ್(23) ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದು ಬೆಸ್ಕಾಂನ ಅಧಿಕಾರಿಗಳ ನಿರ್ಲಕ್ಷ್ಯ ದಿಂದಲೆ ಸಾವು ಸಂಭವಿಸಿದ್ದು ಪರಿಹಾರ ನೀಡುವಂತೆ ಬೆಸ್ಕಾಂ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.
ನಗರದ ಕುರುಬರ ಪೇಟೆ ವಾಸಿ ಶಶಿಕುಮಾರ್ ಮಂಗಳವಾರ ಬೆಳಗ್ಗೆ ದಿಬ್ಬೂರಹಳ್ಳಿ ಬೈಪಾಸ್‌ನ ಕೆರೆ ಅಂಚಿನಲ್ಲಿ ಇರುವ ತನ್ನ ತೋಟಕ್ಕೆ ತೆರಳಿದ್ದು ಅಲ್ಲಿ ವಿದ್ಯುತ್ ಕಂಬದ ಗೈ ವೈರ್‌ನಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ.
ಇದರಿಂದ ಕುಪಿತಗೊಂಡ ಮೃತನ ಕುಟುಂಬದವರು, ಅವರ ಬೆಂಬಲಿಗರು ಹಾಗೂ ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು ಶವವನ್ನು ಬೆಸ್ಕಾಂ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇನ್ನೂ ಸಹ ಕಬ್ಬಿಣದ ವಿದ್ಯುತ್ ಕಂಬಗಳು ಇದ್ದು ಅವುಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ಪ್ರವಹಿಸಿ ಹಲವರು ಪ್ರಾಣಕ್ಕೂ ಕಂಟಕವಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.
ಕೂಡಲೆ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆಗೆದು ಸಿಮೆಂಟ್ ಕಂಬಗಳನ್ನು ಅಳವಡಿಸಬೇಕು, ಮೃತಪಟ್ಟ ಶಶಿಕುಮಾರ್ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಬೆಸ್ಕಾಂನ ಎಇಇ ಅನ್ಸರ್‌ಪಾಷ ಮಾತನಾಡಿ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇರುವ ಕಬ್ಬಿಣದ ಕಂಬಗಳನ್ನು ಕೂಡಲೆ ತೆಗೆಸಲು ಕ್ರಮ ತೆಗೆದುಕೊಳ್ಳುತ್ತೇನೆ ಹಾಗೂ ಮೃತರ ಕುಟುಂಬಕ್ಕೆ ಇಲಾಖೆಯಿಂದ ಸಿಗುವ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದರು.
ಆಹಾರ ನಿಗದಮ ನಿರ್ದೆಶಕ ಎ.ನಾಗರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ಬಿಜೆಪಿ ರೈತ ಮೋರ್ಚದ ಮಂಜುಳಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!