ಶಿಡ್ಲಘಟ್ಟದ 18ನೇ ವಾರ್ಡ್ ಟಿ.ಎಂ.ಸಿ ಕಾಲೋನಿಯಲ್ಲಿ ಸುರೇಶ್ ಮತ್ತು ರಮೇಶ್ ಸಹೋದರರಿಗೆ ಸೇರಿರುವ ದಿನಸಿ ಅಂಗಡಿ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾಗಿದ್ದು, ಸುಮಾರು 3-4 ಲಕ್ಷ ಮೊತ್ತದ ದಿನಸಿ ಪದಾರ್ಥಗಳು ಹಾಗೂ ಉಪಕರಣಗಳು ನಾಶವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಎಸ್ ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಅಂಜಿನಪ್ಪ ಪುಟ್ಟು, ಹಾನಿಗೊಳಗಾದ ಅಂಗಡಿ ಮಾಲೀಕರಿಗೆ 25 ಸಾವಿರ ರೂಗಳ ಹಣದ ಚೆಕ್ ನೀಡಿದರು.