ತಾಲ್ಲೂಕು ಆಡಳಿತದಿಂದ ತಾಲ್ಲೂಕು ಕಚೇರಿಯಲ್ಲಿ “ಕಂಟ್ರೋಲ್ ರೂಮ್” ತೆರೆಯಲಾಗಿದೆ. ಹೆಲ್ಪ್ ಲೈನ್ ಸಂಖ್ಯೆ – 08158 256763 ಆಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಕೊರೊನಾಗೆ ಸಂಬಂಧಿಸಿದಂತೆ ಏನೇ ತೊಂದರೆಗಳು ಆದರೂ ದೂರವಾಣಿ ಮೂಲಕ ಕರೆ ಮಾಡಿ ಪರಿಹಾರ ಕಂಡುಕೊಳ್ಳುವಂತೆ ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ಶನಿವಾರ “ಕಂಟ್ರೋಲ್ ರೂಮ್” ಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ “ಕಂಟ್ರೋಲ್ ರೂಮ್” ತೆರೆಯಲಾಗಿದ್ದು, ಹೆಲ್ಪ್ ಲೈನ್ ದೂರವಾಣಿ ಸಂಖ್ಯೆಯನ್ನು ನೀಡುತ್ತಿದ್ದೇವೆ. ಯಾವುದೇ ರೀತಿಯ ಕುಂದುಕೊರತೆಗಳು, ಅಗತ್ಯ ವಸ್ತುಗಳು ಮುಂತಾದವುಗಳ ಬಗ್ಗೆ ತಿಳಿಸಿ ಸೇವೆ ಪಡೆಯಬಹುದು. ಕೊರೊನಾ ಸೋಂಕಿನ ರೋಗಲಕ್ಷಣಗಳು ನಿಮ್ಮ ನೆರೆಹೊರೆಯವರಲ್ಲಿ ಕಂಡುಬಂದಲ್ಲಿ ತಿಳಿಸಬಹುದು. ಹೊರಗಡೆಯಿಂದ ಯಾರೇ ಹೊಸಬರು ಬಂದಲ್ಲಿ ತಿಳಿಸಿ. ನಿಮ್ಮ ಪ್ರದೇಶದಲ್ಲಿ ನಾಕ್ ಔಟ್ ಅಥವಾ ಕರ್ಫ್ಯೂ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಮಾಹಿತಿ ಕೊಡಿ. ಅಶಕ್ತರು, ವೃದ್ಧರು ಅಥವಾ ಸಹಾಯದ ಅಗತ್ಯವಿರುವವರು ಏನೇ ವಸ್ತುಗಳು ಬೇಕಿದ್ದರೂ ಫೋನ್ ಮಾಡಿ ತಿಳಿಸಿ, ಸೇವಾ ಮನೋಭಾವವುಳ್ಳ ವಿವಿಧ ಸಂಘಟನೆಗಳ ಸದಸ್ಯರ ನೆರವನ್ನು ಪಡೆದು ನೆರವು ನೀಡಲಾಗುವುದು ಎಂದು ಹೇಳಿದರು.
ನಗರಸಭೆಯವರಿಂದ ನಿಶ್ಶಕ್ತರು, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಇಂದಿರಾ ಕ್ಯಾಂಟೀನಿನಲ್ಲಿ ಊಟದ ವ್ಯವಸ್ಥೆ ಮಾಡಿಕೊಡಲಾಗಿದೆ. ಶಿಡ್ಲಘಟ್ಟದ ನಾಲ್ಕು ಕಡೆಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ತರಕಾರಿ, ಹಣ್ಣು, ಹೂವು, ದಿನಸಿ ಸಾಮಾನುಗಳನ್ನು ಜನರು ಕೊಳ್ಳಬಹುದು. ಅದೇ ರೀತಿ ಪ್ರತಿಯೊಂದು ವಾರ್ಡುಗಳಲ್ಲಿಯೂ ತಳ್ಳುವ ಗಾಡಿಗಳಿಗೆ ಜಾಗ ಗುರುತಿಸಿ ಕೊಟ್ಟಿದ್ದೇವೆ. ಅಲ್ಲಿ ಜನರು ಕೊಳ್ಳಬಹುದು. ಮನೆಯಿಂದ ಒಬ್ಬರು ಮಾತ್ರ ಹೋಗಿ ಹಾಗೂ ಇತರರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದರು.
ನಗರಸಭೆಯ ವತಿಯಿಂದ ಸ್ವಯಂ ಸೇವಕರ ಪಡೆಯನ್ನು ಸಿದ್ಧಮಾಡಿಕೊಳ್ಳಲಾಗಿದೆ. ಹಿರಿಯ ನಾಗರೀಕರು, ಅಶಕ್ತರು, ಅಗತ್ಯವಿರುವವರಿಗೆ ಅವರು ನೆರವಾಗಲಿದ್ದಾರೆ. ತರಕಾರಿ, ಔಷಧಿ, ಮುಂತಾದ ಅಗತ್ಯ ವಸ್ತುಗಳನ್ನು ಸಹ ಅವರು ತಂದುಕೊಡುವರು. ಕೆಲವು ಔಷಧಿ ಅಂಗಡಿಗಳವರು ಮನೆಗೆ ಔಷಧಿಗಳನ್ನು ಕಳುಹಿಸಿಕೊಡಲು ಕೂಡ ಸಿದ್ಧರಿದ್ದಾರೆ ಎಂದರು
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







