ಸಾಧಕರನ್ನು ಕಡೆಗಣಿಸಿದರೆ ದ.ಸಂ.ಸ ವತಿಯಿಂದ ತಮಟೆ ಚಳುವಳಿ

- Advertisement -
- Advertisement -

ತಾಲ್ಲೂಕು ಕಸಾಪ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ರಾಜ್ಯಮಟ್ಟದ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆಯ ಸಂಘಟನಾ ಸಂಚಾಲಕ ಟಿ.ಎ.ಚಲಪತಿ ಮತ್ತು ಜಿಲ್ಲಾ ಸಂಚಾಲಕ ಸಿ.ಎಂ.ಮುನಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ದಲಿತ ಸಂಘರ್ಷ ಸಮಿತಿ ಸದಸ್ಯರು, ಈ ಬಾರಿ ನಡೆಯಲಿರುವ ತಾಲ್ಲೂಕು ಕಸಾಪ ಸಮ್ಮೇಳದ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸಾಧಕರನ್ನು ಗುರುತಿಸಬೇಕು. ತಾಲ್ಲೂಕಿಗಲ್ಲದೆ ರಾಜ್ಯಕ್ಕೇ ಕೀರ್ತಿ ತಂದ ಪಿಂಡಿಪಾಪನಗಳ್ಳಿ ಗ್ರಾಮದ ನಾಡೋಜ ಮುನಿವೆಂಕಟಪ್ಪ, ಹಿತ್ತಲಹಳ್ಳಿಯ ಕೃಷಿ ಪಂಡಿತ ಗೋಪಾಲಗೌಡ, ಐಎಎಸ್ ಅಧಿಕಾರಿ ನಾಗಮಂಗಲದ ಎನ್.ಸಿ.ಮುನಿಯಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಒಂಭತ್ತು ಪುಸ್ತಕಗಳನ್ನು ಬರೆದಿರುವ ಸುಂಡ್ರಹಳ್ಳಿ ಶ್ರೀನಿವಾಸಮೂರ್ತಿ, ದೇವರಮಳ್ಳೂರಿನ ರಂಗಭೂಮಿ ಕಲಾವಿದೆ ಯಶೋಧಮ್ಮ, ನಿವೃತ್ತ ಪ್ರಾಂಶುಪಾಲ ಮಿಹಮ್ಮದ್ ಖಾಸಿಂ ಅವರಲ್ಲೊಬ್ಬರನ್ನು ಅವರ ಸಾಧನೆ ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಕಸಾಪ ತಾಲ್ಲೂಕು ಅಧ್ಯಕ್ಷರು ಮತ್ತು ಪಸಾಧಿಕಾರಿಗಳು ಆಯ್ಕೆ ಮಾಡಬೇಕು.
ತಾಲ್ಲೂಕಿನ ಸಾಧಕರನ್ನು ಕಡೆಗಣಿಸಿದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!