24.1 C
Sidlaghatta
Wednesday, December 24, 2025

ಹಳೆಯ ಮರವೊಂದನ್ನು ರಾತ್ರೋ ರಾತ್ರಿ ಕತ್ತರಿಸಿರುವ ದುಷ್ಕರ್ಮಿಗಳು

- Advertisement -
- Advertisement -

ನಗರದ ಬಸ್ ನಿಲ್ದಾಣದ ಬಳಿ ಹಳೆಯ ಮರವೊಂದನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು ಮುವ್ವತ್ತು ವರ್ಷಗಳಿಂದ ಈ ಮರ ನೆರಳು ನೀಡುತ್ತಿತ್ತು. ಕೆಲವು ಜನಪ್ರತಿನಿಧಿಗಳ ಸಹಕಾರದಿಂದ ಸೇರಿ ಈ ಸ್ಥಳವನ್ನು ಆಕ್ರಮಿಸುವ ಹುನ್ನಾರದಿಂದ ಹಳೆಯ ಮರವನ್ನು ರಾತ್ರಿ ಕತ್ತರಿಸಿದ್ದಾರೆ. ಎಲ್ಲೆಡೆ ಪರಿಸರ ಉಳಿಸಿ, ಮರ ಬೆಳೆಸಿ ಎಂದು ಆಂದೋಲನ ನಡೆಸಿದ್ದರೆ, ನಮ್ಮಲ್ಲಿ ಜನನಿಬಿಡ ಪ್ರದೇಶದಲ್ಲಿ ಬಸ್ ನಿಲ್ದಾಣದ ಬಳಿ ಮರವನ್ನು ಕಡಿದರೂ ಇದುವರೆಗೂ ಅರಣ್ಯ ಇಲಾಖೆಯವರಾಗಲೀ ಅಥವಾ ನಗರಸಭೆಯವರಾಗಲೀ ಕ್ರಮ ಕೈಗೊಂಡಿಲ್ಲ. ಈ ಸ್ಥಳವನ್ನು ಆಕ್ರಮಿಸಲು ನಡೆಸಿರುವ ಹುನ್ನಾರವಿದು ಎಂದು ಸ್ಥಳೀಯ ಆಟೋ ಚಾಲಕರು, ವ್ಯಾಪಾರ ವಹಿವಾಟು ನಡೆಸುವವರು ದೂರಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಅಪ್ಪು, ನಾರಾಯಣಸ್ವಾಮಿ, ಶಂಕರ, ರಾಜು, ಪ್ರಕಾಶ್, ಶಿವಣ್ಣ, ಅಶ್ವತ್ ಹಾಜರಿದ್ದರು.
 

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!