18.1 C
Sidlaghatta
Sunday, February 15, 2026

ಹಿಪ್ಪುನೇರಳೆ ತೋಟಕ್ಕೆ ದುಷ್ಕರ್ಮಿಗಳಿಂದ ಔಷಧಿ ಸಿಂಪಡಣೆ

- Advertisement -
- Advertisement -

ಒಂದು ಕಡೆ ತೀವ್ರ ಬರಗಾಲ, ಮತ್ತೊಂದು ಕಡೆ 1500 ಅಡಿಗಳು ಕೊರೆದರೂ ಒಂದಿಂಚು ನೀರು ಸಿಗದಂತಹ ಸಂಧಿಗ್ದ ಪರಿಸ್ಥಿತಿ, ಲಕ್ಷಾಂತರ ರೂಪಾಯಿಗಳನ್ನು ಕೊಳವೆಬಾವಿಗಳಿಗೆ ಖರ್ಚು ಮಾಡುತ್ತಿರುವ ರೈತರು, ನೀರಿನ ಕೊರತೆಯಿಂದಾಗಿ ರೇಷ್ಮೆ ಉದ್ಯಮದಿಂದಲೇ ಬಹಳಷ್ಟು ರೈತರು ಉದ್ಯವiದಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಅಲ್ಪಸ್ವಲ್ಪ ನೀರಿನಲ್ಲೆ ಕಷ್ಟಪಟ್ಟು ಬೆಳೆದಿದ್ದ ಹಿಪ್ಪುನೇರಳೆ ತೋಟಕ್ಕೆ ದುಷ್ಕರ್ಮಿಗಳು ಔಷಧಿ ಸಿಂಪಡಣೆ ಮಾಡಿರುವುದರ ಪರಿಣಾಮವಾಗಿ ಸುಮಾರು 500 ಮೊಟ್ಟೆಯಷ್ಟು ರೇಷ್ಮೆಹುಳು ನಷ್ಟವಾಗಿದೆ ಎಂದು ರೇಷ್ಮೆ ಬೆಳೆಗಾರ ಕರಗಪ್ಪ ಆರೋಪಿಸಿದ್ದಾರೆ.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ರೈತ ದೊಡ್ಡಪಾಪಣ್ಣ ಎಂಬುವವರಿಗೆ ಸೇರಿದ ಹಿಪ್ಪುನೇರಳೆ ತೋಟಕ್ಕೆ ದುಷ್ಕರ್ಮಿಗಳು ಔಷಧಿಗಳನ್ನು ಸಿಂಪಡಣೆ ಮಾಡಿದ್ದಾರೆ. ತೋಟದಲ್ಲಿದ್ದ ಹಿಪ್ಪುನೇರಳೆ ಸೊಪ್ಪನ್ನೆ ಇದುವರೆಗೂ ಹುಳುಗಳಿಗೆ ನೀಡಿದ್ದೇವೆ. ಹುಳುಗಳು 3 ಜ್ವರವೆದ್ದು ಸೊಪ್ಪು ತಿನ್ನುತ್ತಿದ್ದವು. ಈಗ ಔಷಧಿ ಸಿಂಪಡಣೆ ಮಾಡಿರುವ ಸೊಪ್ಪನ್ನು ತಿಂದ ಮೇಲೆ ಹುಳುಗಳೆಲ್ಲಾ ಸೊಪ್ಪಿನ ಕೆಳಗೆ ಹೋಗಿ ಸಾಯುತ್ತಿವೆ. ಕೆಲ ಹುಳುಗಳು ಬಣ್ಣವೇ ಬದಲಾಗಿ ವಾಂತಿ ಮಾಡಿಕೊಂಡು ಸಾಯುತ್ತಿವೆ. ಇದರಿಂದ ಸುಮಾರು 4 ಲಕ್ಷದವರೆಗೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!